ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೫೭ mMatwwwn ಇಷ್ಟೇ ಅಲ್ಲ, ಇದು ಸುತರಾಂಸುಳ್ಳು ಹೇಳುವುದಕ್ಕಿಂತಲೂ ಕೆಟ್ಟದು. ಕಟ್ಟು ಕೈಮುಂತಾದುವುಗಳ ಸಂಜ್ಞೆಗಳಿಂದ ಅಥವಾ ಸಮಯದಲ್ಲಿ ಸುಮ್ಮ ನಿರುವುದರಿಂದ ನಿಜಸ್ಥಿತಿಯನ್ನು ಮರೆಮಾಚುವುದು ಕೂಡ ಅಸತ್ಯವೇ. ನಮಗೆ ಎಷ್ಟೇ ತೊಂದರೆಗಳು ಬಂದರೂ ಆಡಿದಮಾತಿಗೂ ಕೊಟ್ಟ ಭಾಷೆಗೂ ತಪ್ಪಬಾರದು. ಇಲ್ಲದ ಅಪರಾಧಗಳನ್ನು ಇತರರ ಮೇಲೆ ಹೊರಿಸುವುದು ಚಾಡಿಹೇಳುವುದು ಬಂದುಪಾಲುನಡೆದಿದ್ದರೆ ಲಕ್ಷ ವಾಲೆಂದೂ ನರಿಯು ಹೇಗಿದ್ದರೆ ಹುಲಿಯುಹೋಯಿತೆಂದೂ ಮಿತಿಮೀರಿದ ಅತಿಶಯೋ ಕಿಯಾಡುವುದು, ಅಪಸಂಕ್ಷಿಯನ್ನು ನುಡಿಯುವುದು, ಕೇಳುವವರ ಮನ `ಗೆ ಕೇವಲ ಗಾಬರಿಯಾಗುವರೀತಿಯಲ್ಲಿ ಎರಡರ್ಥಗಳು ತೋರುವಂತೆ ಮಾತಾಡಿ ಅವರನ್ನು ತಪ್ಪುದಾರಿಗೆಳೆಯುವುದು, ಕಡೆಗೆ ಇತರರಿಗೆ ಒಳ್ಳೆಯ ದಾಗಲಿ ಎಂದು ಸುಳ್ಳು ಹೇಳುವುದು, ಇಂತವುಗಳೆಲ್ಲಾ ಸತ್ಯಕ್ಕೆ ವಿರುದ್ದವಾದ ಕೆಟ್ಟ ನಡತೆಗಳು, ನಾವು ಯಾವಾಗಲೂ-ಕಡೆಗೆ ಹುಡುಗಾಟದಲ್ಲಿ ಕೂಡ ಸುಳ್ಳು ಹೇಳಬಾರದು. ಹಾಗೆ ಹೇಳುವವರು ಕುರುಬರ ಹುಡುಗನ ಗತಿಗೆ (II ಬಾಲಬೋಧೆಯಲ್ಲಿರುವ ಕಥೆ) ಸಮಾನವಾದ ಶಿಕ್ಷೆಯನ್ನು ಅನುಭವಿ ಸುವರು. ಮನೆಯಲ್ಲಿ, ಪಾಠಶಾಲೆಯಲ್ಲಿ, ಸರತ, ಸರದಾ ಸತ್ಯವನ್ನೇ ನುಡಿ ಯಬೇಕು. ಮುಖ್ಯವಾಗಿ ಯಾರು ಹೆಚ್ಚಾಗಿ ಹರಟುವರೋ ಅವರು ಸುಳ್ಳು ಹೇಳುತ್ತಾರೆ. ಆದುದರಿಂದಲೇ ಮಿತವಾಗಿ ಮಾತಾಡುವುದು ಯಾವಾ ಗ್ಯೂ ಒಳ್ಳೆಯದು, ಯಾವಾಗಲೂ ಇದುದನ್ನು ಇದ್ದಂತೆಯೇ ಹೇಳ ಬೇಕೇ ವಿನಾತನಿಗೆ ತೋರಿದುದನ್ನೆಲ್ಲಾ ಬೆರಸಿ ಹೇಳಬಾರದು. ಇತರರನ್ನು ಮೆಚ್ಚಿಸುವದಕೋಸ್ಕರ ಕೆಲವರು ಸುಳ್ಳು ಹೇಳುವರು. ಇದು ಅಯುಕ್ತವಾದ ಮುಖಸ್ತುತಿ. ಈ ವಿಷಯದಲ್ಲಿ ಕಮ್ಯೂಟನ ಕಥೆಯು ಉತ್ತಮವಾದ ದೃಷ್ಟಾಂತವಾಗಿದೆ. ಯರೋಪಿನ ಒಂದು