ಪುಟ:ಕಾದಂಬರಿ ಸಂಗ್ರಹ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಲಾಸಿನಿ ೨೫. ಛಲ್ಲಾ ಹುಡುಕಿದನು, ಕಟ್ಟಕಡೆಗೊಂದು ಕಾಗದದ ,ಕಟ್ಟನ್ನು ತೆಗೆದು ಕೊಂಡು ನೋಡಲಾರಂಭಿಸಿದನು. ಅದರಲ್ಲೊಂದು ಕಾಗದವನ್ನು ಕಂಡು ವಿಸ್ಮಯಾವಿಷ್ಟನಾದಂತಾಗಿ ಅದನ್ನು ಓದಲಾರಂಭಿಸಿದನು, ಕಾಗದ :* ಮಿತ್ರಮಹಾಶಯರಾದ ಹೇಮಚ೦ದರ ಸನ್ನಿಧಿಯಲ್ಲಿ ಅನಾಥ ಭುಜಂಗನ ವಿಜ್ಞಾಪನೆಗಳು, ತಮ್ಮಿಂದಲ್ಲದೆ ಅನ್ಯಥಾ ಈ ದೀನನ ಉದ್ಧಾರವಾಗುವುದು ಕೇವಲ ಅಸಂಭವವೆಂಬುದು ತಿಳಿದ ಅಂಶವೇ ಆಗಿರುತ್ತದೆ. ವಿಜಯಿನಿಯು ವಿಲಾ ನಿನ್ನಿಯ ಮಾತಿಗೆ ಪ್ರತಿಯಾಡುವುದಿಲ್ಲವಾಗಿ ತಾವು ನನ್ನನ್ನು ಉದ್ದಾರ ಮಾಡಬೇಕು. ದೇವೇಶರ ಸಾಮರ್ಥ್ಯವು ಏನೂ ನಡೆಯಲಿಲ್ಲ. ಆದರೂ ಸಮಯವನ್ನರಿತು ಸಹಾಯ ಮಾಡುವುದಾಗಿ ಹೇಳಿರುತ್ತಾರೆ. ಅಂತೂ ಅನಾಥನನ್ನು ಕೈ ಹಿಡಿದು ಉದ್ಧರಿಸುವ ಸರಭಾರವೂ ತಮ್ಮದಾಗಿರುತ್ತದೆ. ತಾವು ಕರಿಕಲ್‌ಗೆ ಯಾವಾಗ ಬರುತ್ತೀರಿ, ತಿಳುಹಿಸಬೇಕು, ಅನಾಥ ಭುಜಂಗನ ಕಾಗದವನ್ನು ನೋಡಿ, ಕಳ್ಳಮುದುಕನ್ನು ಬಹಳ ಹೊತ್ತು ಆಲೋಚಿಸುತ್ತಿದ್ದಂತೆ ತೋರುತ್ತಿತ್ತು. ಅಷ್ಟರಲ್ಲಿಯೇ ಮುದುಕನು ಚಕಿತನಾಗಿ ತಕ್ಷಣವೇ ಹೊರಗೆ ಬಂದು ಸುತ್ತಲೂ ನೋಡಿ ದನು, ಮನೆಯ ಗೋಡೆಯನ್ನೇ ಆಶ್ರಯಿಸಿಕೊಂಡು ಮನೆಯ ಹಿಂಭಾಗಕ್ಕೆ ಹೋಗಿ ಕೈದೋಟದಲ್ಲಿ ನುಗ್ಗಿ ಎಲ್ಲಿಯೋ ಮಾಯವಾದನು. ಸಪ್ಪ ಗುಚ್ಛ.

ಕಿ Ms. ೪

de | ದಂಬಿನಿಯ ಕಲಾಲೇಶವೂ ಇಲ್ಲದೆ ಕುಭವದ ಫಸ ನೀಲವರ್ಣದಿಂದ ವಿರಾಜಿಸುತ್ತಿದ್ದ ಜ್ಯೋತಾಪುರ, - ವಾದ ಆಕಾಶದಲ್ಲಿ ಕಾಂತಿಯುಕ್ತವಾಗಿ ಥಳ ಥಳಿಸುತ್ತಿದ್ದ ಅಗಣಿತ ಉಡುಗಗಳ ತೇಜೋರಾಶಿಯು ಆನಂದವನ್ನು ಬೀರುತ್ತಲಿತ್ತು ! 1 (