ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7. ಸಂಧಿ ೧] ಸಭಾಪರ್ವ ಹೊಳಹೊಳದುದಾಸ್ತಾನ ಕಾಂತಾ ವಳಿಯ ಕಂಗಳ ಬೆಳಗಿನಲಿ ತನಿ ಮುಳುಗಿತೊಲಗ ಲಲಿತರಸಲಾವಣಲಹರಿಯಲಿ | ವಿಲಸದಖಿಳಾಭರಣರತ್ನಾ ವಳಿಯ ರಶ್ಮಿಯಲಡಿಗಡಿಗೆ ಪ್ರ ಜ್ವಲಿಸಿತಾಸಭೆ ದೀಪ್ತಿಮಯವಿವಿಧಾನುಭಾವದಲಿ || ೦೦ ಮೇಳದಲಿ ಗಂಧರ್ವರಿಪ್ಪ ತೈಲ ತುಂಬಿರುಸಹಿತ ಶುದ್ದದ ಸಾಳಗದ ಸಂಕೀರ್ಣದೇಸಿಯ ವಿವಿಧರಚನೆಯಲಿ | ಬಾಲೆಯರ ಸುರಗಣಿಕೆಯರ ಮುಖ ಚಾಳಯರ ಸಂಗೀತತಾಳದ ತೂಳುವರೆ ತುಂಬಿದುದು ಕುಸುಮಾಯುಧನ ಕಳಕಳವ | ೦೧ ನಾರದರ ಆಗಮನ. ಆಮಹಾಸಭೆಯಲಿ ಯುಧಿಷ್ಟಿರ ಭೂಮಿಪತಿ ದೂರದಲಿ ಕಂಡನು ತಾಮರಸದಳನಯನಸಂನಿಭಭಾವಭಾವಿತನ | ಹಾಮಹಾದೇವೆತ್ತಣದ್ಭುತ ಧಾಮವಿದು ದಿನಮನಿಯ ತೇಜ ಸೋಮವೆರಡಅ ಸಾರ್ದುದೆನುತೀಕ್ಷಿಸಿದ ನಾಸೆಯ 11 ೦೦ ಲಲಿತತೇಜಃಪುಂಜ ಮಿಗೆ ಥಳ ಥಳಿಸಿತತಿದೂರದಲಿ ಬೆಳಗಿನ ಗೋಳ ಸುಚಿದಂತಾದುದಾಗಲೆ ತೋತಾಕಾರ | ತಳಿತುದವಯವಶುದ್ಧವರ್ಣ ಸ್ಥಳವು ನಿಮಿಷಕೆ ಮುನಿವರಾಕೃತಿ ಹೊಳದುದಾಕ್ಷಣವೀತನಾರದನೆಂದುದಖಿಳಜನ || ೨೩ 1 ರಾದಸೆಯ, ಚ, ಛ, - - - - *