೧೧ಳಿ ಕರ್ಣಾಟಕ ಗಥವರ. ಈ ಪದ್ಯಗಳನ್ನು ಪಠಿಸಿದ ಮೇಲೆ ಏನೋ ಒಂದು ವಿಧವಾದ ಸಂತೋಷವು ಜನಿಸಿ ಎದೆಯು ಹಿಗ್ಗಿ ದಂತಾಗುದಿಲ್ಲವೆ ? ನಿತ್ಯವೂ ನೋಡುತ್ತಿದ್ದರೂ ಇಂಥ ಅನ್ನು ಭವವು ನಮ್ಮಲ್ಲೆಂದೂ ಹುಟ್ಟಲಿಲ್ಲ, ಚಂದ್ರನು ತೊಟ್ಟಿಲಮೇಲೆ ಕಟ್ಟಿದ ತಿಂಗಣಿ ಯೆಂಬ ಭಾವವೂ ಸಾಮಾನ್ಯರ ಒಳಗಣ್ಣಿಗೆ ಗೋಚರಿಸುವುದಿಲ್ಲ. ಅಸ್ತಮಯಕಾ ಲದಲ್ಲಿ ಚಂದ್ರನಲ್ಲಿ ಧೀವರತ್ಯಾರೋಪಮಾಡಿ ; ಆ ಕಾಲದಲ್ಲಿ ನಕ್ಷತ್ರಗಳಿರುವ ಸ್ಥಿತಿ ಯನ್ನೂ ಚಂದ್ರಕಿರಣಗಳು ಅಧೋಮುಖವಾಗಿದ್ದುವು ಊರ್ಧಮುಖಗಳಾದುದ ನ್ನೂ ನೋಡಿ ಆಕಾಶವೆಂಬ ಕೆರೆಯಲ್ಲಿ ಬೀಸಿದ ಬಲೆಯಲ್ಲಿ ಸಿಕ್ಕಿಕೊಂಡ ವಿಾನಿನಂತೆ ನಕ್ಷತ್ರಗಳನ್ನು ನಿರೂಪಣಮಾಡಿ, ಅವವುಗಳಿಗಿರುವ ಸಂಬಂಧವನ್ನು ಸಾಮಾನ್ಯ ವಾದ ಲೌಕಿಕ ದದೃಷ್ಟಾ೦ತದಿಂದ ಸ್ಪಷ್ಟ ಪಡಿಸಿರುವುದು ಅತಿಶಯವಾದ ಕವಿಸಾಮ ರ್ಥ್ಯಕ್ಕೆ ನಿದರ್ಶಕವಲ್ಲವೆ ? ಪರಿಚಯ ಮಾಡಿದ ಬಳಿಕ ಇವುಗಳು ಕವಿಯ ಭಾ? ವವನ್ನು ನಮ್ಮ ಹೃದಯದಲ್ಲಿ ಹುಟ್ಟಿಸಿ ಅವನು ಪಟ್ಟ ಆನಂದವನ್ನು ನಾವೂ ಪಡು ವಂತೆ ಅವಕಾಶವಾನವನ್ನು ಮಾಡುವುದರಲ್ಲಿ ಸಂದೇಹವೇ ಇಲ್ಲ. ರಸಜ್ಞರು ಅನುಭವಿಸಿರುವರು. ಹಿಂದೆ ಈ ಗ್ರಂಥದಲ್ಲಿ ೬೪ನೆಯ ಪುಟದಲ್ಲಿ ಉದಾಹೃತವಾದ ಹರಿದಶ್ವಂ ? (( ಭವಬದ್ಧ ” ಎಂಬ ಪದ್ಯಗಳಲ್ಲಿ ವರ್ಣಿತವಾದ ಸೂರನ ಉದಯಾಸ್ತಮಯ ವರ್ಣನೆಗಳು ಈ ರೀತಿಯಾದ ವರ್ಣನೆಗಳೇ ಆಗಿದ್ದರೂ ಅವುಗಳಲ್ಲಿ ಮತ್ತೊಂ ದು ವಿಶೇಷವುಂಟು. ಭೂತಗಳಲ್ಲಿ ಉಂಟಾಗುವ ವ್ಯತ್ಯಾಸವು ಸ್ಪಷ್ಟವಾಗಿಯೂ ಆನಂದದಾಯಕವಾಗಿಯೂ ಇರುವುದಿಲ್ಲ. ಸತಿಪನ್ಯಾಯ ರಾಜಧೃತ್ಯನ್ಯಾಯ ಗಳಿಂದ ನಿರೂಪಿಸಿದರೇನೆ ಸರಸವಾಗಿಯೂ ಸ್ಪಷ್ಟವಾಗಿಯೂ ನೋಡಬೇಕೆಂಬ ಕುತೂಹಲವನ್ನು ಹುಟ್ಟಿಸತಕ್ಕದಾಗಿಯ ಆಗುವುದು, ಮತ್ತು ಉದಯಕಾಲದಲ್ಲಿ ಸೂನ ವೈಭವವನ್ನು ಅಸ್ತಮಯದಲ್ಲಿ ಅವನ ದುರ್ದಶೆಯನ್ನೂ ಇಷ್ಟು ಚೆನ್ನಾಗಿ ಅನ್ಯಥಾ ನಿರೂಪಿಸಲಾಗುವುದಿಲ್ಲ. 8, ಮತ್ತು ಚಂದ್ರಿಕೆಯಲ್ಲಿ ಹೂವಿನ ಅಂಗಡಿಯನ್ನು ಹೊಕ್ಕಾಗ ನಮಗೆ ಇಂಥ ಅನುಭವವೆಂದಿಗಾದರೂ ಉಂಟಾಗುವುದೆ ? (• ನೆನೆದರ ಚಿತ್ತಮುo ನೆರೆಯೆ ಕಮ್ಮನೆ ನೋಳ್ಳರ ಕಂಣ ಬೆಳು ಕ | ಮನೆ ಮಿಗೆ ಮಾತನಾಡುವರ ಮೆಲ್ಕು ಡಿ ಕಮ್ಮನೆ ಮೆಯ್ದಳಯ್ದೆ ಕ ಮನೆ ದೆಸೆ ಕೂಡೆ ಕಮ್ಮಸ ಕರಂ ನವಕೌಮುದಿ ಕಮ್ಮನಾಗೆ ಕ೧|| ಪಿನ ಪೊನಲೆತ್ತಲುಂ ಪರಿವ ಪೂವಿನ ಸಂತೆಯನೆಯ್ದಿ ದಂ ನೃಪಂ!! ( ಆ ತಣ್ಣೆಲರೆಂಬ ಕಂಪಿನ ಕಡಲ ನೀಸಿದ೦, ೨ (ಲೀಲಾವತಿ.)
ಪುಟ:ಕವಿಸಮಯಂ ಪ್ರಥಮ ಭಾಗ.djvu/೧೨೫
ಗೋಚರ