ಪುಟ:ಕವಿಯ ಸೋಲು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕವಿಯ ಸೋಲು

ಘೂ.ರಾ.- ಪರಮಪಾತಕ ನೀನು!

ರವಿಯ ಮರಿಗಳ ತಂದು ಅವರ ಮಧ್ಯದಿ ನಿಂದು
ಏನೆನ್ನ ಕರೆಯುವೆಯೊ, ಆದರವ ತೋರುವೆಯೋ !
ಸಾಯೆ ಸರಸಂ ಸಾಕು, ದುರ್ಬುದ್ಧಿಯದು ಸಾಕು
ನಿನ್ನ ಮನೆ ಹೋಗಲೊಲ್ಲೆ, ನಿರಪರಾಧಿಗಳಾವು,
ಎಮ್ಮನೀ ಹಳಿದಿರುವೆ ಅಪಮಾನ ಮಾಡಿರುವೆ.
ಹೇಳಯ್ಯ, ಕಾದ ಸೀಸವನೆಂದು ಸುರಿದೆವೋ
ನಿನಗೆ ಕೆಡಕೇನು ಮಾಡಿರುವೆವೋ ಹೇಳಯ್ಯ,
ತಲೆಯೆತೆ ಕೆರಯುವೆಯೋ ಮೇಲೇನು ನೋಡುವೆಯೊ
ಕಣ್ಣುಗಳನೇಕುಜ್ಜುವೆಯೊ, ಅರಿಯದಂತೇಕೆ
ನಟಿಸುವೆಯೊ ಆಷಾಢಭೂತಿಯೆಂಬುದ ಬಲ್ಲೆ.

ಕವಿ ರಾ.- ನಿಮ್ಮ ನಾನೆಂದು ಹಳಿದೆನೆ ? ನಿಮಗೆ ನಾನೆಂದು

ಅಪಮಾನ ಮಾಡಿದೆನೋ ? ನೆನಪಿಲ್ಲ, ನೆನಪಿಲ್ಲ.
ನೀನಾರೊ ಮೊದಲೆನಗೆ ತಿಳಿದಿಲ್ಲ. ಆರಯ್ಯ?

ಘೂ.ರಾ.-ಅಹುದಹುದು ನೆನಪಿಲ್ಲ! ಏಕಿರುವುದೋ ನಿನಗೆ !

ಏನಾನುಮೊಂದು ಉಪಕಾರವಂ ನೀ ಮಾಡೆ
ಬಹುಕಾಲ ನೆನಪಿಹುದು; ದಿಟವಯ್ಯ, ದಿನ ದಿನವು
ಲೆಕ್ಕವಿಲ್ಲದ ರೀತಿ ಅಪಕಾರ ಮಾಡುತಿರೆ
ನೆನಪಿಲ್ಲ! ನೆನಪಿಲ್ಲ! ದುಷ್ಟ ಮಾನವ ಜನ್ಮ !
ಪಕ್ಷಿಗಳು ನಾವು ನಿಮ್ಮಂತಲ್ಲ.

ಕವಿ ರಾ.- ಏಕಯ್ಯ

ಬಲು ಮುನಿಸು ? ನೆನಪಾಗದೆಂದು ದಿಟ
ನುಡಿಯುತಿರೆ ಏನೇನೋ ಆಡುತಿದೆ, ದೂರುತಿಹೆ.

ಘೂ.ರಾ.- ರಕೋಪವನವನ್ನು ನಾವೆಲ್ಲ ಬಿಟ್ಟಿಹೆವು.

ನೀನವರ ನಮಗೆ ಹೋಲಿಸಬಹುದೆ? ಹೇಳಯ್ಯ,

೮೮