ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧, 262 ಮಹಾಭಾರತ [ಸಭಾಪರ್ವ ವಿಹಿತವಹುದೇ ಶಕುನಿ ವಿದುರನ ಕುಹಕನುಡಿಗಳ ಕೇಳಿದಿರೆ ಗೆಲ ವಹುದು ನಮ್ಮದು ಸಕಲಜನದಿದಿರಲಿ ದಿಗಂತರಕೆ | ಸಹಜವೋ ರಹವೋ ನೃಪಾಲರ ಮಹಿಮೆಯೋ ಯೂತದನುಭವ ಲಹರಿಯನು ನೀವದಿರೆಂದನು ಕರವರ ರಾಯ | ೬v ಗುರುಗಳಾಸುರರು ಭೀಷ್ಮರೆಮ್ಮನು ತೆರಳಚರು ಕೃಪ ನುಡಿಯನಯ್ಯನ ಕೊರಳು ಕೊಂಕದು ಬಾಕ್ಸಿಕನ ಮನ ನೋಯದಿನ್ನ ಬರ | ಹಿರಿಯರವರೇನಜ ರೇ ನೀ ಪರಿಣತನೆ ನಿಪ್ಪ ಜ್ಞಶಠನೆಂ ದಖಿಯನೇ ತಾನೆಂದು ಜಗದನು ಕೌರವರ ರಾಯ || ೬೯ ಇವರ ಜನಪಾಧ್ಯರವ ನಡಹಾ ಯವನನಾಗಳ ದೇವಕೀಸುತ ಸವರಿದನು ನಮೀ ವಿನೋದದೂತಸಂಪದದ | ಸವನವಿಘ್ನ ವಿಕಾರಿಯನು ಪರಿ ಭವಿಸುವವರಿಲ್ಲಾ ಶಿವಾ ಯೆಂ ದವನಿಸತಿ ನಿಜಹುಬ್ಬಿನಲಿ ಹೂಟೆದನು ಪರಿಚರರ || vo ಮಣಿವ ತಾನಲ್ಲೀಯನರ್ಥವ ಕುಣಿಕೆಗೊಳಿಸಿದ ನೀಸಹಿತನಿ «ಣೆಗಳೇ ಸೈಂಧವನನೀ ರಾಧೇಯಶಕುನಿಗಳ | ರಣದೊಳಗೆ ಭೀಮಾರ್ಜುನರ ಮಾ ರ್ಗಣದ ಧಾರೆಗೆ ವೀರನಾರಾ ಯಣನೆ ಸೇರಿಸಿ ಕೊಡುವನೆಂದನು ಖಾತಿರಲಿ ವಿದುರ || vr೧ ಹದಿನಾಲ್ಕನೆಯ ಸಂಧಿ ಮುಗಿದುದು.