ಪುಟ:ಕೆಳದಿನೃಪವಿಜಯಂ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79. ಪಂಚಮಾಶ್ವಾಸಂ ನಾಲ್ಕಾರುತಿಂಗಳಪ್ರನ್ನೆವರಂ ಕಾದಿಸಲಾಗಳಾ ಕೋಟೆಯ ನಾಲ್ಗಡೆ ಯಡೆದಿಟ್ಟೆಗಳೊಳೆ ಬರುಜಗಳನೆಬ್ಬಿಸಿ ಶತಮ್ಮ ಗಳಂ ಪೂಡಿಸಿ ತತ್ರ ಯೋಗಮುಖದಿಂದಾಬಿದುರೂರ ಕೊಂಟೆಯಂ ತೆಗೆದುಕೊಂಡು ಶಂಕರ ನಾರಾಯಣಭಟ್ಟನಂ ಕೈವಶಂಗೆಯಾ ಕೌಂಟೆಯಂ ಬಲಿಸಿ ಯೆಡವೂ ರ್ಮುಂಗಿನಾಡಾರುನಾಡುಕಟ್ಟುನಾಡು ಪಟ್ಟಗುಪ್ಪೆಮುಂತಾದ ಸೀಮೆಯ ಪ್ರಜೆಪರಿವಾರಂಗಳಂ ಕಾಣಿಸಿಕೊಂಡು ಕಾಣಿಕೆಗೊಂಡಬ೪ಕ್ಕಂ,ಸ್ಕಾಂ ದ ಪುರಾಣದೊಳೆ ಸನತ್ಕುಮಾರ ಸಂಹಿತೆಯೊಳೆ ಸಹ್ಯಾದ್ರಿಖಂಡದೊಳು ಸಿರ್ದಂತಾಬಿದುರರೊಳೆ ಸ್ನಾನವಾತ್ರ ದೊಳನೇಕದುಪ್ಪತಂಗಳಂ ನಿವಾರಿಸ ಕಲಾವತಿಯ ನದಿಯ ತೀರದೊಳೆ ವೇಣುವನಮಧ್ಯದೊಳೆ ವಕದೆಡೆಯೊಳೆ ಪ್ರಾದುರ್ಭಾವವಾಗಿ ಮಹಾಪ್ರಸನ್ನ ಮೂರ್ತಿಯೆ ನಿಸಿ ಭಕ್ತ ಜನರ್ಗೆ ಬೇಡಿದಿಷ್ಟಾರ್ಥಂಗಳನೀಯುತುಂ ವಿರಾಜಿಸುತ್ತಿರ್ಪ ತದ್ವಿದುರ ನೀಲಕಂಠೇಶ್ವರಲಿಂಗದ ಪೂಜೆ ಲೋಪವಾಗದೆ ನಡೆವಂತು ಕಟ್ಟಳಯಂ ರಚಿಸಿ ಮತ್ತಮಾ ವೆಂಕಟಪ್ಪನಾಯಕಂ ಬಿದರೂರಿಂ ತೆರಳು ಘಟ್ಟವನಿಳಿದು ಹೊನ್ನೆ ಯಕಂಬಳಿಯೆಂಬ ಮನ್ನೆ ಯನಂ ಮಗ್ಗಿಸಿ ಹೊಸಂಗಡಿ ಕಡರಿ ಬಗ್ಗವಾಡಿಯ ಹೋಬಳಿ ಕೊಲ್ಲೂರು ಮುಂತಾದ ಹೊನ್ನೆ ಯಕಂಬಳಿಯಾಳ ಸೀಮೆಯ ಪ್ರಜೆಪರಿವಾರಮಂ ಕಾಣಿಸಿ ಕೊಂಡು ಬಗ್ಗೆ ವಾಡಿ ಹೊಸಂಗಡಿಯೆಂಬ ಸ್ಥಳಂಗಳೂಳೆ ಪರಿಸ್ತರಣಮಂ ನಿರ್ಮಾಣಂಗ್ರೆಸಿ ಕೊಲ್ಲೂರುಮೂಕಾಂಬಿಕೆಯಮ್ಮನವರ ಪೂಜಾದಿ ವಿಭವಂ ಲೋಪವಾಗದಂತೆ ನಡೆವಂತು ನಿಯಾಮಕಂಗೆಸಿದನಂತು ಮಲ್ಲದೆಯುಂ || ೪೪ ಎಡಬಲದೊಳಿರ್ಪ ಧೂರ್ತರ ಕಡುಹಂ ಮಗ್ಗಿಸಿ ಸದಾಶಿವೇಂದ್ರನ ಸೌತ್ರ! *ಪಿಡಿದು ಪುಂಡರ್ಕಳಂ ಬಳಿ ಕಡಿಮಲೆಯ ಧರಿತ್ರಿಯಂ ಕರಂ ವಶಗೈದಂ || ೪೫ ಭೈರಸವೊಡೆಯರುವಂ ತ ವೀರಂ ನಿಗ್ರಹಿಸಿ ಕೊಪ್ಪಮಂ ಬೆಳ್ಳರೆಯಂ |