ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೨) ರಾಜಸೂಯಾರಂಭಪರ್ವ ಪಿತನ ಪರಮಪ್ರೀತಿಗುನ್ನತ ಗತಿಗೆ ನಿರುಪಮರಾಜಸೂಯ ಕ್ರತುವೆ ಸಾಧನವೆಂದು ಮುನಿಯಪದೇಶಿಸಿದನೆವಗೆ | ಕೂತು ಮಹಾಕ್ರತು ಸಕಲಧರಣಿ ಪತಿಗಳರ್ಥವ ಗುಣದಲೀಯರು ವತವೆನಗೆ ಸಂಕಲ್ಪವಾಯಿದಕೇನು ಮತಿಯೆಂದ | ೧೦ ತಿರುಗಿದೊಡೆ ಸಂಕಲ್ಪಹಾನಿಯ ಪರಮಪಾತಕವಿದು ಮಹಾನಿ ಪುರದ ಮಖನಿನ್ನ ಮರಮುನಿಪತಿ ದೇವಲೋಕದಲಿ | ಹರಹುವನು ಪರಿಹಾಸಮಯಸಾ ಗರವ ದಾಂಟಸು ಜೀಯ ಭವಸಾ ಗರಕೆ ಯಿದು ಮಿಗಿಲೇ ಮುರಾಂತಕ ಹೊಂದನಾಭೂಪ || ೧೩ ಧರ್ಮರಾಯನ ಮಾತನ್ನು ಕೇಳಿ ರಾಜಸೂಯದ ದೌರ್ಘವ್ಯ ವನ್ನು ಹೇಳುವಿಕೆ, ನಕ್ಕನಸುರವಿರೋಧಿ ಮುನಿ ಹಾ ಯಿಕ್ಕಿದನಲಾ ಬಲೆಯನಕಟಾ ಸಿಕ್ಕಿದರಲಾ ಪಾಪಿಗಳು ಸದರರೆ ಮಹಾನೃಪರು | ಅಕ್ಕಸದ ಮಖವಿದು ಚೂಣಿಗೆ ಚುಕ್ಕೆಯಾಯ್ತು ಮಹಾಮಹೇಂದ್ರರು ಮಕ್ಕಳಾಟಿಕೆಯಾಯ್ಕೆನುತ ತೂಗಿದನು ಸಿರಿಮುಡಿಯ | ೧೪ ಕೆದ ಸಪ್ತದೀಪಪತಿಗಳ ಸದೆದು ರಚಿಸುವ ರಾಜಸೂಯದ ಹದನನಂ 2 ಪೈಸುವರದಾರೀವರ್ತಮಾನದಲಿ | 1 ಮನಮಹೀಶನ, ಚ, 2 ಬೆದರದ೦, ೯೩.