ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರವು ೪ MMom ಎದುರಿಗೆ ನಿಂತು ಜಗಳವಾಡುವುದರಿಂದ ಅವರಿಬ್ಬರ ಗೌರವಕ್ಕೂ ಹಾನಿ. ತಮ್ಮ ಯೋಗ್ಯತೆಗೂ ಮುನತೆಗೂ ತಕ್ಕಂತೆ ನಡೆದುಕೊಳ್ಳದೆ ಕಾಸಿನಾಸೆ ಗಾಗಿ ಸರದಾ ದೈನ್ಯ ದಾಸತ್ನಗಳಿಂದ ನಡೆಯುವುದು, ಇವೆಲ್ಲಾ ಬಹಳ ಹೀನಾಯ. ಸರರದವರಿಂದ ನಮಗೆ ಏನಾಗಬೇಕಾದರೂ ಆಯಾನಿಯಮಗಳಿಗೆ ತಪ್ಪದಂತೆ ನಡೆಯುತ್ತದೆ. ಕೆಲವು ಮುಖ್ಯ ನಿಯಮಗಳನ್ನಂತು ಯಾವ ದೊಡ್ಡ ಅಧಿಕಾರಿಗಳ ವಿಾರಿನಡೆವುದಕ್ಕಾಗುವುದಿಲ್ಲ, ಹೀಗಿದ್ದರೂ ತಿ೪ ವಳಿಕೆಯಿಲ್ಲದ ಅನೇಕಜನ ಕಕ್ಷಿಗಾರರು ತಮ್ಮ ಅರ್ಜಿಗಳಲ್ಲಿ -ಮಹಾ ಸ್ವಾಮಿ, ನಾನುಬಡವ, ಮಕ್ಕಳೊಂದಿಗ, ತಮ್ಮಿಂದಲೇ ಉದ್ದಾರವಾಗ ಬೇಕು, ಇದರಿಂದ ತಮಗೆ ಪುಣ್ಯ ಬರುತ್ತದೆ~ ಎಂಬಂಥ ಮಾತುಗಳನ್ನು ಬರೆದು ವೃಥಾ ತನ್ನ ಗೌರವವನ್ನು ತಾವೇ ಹಾಳುಮಾಡಿಕೊಳ್ಳುವರು. ಇದರಿಂದ ತಮ್ಮ ಅಲ್ಪಸ್ವಭಾವವು ತೋರ್ಪಡುವುದುಹೊರತು ಮತ್ತೇನೂ ಈು ಇಲ್ಯ: ನಾವು ಸದಾ ಯೋಗ್ಯರ ಸಹವಾಸದಲ್ಲೇ ಇರಬೇಕು, ಅಲ್ಪರ ಸಂಗ ವನ್ನು ಮಾಡಬಾರದು. ನಾವು ಎಂಥವರಜತೆಯಲ್ಲಿ ರುವೆವೆಂಬುದನ್ನು ನೋಡುವುದರಿಂದಲೇ ನಮ್ಮ ನಡತೆ ಯಿಂಥಾದ್ದು ಎಂದು ಜನಗಳು ಊಹಿಸು ತಾರೆ, ದುರ್ಬೋಧನೆಯಿಂದ ಯಾರನ್ನೂ ತಪ್ಪುದಾರಿಗೆಳೆಯಬಾರದು. ಕೈಲಾಗದವರಿಗೆ ಸಹಾಯವನ್ನು ಮಾಡಬಹುದಾದ ಸಂದರ್ಭಗಳು ದೊರೆತು ಗಲೂ ಮಾಡದೆ ಬಿಟ್ಟುಬಿಡಬಾರದು, ನ್ಯಾಯಕ್ಕೆ ಕಟ್ಟುಬಿದ್ದು ನಡೆಯ ಬೇಕು, ನಾಗರಿಕರಾಗಿರಬೇಕು, ನಾವು ಮಾಡಬೇಕಾದ್ದನ್ನು ಧಮ್ಮವಾಗಿ ಪ್ರಾಮಾಣಿಕತೆಯಿಂದ ಮಾಡಬೇಕು, ನಾವು ಇತರರಿಗೆ ಮೇಲ್ಪಜ್ಜಯಾ ಗುವಮಟ್ಟಿಗೂ ಒಳ್ಳೆಯ ನಡತೆಯಲ್ಲಿ ರಬೇಕು. ಲಂಚವನ್ನು ತೆಗೆದುಕೊ ಳ್ಳುವುದು ಅಥವಾ ಕೊಡುವುದು ಹೇಡಿತನದಿಂದ ನಡೆಯಿಸುವ ಹೀನಕೃತ್ಯ.