ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿ ಕರ್ಣಾಟಕ ಗ್ರಂಥಮಾಲೆ ರೆಲ್ಲಾ ಅಪ್ರಮಾಣಿಕರೇಸರಿ, ಜಂಬ ಬಡಿದುಕೊಳ್ಳುವುದೂ ಒಂದು ವಿಧ ವಾದ ಅಪ್ರಮಾಣಿಕತೆಯೇ, ಯಾರೇ ಆಗಲಿ ಪ್ರಾಮಾಣಿಕತೆಯಿಂದ ನಡೆ ಯಬೇಕಾದರೆ “ ಹಾಸಿಗೆಯಿದ್ದಷ್ಟು ಕಾಲುಚಾಚಿಕೊಳ್ಳಬೇಕು. ' ಎಂಬ ಗಾದೆಯನ್ನು ಮರೆಯದೆ ನಡೆಯಬೇಕು, ಹಾಗಿಲ್ಲದೆ ನಮ್ಮ ಶಕ್ತಿಗೆ ವಿಾರಿ ದುದು ಮಾಡಿದರೆ ಸಾಲಗಾರರ ಕೈಗೆ ಸಿಕ್ಕಿಬಿದ್ದು, ಅದನ್ನು ತೀರಿಸುವುದಕ್ಕೆ ಯತ್ನವಿಲ್ಲದುದರಿಂದ ಅಪ್ರಾಮಾಣಿಕತೆಗೆ ಬೀಳಬೇಕಾಗುತ್ತದೆ. ಸಾಲಮಾಡಿ ದರೆ ಮುಂದಕ್ಕೆ ಅದನ್ನು ತೀರಿಸುವುದಕ್ಕೆ ಯತ್ನ ವುಸಾಗುವುದಿಲ್ಲವೆಂದು ತಿಳಿ ದಿದ್ದರೂ ಕೂಡ ಧೋರಣೆಯಿಂದ ಕೆಲವರು ಸಾಲಮಾಡುವರು. ಇದು ಸುತರಾಂನಿಷಿದ್ಧ. ಎಷ್ಟೋ ವೇಳೆಗಳಲ್ಲಿ ಇತರರು ನಮ್ಮನ್ನು ನಂಬಿ ಅವರ ಸತ್ತನ್ನೇ ನಮ್ಮ ವಶಕ್ಕೆ ಕೊಟ್ಟಿರುವರು, ಅದನ್ನು ನಾವು ಸ್ವತಃ ಅಪ ಹರಿಸದಿರುವುದು ಮಾತ್ರವಲ್ಲದೆ ಇತರರಿಂದಲೂ ಅಂಥ ಮೋಸಕ್ಕೆ ಅವಕಾಶ ವಿಲ್ಲದಂತೆ ನೋಡಿಕೊಳ್ಳುವುದೂ ಆವಶ್ಯಕ, ಸಣ್ಣ ಪುಟ್ಟ ವಸ್ತುಗಳನ್ನು ಅಪಹರಿಸುವುದರಿಂದ ಅದನ್ನು ಕಳೆದುಕೊಳ್ಳತಕ್ಕವರಿಗೇನೂ ನಷ್ಟವಾಗ ದೆಂದೂ ಆದುದರಿಂದ ಅವನ್ನು ಕದಿಯಬಹುದೆಂದೂ ಕೆಲವರು ಹೇಳಿಕೆ ಳ್ಳುವರು, ಇದೂ ತಪ್ಪು, ವಸ್ತುವು ಸಣ್ಣದಾದಮಾತ್ರಕ್ಕೆ ಅದನ್ನು ಕದ್ದ ತಪ್ಪೇನೂ ಸಣ್ಣದಾಗಲಾರದು. ಇತರರ ಸ್ವತ್ತನ್ನು ಕದಿಯದಿದ್ದರೆ ಸರಿ, ಅದನ್ನು ಇನ್ನೇನುಬೇಕನಿ ದರೂ ಮಾಡಬಹುದು ಎಂದು ತಿಳಿಯಬಾರದು, ಯಾವ ವಿಧದಲ್ಲಿ ಯಾದರೂ ಅದನ್ನು ಕೆಡಿಸುವುದೂ ಅಧರವೇ ಸರಿ, ಬೇಕೆಂದು ಚರಂಡಿಗಳನ್ನು ಅಡ್ಡ ಗಟ್ಟುವುದು, ಬೀದಿಯ ಲಾಂದ್ರಗಳನ್ನೊಡೆಯುವುದು, ಇತರರ ಮನೆಗಳ ಕಿಟಕಿಗಳ ಕನ್ನಡಿಗಳನ್ನೊಡೆಯುವುದು, ಇತರದ ಗಿಡಗಳನ್ನು ಕಿತ್ತೆಸೆಯು ವುದು ಇಂಥವುಗಳಿಂದ ನಷ್ಟ ಪಟ್ಟವರು ನೇತಾಡುತ್ತಿದ್ದರೆ ತಾವು ಏನೂ ಅರಿಯದವರಂತೆ ಸುಮ್ಮನಿರುವುದು ಇಂಥದ್ದೆಲ್ಲಾ ಅನ್ಯಾಯ, ಅಕಸು