ಪುಟ:ಕವಿಯ ಸೋಲು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು

"ಕಾಸ ನೀಡಿ ಧರ್ಮದವರು
ಲೇಸನೀವ ಶಿವನು ನಿಮಗೆ
ಹೇಸಬೇಡಿ ಕುರುಡನೆಂದು
ಘಾಸಿಪಟ್ಟೆನು.”

"ಕಾಸು ಎನ್ನ ಬಳಿಯೊಳೆಲ್ಲ
ಕಾಸು ಕೊಟ್ಟು ಕೊಂಡೆ ಹಣ್ಣ
ಆಸೆಪಟ್ಟು ತಿನ್ನಲೆಂದು
ಈಸು ನಿನಗಿದೆ."

ಮಡಲಲಿದ್ದ ಹಣ್ಣ ತೆಗೆದು
ಎಡದ ಕೈಯಲದನು ಹಿಡಿದು
ನಡುವ ಮರೆದು ಚೂರಿಯಿಂದ
ಒಡನೆ ಕೊಟ್ಟಳು.

ಹಣ್ಣಿನೊಳಗೆ ರಸದ ಮಾವು
ಬಣ್ತೀವಿ ಬೆಳೆದ ಮಾವು
"ಅಣ್ಣ ಕೊಳ್ಳೊ" ಎಂದು ಕೈಗೆ
ಉಣ್ಣಲಿತ್ತಳು.

"ಶಿವನೆ|" ಎಂದು ಕಣ್ಣೆ ಒತ್ತಿ
"ಶಿವನೆ!” ಎಂದು ಎದೆಗೆ ಒತ್ತಿ
ಶಿವನ ಮಾತಿನೊಡನೆ ಹಣ್ಣ
ಸವಿಯು ಹೆಚ್ಚಲು,

೪೨