ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.8೩v ಅರವತ್ತೈದನೇ ಅಧ್ಯಾಯ ತೆನೆ, ಒಂದಾನೊಂದುದಿನ ಪಾರ್ವತೀಸಮೇತನಾರ ವರಮೇಶ್ವರನು ಆ ಜೇ ಇಸ್ಥಾನದಲ್ಲಿ ಸುಖದಿಂದ ಸಂಚಾರವಂ ಮಾಡುತ್ತಾ ಒಂದುವೇಳೆ ಪಾರ್ ತೀದೇವಿಯು ಚಂಡನಾಡಬೇಕೆಂಬ ಇಚ್ಛೆಯಿಂದ ತನ್ನ ಪತಿಯ ಅಪ್ಪಣೆ ವಿಡಿದು ಸಂತೋಷದಿಂ ಚಂಡಪಿಡಿದು ಅತಿರಭಸದಿಂದ ಉಬ್ಬುತ್ತಾ ತಗ್ಗು ತಾ ಎಡಬಲಕ್ಕೆ ಒಲವುತ್ತಾ ಕಟ್ಟದತುರುಬು ಸಡುಲಿ ಝಲ್ಲನೆ ಪುಪ್ಪಂ ಗಳು ಉದುರುತ್ತಿರಲು, ಕಿರುಬೆಮರಿಂದಾಗಂಡಸ್ಥಳದ ಮಕರಿಕಾಪತ್ರ ಕರಗಲು ಪದ್ಯಗಂಧವುಳ್ಳ ಶ್ವಾಸವ೦ಟಬಂದ ತುಂಬಿನಿಂದ ನೋಡು ತಾ ಕುಪ್ಪಸದಿಂ ಪೊರಮಟ್ಟು ಬಂದನೆಂಬಂಶ ತೋಯ್ಸ ಚಂಚಲಕು ಚಗಳಿಂದೊಪ್ಪುವ ಹಲವುವಾಳೆ ಚಂಡಬಡಿಯಲೂ, ಕಂದಾದ ಅಂಗೈ ಗಳಿಂದ ಚಂಡು ಮೋದ ಸ್ಥಳ೦ಗಳ೦ನೋಳ್ಳ ದೃಷ್ಟಿಗಳಿಂದ ಕುಣಿವ ಪುರ್ಬುಗಳಿಂದಲೂ ಅತ್ಯಂತಹರ್ಷದಿಂನೋಳ್ಳ ಪರಮೇಶ್ವರನ ಮುಂದೆ ಚಂಡನಾಡುತ್ತಿರ್ದ ಲೋಕಮಾತೆಯಾದ ಪಾರ್ವತೀದೇವಿಯನ್ನು ಆಕಾಶ ಮಾರ್ಗದಲ್ಲಿ ಪೋಪ ವಿದಳ, ಉತ್ಸಲರೆಂಬ ರಾಕ್ಷಸರು ತಮ್ಮ ಭುಜಬಲ ದಿಂದ ಮೂರುಲೋಕವ ತೃಣೀಕರಿಸಿದವರಾಗಿ ಪೋಗುತಿರ್ದು ಚಂಡ ನಾಡುವ ಪಾರ್ವತೀದೇವಿಯಂಕಂಡು ಮದನಬಾಣಕ್ಕೆ ಶಿಲುಕಿ ಕಾಲತುಂ ಬಿದವರಾಗಿ ಅಂತರಿಕ್ಷದಿಂ ಭೂಮಿಗೆ ಬಂದು ಮಾಯದಿಂ ತಮ್ಮ ರೂಪ ಗಳಂ ಮಾಚಿ ಶಿವಗಣಂಗಳ ರೂಪವಂ ಧರಿಸಿ ಅಮ್ಮನವರ ಸವಿಾಪಕ್ಕೆ ಬರುತ್ತಿರಲು, ಸರ್ವಜ್ಞನಾದ ಈಶ್ಚರನು ಅವರ ಭಾವಮಲಕಂಡು ದೇ ವಿಯರಿಗೆ ಕಣ್ಣ ಸನ್ನೆಯಿಂದ ತೋರಲು, ಸರ್ವಜ್ಞನಾದ ಪರಮೇಶ್ರನ ಅರ್ಧಶರೀರೆಯಾದ ದೇವಿಯರು ಆಸನ್ನಯನರಿತು ಆ ರಾಕ್ಷಸರಿಬ್ಬರೂ ಒಂದೇವಾಳೆ ಬೀಳಂತೆ ಎದೆಯಮೇಲೆ ತಾಕುವಂತೆ ಚಂಡನಿಡಲಾಗಿ ಮು ಹಾಬಲಿಷ್ಠರಾದ ದಾನವರೀರ್ವರೂ ಮಹಾದೇವಿ ಇಟ್ಟ ಹಸ್ತದ ಚಂದಿನ ಪಟ್ಟಿ ನಿವ ಸುತ್ತಿ ಸುತ್ತಿ ಪಕ್ಷವಾದ ಹಣ್ಣುಗಳು ಫಾಳಿಗೆ ಬೀಳಂತೆ ಒಂದೇ ಫಾಯದಿಂ ಇಬ್ಬರು ರಾಕ್ಷಸರೂ ಹತರಾಗಲು ಆ ಕ್ಷಣವೇ ಆ ಚಂಡು ಲಿಂಗವಾಯಿತು, ಆ ಲಿಂಗದ ಹೆಸರು ಕಂತುಕೇಶ್ವರನು, ಆ ಲಿಂಗ ದ ಪೂಜೆಯಿಂದ ಸಕಲ ದುಃಖನಿವಾರಣವು, ಈ ಕಂತುಕೇಶ್‌ರನ ಪೂಜೆ