ಪುಟ:ಕವಿಯ ಸೋಲು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

ಅವರನ್ನು ಕರೆದನು ತತ್ವಜ್ಞಾನಿ
ಸೈರಣ ಸಮತಾ ಭಾವದ ಮಾಸಿ.
"ಉತ್ತರ ಹೇಳುವೆ ಹೋಗದಿರಣ್ಣ
ಆಡಿದ ಮಾತಿಗೆ ಮುನಿಸಿಲ್ಲಣ್ಣ
ತತ್ವಜ್ಞಾನಿಗೆ ಮುನಿಸೇ ಕಣ್ಣ?
ಇದ್ದರೆ ಆಗದು ನಮ್ಮಯ ಕೆಲಸ.
ಲೋಕವ ಗೆಲ್ಲುವ ಧರ್ಮದ ಕೆಲಸ.
ಹೋಗುವ ಹೋದರೆ ಹೋಗದು ಗಾಡಿ
ಹೊಟ್ಟೆಗೆ ಹಾಕುವ ಜಟಕಾ ಗಾಡಿ
ಹಿರಿಮಗ ದುಡಿವನು ಕಾಸು ತರವನ್ನ,
ಅಮ್ಮನ ತಮ್ಮನ ನೆರೆ ಪೋಷಿಸಲು
ನೀ ಹೋದರೆ ಉಳಿಯುವುದೇನಣ್ಣ?
ಜಟಕಾ ಸಾಬಿಯ ಜರಿಯದಿರಣ್ಣ
ಜಟಕಾ ಸಾಬಿಯು ಹುರುಪಿನ ಟಗರು
ಜಗವನು ಗೆಲ್ಲುವ ಕಾಳಗ ಟಗರು
ಅವನನು ಏಳಿಸಿ ಫಲವೇನಣ್ಣ
ಬದುಕುವ ಮಾತನ್ನು ಹೇಳುವೆನಣ್ಣ
ಜಟಕಾ ಹೊಡೆಯುವ ಸಾಬಿಗಳಾಗಿ
ತುರುಕರ ಮತದಲ್ಲಿವಾಸಿಗಳಾಗಿ, ”

"ತತ್ವದ ಮಾತನ್ನು ಹೇಳುತಲಿದ್ದೆ
ಸೈತಾನ್ ಹೊರಟುದ ಹೇಳುತಲಿದ್ದೆ,
ಕೋಪವ ಮಾಡದೆ ಕೇಳಿರಿ ನೀವು
ಸತ್ಯಕೆ ತಾಳ್ಮೆಯ ತಾಳಿರಿ ನೀವು
ದೇವರು ಅರಬೀಸ್ಥಾನಕ್ಕೆ ಹೋಗಲು

೧೦