ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

244 ಮಹಾಭಾರತ [ಸಭಾಪವ್ ದ್ದಾಮಭುಜನಪ್ಪಿದನು ಚಿತ್ರದ ತಾಮಸದ ತನಿಬೀಜ ಮಸಕಿತು ಬಾಹ್ಯರಚನೆಯಲಿ || ೯ ಹರಸಿದನು ಕಾಣಿಕೆಯ ಕೊಂಡೆ ಯರ ಮಹಾಸತಿಯನು ಕುಮಾರರ ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ | ಆರಸ ಗಾಂಧಾರಿಯನು ವಂದಿಸುತ ದರುಶನವ ಕೊಡು ಹೋಗೆನಲು ಕಡು ಹರುಷಮಿಗಿಲೈ ತಂದರಾಗಾಂಧಾರಿಯರಮನೆಗೆ || ೧೦ ಬಂದು ಕಾಣಿಕೆಗೊಟ್ಟು ವಂದಿಸಿ ನಿಂದರನಿಬರು ತನ್ನ ಕೆಳದಿಯ ರಿಂದ ತರಿಸಿದಳಾರತಿಯನುಷ್ಟಾರತಿಯನೊಲಿದು | ಚಂದದೈಸಾವಿರದ ಸಂಖ್ಯೆಯ ರಿಂದುಮುಖಿಯರು ತಳಿಗೆಯಾರತಿ ಸಂದಣಿಸಿದರು ಜಯಸಬದ ಝಂಪಿಸಿದುದಂಬರವ || ೧೧ ಅರಸಿ ಕಾಣಿಸಿಕೊಂಡಳೀನ್ಸಪ ರರಸಿಯನು ಸುಕುಮಾರಕರನವ ರರಸಿಯರ ಸಖಿಯರ ವಿಳಾಸಿನಿಯರ ಪಸಾಯ ಯರ | ತರಿಸಿ ಕೊಟ್ಟಳು ಬೇಟಿಬೇಟಿನಿ ಬರಿಗೆ ಯುಡುಗೆಯ ಗಂಧಮಾಲ್ದಾ ಭರಣವನು ರಾಜೋಪಚಾರವಿಳಾಸದೇಸಿಯಲಿ | ೧೦ ಬೇಟಿಕೊಟ್ಟಳು ಬತಿಕ ಕುರುನೃಪ ನಾಲಯುಕ ನಡತಂದು ಕುಂತಿಯ ಕಾಲಿಗೆಅಗಿದನವರನುಚಿತೋಕ್ತಿಯಲಿ ಮನ್ನಿಸಿದ |