ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರವಳಿ ಇmmmwwwsw MMwwwmmmmmmmmmmmmmm ಕಾರಿಗಳಾದ ವಸ್ತುಗಳನ್ನು ಸೇವಿಸುವುದರಿಂದ ದೇಹಸ್ಥಿತಿಯು ಕಟ್ಟು ಹೋಗಿ ಕಡೆಗೆ ಗಣಹಾನಿಯಾಗುವ ಸಂಭವವೂ ಉಂಟು. ಜೂಜು, ಸಾಲ ಮೊದಲಾದ ಕೆಲವು ಅಂಶಗಳು ಮೊದಲುಮೊದಲು ಪ್ರಿಯವಾಗಿಕಂಡುಬಂದರೂ ಪರಿಣಾಮದಲ್ಲಿ ಅವುಗಳಿಂದ ಎಂಥ ಅನರ್ಥಗ ಳುಂಟಾಗುವುದೆಂಬುದನ್ನು ಯೋಚಿಸಿ ಅವಕ್ಕೆ ಆಸ್ಪದ ಕೊಡದಂತೆ ಮನಸ್ಸನ್ನು ಬಿಗಿಹಿಡಿದು ನಡೆಯಬೇಕು. ಮನಸ್ಸು ಕೋಪತಾಪಗಳಿಗೆ ಪ್ರವರ್ತಿಸತೊ ಡಗಿದಾಗಲೂ ಹೀಗೆಯೇ ಅದನ್ನು ತಡೆಯಬೇಕು, ಈ ರೀತಿಯಾಗಿ ಮನ ಸ್ಪನ್ನು ದುರಾರ್ಗಗಳ ಕಡೆಗೆ ಬಿಡದೆ ತಡೆಯುವುದೇ ಆತ್ಮನಿಗ್ರಹ ಅಥವಾ ಆತ್ಮಸಂಯಮನ ವೆನಿಸುವುದು, ಯಾರು ಹಾಗೆ ತಮ್ಮ ನ ತಾವು ಹದ್ದಿನ ಲಿಟ್ಟು ಕೊಳ್ಳಬಲ್ಲರೋ ಅಂಥವರು ಯಾವ ಇತ 'ನಾದ ವಶದಲ್ಲಿ ಟ್ಟು ಕೊಳ್ಳಬಲ್ಲರು. ಕೆಲವು ಸಮಯಗಳಲ್ಲಿ ಏನಾದರೂ ಕೆಲಸಮಾಡಬೇಕಾದಾಗ ಅದನ್ನು ಮಾಡೋಣವೇ ಬೇಡವೆ ಎಂಬ ಸಂಶಯವುಂಟಾಗ.ವುದು, ಅಂಥ ಸಂದರ್ಭಗಳಲ್ಲಿ ಕೆಲವರು ಇತರರು ಹೇಗೆ ಹೇಳಿದರೆ ಹಾಗೆ ನಡೆಯುತ್ತಾರೆ. ಆದರೆ ನನಗೆ ಸಲಹೆ ಹೇಳತಕ್ಕವರು ನಮಗಿಂತ ಯೋಗ್ಯರೂ ತಿಳದವರೂ ನಮಗೆ ಆಪ್ತರೂ ಆಗಿದ್ದರೆ ಅಂಥವರ ಮಾತನ್ನು ಆವಶ್ಯಕವಾಗಿ ಕೇಳು ವುದೇಯುಕ್ತವು, ಆದರೆ ಯಾವಾಗಲೂ ಎಲ್ಲಿಯೂ ಎಲ್ಲರಿಗೂ ಅಂಥ ಹಿತಚಿಂತಕರಾದ ದೊಡ್ಡ ಮನುಷ್ಯರು ದೊರೆಯುವರೆಂಬ ಭರವಸೆಯು ಕಡಿಮೆ. ಅಂಥವರಲ್ಲದವರ ಮಾತನ್ನು ಕೇಳುವುದರಿಂದ ಅನೇಕವೇಳೆ ನಾವು ತಪ್ಪು ದಾರಿಯನ್ನು ತುಳಿಯಬೇಕಾದೀತು. ಅದುದರಿಂದ ಎಂಥ ಸಂಶಯಬಂ ದಾಗಲೂ ಇತರರು ನಮಗೆ ಹೇಳುವುದರಲ್ಲಿರುವ ಗುಣದೋಷಗಳನ್ನು ಗ್ರಹಿಸಿ ಇದನ್ನು ಹೀಗೆ ಮಾಡಬೇಕೆಂದು ನಮ್ಮ ಮನಸ್ಸಿನಲ್ಲಿ ನಿಶ್ಚಯಿಸಿ