ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶ್ರೀ || 1 ವಂದೇತ್ವಾಂ ಭೂದೇವಿ ಅರ್ಯಮಾತರನು | ಜಯತು ಜಯತು, ಪದಯುಗಲಂ ತೇ ನಿರ೦ತರಮ್ | ಕರ್ನಾಟಕ ನಂದಿನಿ. - -೦೫ಇ%- -. (ಮಾಸಪತ್ರಿಕೆ.) ಸಿದ್ಧಿಂ ಸರ್ವಾಣಿ ಭೂತಾನಿ ಭೂತಾನಾಂ ಚೈವ ಯಃ ಪ್ರಭುಃ | ದಸ್ಯತ್ರಿ ಮಮಯೋ ಚಾನೃತ್ಯದೃಷ್ಟ ವಧಿಗೋಚರಾಃ।" ರೌದ್ರಿ~ ಚೈತ್ರ, ೧೯೨೦- ಏಪ್ರಿಲ್, ಸಂಪುಟ. ಸಂಚಿಕೆ ೬, ಪ್ರಾತಃಸ್ಮರಣೆ (ಉದಯರಾಗ) ಬೆಳಗಾದುದೇಳ೦ಬೆ ಕಕ್ಷರೆದುನೋಡಂಬೆ || ಬೆಳಗುತ್ತಲಿದೆ ನಾಡಲ್ಲ ನಳಿನಾಹೈನುದಯದಿಂದೆಂಬೆ || ಪ || ಅನುಕರಣಶೀಲದ ತುಕ್ರನಿದೆ ತಲೆದೋರಿದನು | ಮಿನುಗುತಿದೆ ಹೃದಯಾಕಾಶ ತಿಳಿವಂಬ ಬೆಳಕಿನಿಂ ॥ ಅನುರಾಗವೆಂದೆನಿಪ ಪ್ರಭಾತರಾಗವನೋಡಿ | ಮನಮುಟ್ಟ ಪಾಡುವುದು ರಾಷ್ಪಾಭಿಮಾನದ ಬೆಳ್ಳಕ್ಕಿ || ಬೆಳಗಾದು || ೧ | ಸಡಗರದಿ ಹಾರಾಡುವುವು ಸತತೋದ್ಯಮದ ಪಕ್ಷಿಗಳು | ಎಡೆಬಿಡದೆ ಬೋಧಿಸವು ಸಭೆಸಮ್ಮೇಲನದ ಕಲಕಲವು | ಬಿಡದೆಚ್ಚರಿಸುತಿಹವೆಲ್ಲರಂ ಬಂಧು ಪ್ರೇಮದೊಳು | ಜಡತೆಯುಳಿದೇಳುತಿಹರೆಮ್ಮ ಜನರೆಲ್ಲ ಸಂತಸದೊಳು || ಬೆಳಗಾದು ೨ | ಸ್ವಾತಂತ್ರ್ಯದಭಿಮತದ ವಾತಸಂಚರಿಸುತಿಹನು | ನೂತನೋತ್ಸಾಹದರುಣನುದಯಿಸಿಹನು || ಆತ್ಮಪೌರುಷವೆಂಬ ದಿನನಾಥ ಮೂಡಿಹನು | ಮಾತೃವಂದನೆಗಾಗಿ ಸುತರು ನಿನ್ನರಸುತಿಹರು | 4 # ಇನ್ನೇಕೆ ಮಲಗಿರ್ಪ ಕನ್ನಡದ ಜನನಿಯೇ ! ಸಮ್ಮೋಹನಾಸ್ತ್ರದ ಬಂಧನವ ತೆಗೆದೆಸೆಯ || ಬಿನ್ನವಿಸುತಿಹೆ ನಾನಿನ್ನ ಬುಗಿನ ಸುತಯರಿಗಾಗಿ | ಚೆನ್ನಾಗಿ ಕಣ್ಣೆರೆದು ನೋಡನ್ನ ಕಾಯ | ೪ | ಐಕಮತ್ಯವನಿತ್ತು ಜೋಕೆಯಿಂ ಸಲಹಮ್ಮ! ಏಕಚಿತ್ತದಿ ನಿನ್ನ ಸೇವಿಸಿ ಸುಖಿಸೆವಮ್ಮ || ಲೋಕನಾಯಕ ಶೇಷಗಿರಿವಾಸನರಸಿಯೆ, ನಮ್ಮ | ಈ ( ಕರ್ನಾಟಕ ನಂದಿನಿಗೆ ಬೆಂಗಾವಲಮ್ಮ ಬೆಳಗಾಯಿ೦ಟೆ #