ವಿಷಯಕ್ಕೆ ಹೋಗು

ಪುಟ:ಕವಿಸಮಯಂ ಪ್ರಥಮ ಭಾಗ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿನ್ ಕರ್ಣಾಟಕ ಗೆ ಕಥೆಯಲೆ. , •••••••••••••ಅನಂತ್ /sh ಗೆ ಕುಂದಕ ಬರುವುದರಿಂದಲೂ ಕವಿಯ ದುರ್ವಾಸಶಾಪವನ್ನು ಕಲ್ಪಿಸಿ ಇದ್ದಾ ನೆಂದು ತೋರುತ್ತದೆ. ಬಳಿಕ ಆ ದುಶ್ವಾಸಶಾಪದ ವೈಭವವನ್ನು ತಿಳಿಸಲು ದುಷ್ಯಂತನು ಸಂಗೀತ ವನ್ನು ಕೇಳುವುದರಲ್ಲಿ ಅನುರಕ್ತನಾಗಿ ಆ ಶ್ರವಣದಿಂದ ವಿರಹವನ್ನು ಅನುಭವಿಸು ತಿದ್ದರೂ ಆ ವಿರಹದ ಕಾರಣವನ್ನು ತಿಳಿಯದೆ ಇದ್ದನೆ೦೭) ಒಂದು ಸಂಗಿತಿಯನ್ನು ಕಲ್ಪಿಸಿ ತನ್ನ ಮಹಾಕವಿತ್ವವನ್ನು ಪ್ರದರ್ಶನ ಮಾಡಿಕೊಂಡಿರುವನು. ಅದೆಂ ತೆಂದರೆ :- - ನಾಯಿಕಾನಾಯಕರಲ್ಲಿ ಸದೃಶ ಸ್ಥಿತಿಯು ಇರದಿದ್ದರೆ ಎಂದರೆ ಒಂದು ಕಡೆ ಉತ್ಕಂಠಯ ಮತ್ತೊಂದು ಕಡೆ ಉಪೇಕ್ಷೆ ಇದ್ದಲ್ಲಿ ಶಸಸ್ತೂರಿ ಯಾಗುವದಿಲ್ಲ. ದುಷ್ಯಂತನಲ್ಲಿ ಶಾಪದಿಂದಲುವೇಕೆ ಉಂಟಾಯಿತೆಂದು ಹೇಳದೆ ಬೇರೆ ರೀತಿಯಲ್ಲಿ ಹೇಳಿದ್ದರೆ ಪ್ರೇಕ್ಷಕರಲ್ಲಿ ತಾದಾತ್ಮದಿಂದ ಆವಿರ್ಭೂತವಾಗುತ್ತಿರುವ ರಸವು ನಮ್ಮ ವಾಗಿ ಹೋಗುತ್ತಿದ್ದಿತು. ಶಾಸನಿಮಿತ್ತವಾಗಿ ವಿಸ್ಕೃತಿ ಉಂಟಾಯಿತೆಂದು ಹೇಳಿ ದರೆ ಪ್ರೇಕ್ಷಕರಲ್ಲಿ ಉಂಟಾದ ರಸವು ಹೆಚ್ಚುವುದು. ಶಕುಂತಲಾದುಷ್ಯಂತರ ಪರ ಸ್ಪರ ಅವಲೋಕನ, ಸಂಭಾಷಣ, ತಿರಸ್ಕಾರ, ಪೂರ್ವವಿಹಾರರಹಸ್ಯಖ್ಯಾಪನ, ಮೊದಲಾದುವುಗಳ ವರ್ಣನೆಯಲ್ಲಿ ಪಾತಕರಿಗೆ ಒಂದುಕಡೆ ಪಶ್ಚಾತ್ತಾಪವು ಮ ತ್ತೊಂದು ಕಡೆ ಶೋಕವೂ ಉಂಟಾಗುವುವ, ಹಾಗೆ ವಿಸ್ಕೃತಿಯು ಶಾಸನಿಮಿತ್ತಕ ವಾದುದೆಂದು ಹೇಳದಿದ್ದರೆ ದುಷ್ಯಂತನ ವಿಷಯದಲ್ಲಿ ಅಗ್ರ ಹವೂ ಅದರಿಂದ ರಸಾ ಭಾಸವೂ ಉಂಟಾಗುತ್ತಿದ್ದಿತು. ಬಳಿಕ ನಾಟಕ ಕಥೆಯಲ್ಲಿ ಎರಡು ಸಂದರ್ಭವನ್ನು ಕಲ್ಪಿಸಿರುವನು. ಸ್ಮೃತಿ ಯುಂಟಾಗುವುದಕ್ಕೋಸ್ಕರ ಅಂಗುಳೀಯಕ ದಾನವನ್ನು ಇವರ ಪ್ರಥಮದರ್ಶನಾವ ಸರದಲ್ಲಿಯೇ ಅನುರಾಗವಿಲಾಸವನ್ನು ತೋರಿಸುವ ನಿಮಿತ್ತವಾಗಿ ಯೋಚಿಸಿ, ಶಕ್ರ ತೀರ್ಥದಲ್ಲಿ ಅದು ನಳಿನಿ ಹೋದಹಾಗೆ ಅದರ ದರ್ಶನದಿಂದ ಶಕುಂತಲಾ ಸ್ಕೃತಿಯುಂಟಾದಹಾಗೆ ಕಲ್ಪಿಸಿರುವುದು ಕವಿಯ ಅನ್ಯಾದೃಶಶಕ್ತಿಯನ್ನು ತೋರಿಸುವುದು, ಈ ಸಂದರ್ಭವು ಲೋಕದ ಸ್ಥಿತಿಗೆ ಸರಿಯಾಗಿರುವುದರಿಂದ ಪ್ರೇ ಕ್ಷಕರಲ್ಲಿ ಕಲ್ಪಿತವಾದ ಸಂಗತಿಯೆಂದು ತೋರದೆ ಇರುವುದು ಆಶ್ಚರವಲ್ಲ. ಮೇನಕೆಯು ಶಕುಂತಲೆಯನ್ನು ಕರೆದುಕೊಂಡು ಹೋದ ಸಂವಿಧಾನವೂ ಅತಿಶಯವಾದ ಸಂವಿಧಾನವೇ ಆಗಿರುವುದು, ವಿಶ್ವಾಮಿತ್ರರಿಂದ ಜನಿಸಿ ಕಣ್ಯ 3,