ಪುಟ:ಕಾದಂಬರಿ ಸಂಗ್ರಹ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಾಕುಯಲ್ಲಿ ನಿಂತಬಳಿಕ ಮೋಹನನು ಹಲವು ಗೂತರರನ್ನು ದುರ್ಗಕ್ಕೆ ಕಳುಹಿ, ಅಲ್ಲಿ ನಡೆಯುವ ಸಂಗತಿಗಳೆಲ್ಲವನ್ನೂ ತನಗೆ ತಿಳುಹಿಸಬೇಕೆಂದು ಆಜ್ಞಾಪಿಸಿದ್ದನು. ಅವರಲ್ಲೋರ್ವನು, ರಾಜಸಚಿವರ ಸಂಭಾಷಣೆಯನ್ನೂ ಮತ್ತು ಅವರ ತೀರ್ಮಾನ ವನ್ನೂ ಹೇಗೆಯೋ ತಿಳಿದುಕೊಂಡು ಬಂದು ಅದನ್ನು ಮೋಹನನಿಗೆ ಹೇಳಿಬಿಟ್ಟನು. ಇದನ್ನು ಮೋಹನನು ಮು:ಫರನಿಗೆ ತಿಳುಹಿಸಿದನು. ಆಗ ಮುಜಫರನು ಸೇನಾಸಮೇ ಶನಾಗಿ, ಪ್ರಯಾಣ ಸನ್ನದ್ದನಾಗಿದ್ದ ರಾಜಾ ಭಗವತೀದಾಸನನ್ನು ಇದಿರಿಸಿ ಅವನ ಪುತ್ರಿಯನ್ನು ಬಲಾತ್ಕಾರವಾಗಿ ಕರೆದೊಯ್ಯುವೆನೆಂದು ಶಪಥಮಾಡಿಕೊಂಡು ಜಸಲ ಮೀರದ ಮಾರ್ಗದಲ್ಲಿದೆ. ಪ್ರಯಾಣವನ್ನು ಬೆಳೆಯಿಸಿದನು. ಮೋಹನಸಿಂಹನ ಅವ ನನ್ನನುಸರಿಸಿದನೆಂಬುದನ್ನು ಬರೆಯಬೇಕಾದುದರ ಆವಶ್ಯಕವೇ ಇಲ್ಲವು. ಐದನೆಯ ಅಧ್ಯಾಯ. ಸಂಜೆಯಾಯಿತು, ಹಾಲುಚೆಲ್ಲಿದಹಾಗೆ ಬೆಳದಿಂಗಳು ಬಂದಿತು. ಕಳೆಯಾ ನಿಂದ ಹೊರಸೂಸುವ ಅಮೃತವಳ್ಳಿ ಗಳು ಸರ್ವರಿಗೂ ಅತ್ಯುತ್ಸಾಹವನ್ನು ಉಂಟು ಮಾಡಿದುವು ಇಂದು ದುರ್ಗದ ಸೈನಿಕರಲ್ಲಿ ದೊಡ್ಡ ಕೋಲಾಹಲವೆದ್ದಿರುವುದು, ಎಲ್ಲರಿಗೂ ಆಶ್ಚರ್ಯದ ಮೇಲಾಶ್ಚರ್ಯ ! ಆ ರಾತ್ರಿಯೇ ಪ್ರಯಾಣಮಾಡುವುದಕ್ಕೆ ಸಿದ್ಧರಾಗಿರ ಬೇಕೆಂದು ವಿಕ್ರಮಸಿಂಹ ಮಂತ್ರಿಪುಂಗವನು ಕಲಾ ಮೇಲೆ ಸೈನಿಕರಿಗೆ ತಿಳಿಯಿಸಿ ದನು. ಆ ಸಮಾಚಾರವು ಒಂದೆರಡು ನಿಮಿಷಗಳಲ್ಲಿಯೇ ಊರಲ್ಲೆಲ್ಲಾ ಪಸರಿಸಿತು, ಅನಂತರ, ಎಲ್ಲಿ ನೋಡಿದರಲ್ಲಿ ಜನಸಮೂಹಗಳೇ ಕಾಣಬರುತ್ತಿದ್ದುವು. ಒಂದೆಡೆಸೇರಿ ಕೌತುಕದಿಂದ ಮಂತ್ರಿಯ ಆಜ್ಞೆಯ ಕಾರಣವನ್ನು ಚರ್ಚಿಸುತ್ತಿರುವವರು ಕೆಲವರು. ಕರ್ತವ್ಯದಮೇಲೆ ಹೋಗಲು ಸಂಸಿದ್ಧರಾಗುತ್ತಿರುವ ಸೈನಿಕರು ಕೆಲವರು. ಯುದ್ಧ ಭೂಮಿಯ ನೋಟವನ್ನು ಹೃದಯಂಗಮವಾಗುವಂತೆ ತಮ್ಮ ಜತೆಗಾರರಿಗೆ ತಿಳಿಸುತ್ತಿ ರುವ ಸೈನಿಕರು ಕೆಲವರು. ಹಿಂದೆ ನಡೆದ ಯುದ್ಧಗಳಲ್ಲಿ ತಾವು ಪ್ರದರ್ಶಿಸಿದ ಧೈರ್ಯ ಶೌರ್ಯಗಳನ್ನು ಒಸಗಳಿಗೆ ವಿಮುರದ ಬರದ ಸೈನಿಕರು ಕೆಲವರು. ಮುಂದೆ ನಡೆವ ಯುದ್ಧದಲ್ಲಿ ಎಷ್ಟು ಭಯಂಕರವಾಗಿ ತಮ್ಮ ಶತ್ರುಗಳನ್ನು ಹೊಡೆದಟ್ಟುವೆ ವೆದು ತಮ್ಮ ಪರಾಕ್ರಮವನ್ನು ತಾವೇ ಪ್ರಶಂಸಿಸುತ್ತಿರುವ ಸೈನಿಕರು ಹಲವರು, ತಮ್ಮ ಆಯುಧಗಳನ್ನು ತೊಳೆದು ಶುಭ್ರಪಡಿಸುತ್ತಿರುವವರು ಕೆಲವರು, ತಮ್ಮ ಅಶ್ವಗ