ಪುಟ:ಕೆಳದಿನೃಪವಿಜಯಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xij ಮಲ್ಲಿಕಾರ್ಜನ್ನ ರಾಜಶೇಖರ, 1 ವಿರೂಪಾಕ್ಷ ಎಂದು ಅರ್ಥಮಾಡಿದರೆ ಸಂಗತವಾಗುವಂತೆ ತೋರುತ್ತದೆ. ವಿಜಯನಗರದ ಅರಸರಿಗೂ ಕೆಳದಿಯ ನಾಯಕರಿಗೂ ಬಹುಕಾಲ ಸಂಬಂಧವಿತ್ತು. ಕೃಪೆರಾಯರು : ಪ್ರಬಲನಾಗುತ್ತಿದ್ದ ಚೌಡಪ್ಪ ನಾಯಕನನ್ನು ಕರೆಸಿ ಅವನಿಂದ ಆದ ಸಹಾಯಕ್ಕೆ ಪ್ರತಿಫಲವಾಗಿ ಕೆಳದಿ ಮುಂತಾದ ಗಣಿಗಳ ಮೇಲೆ ಅಧಿಕಾರವನ್ನು ಕೊಟ್ಟನೆಂದೂ ಆಮೇಲೆ ಚಡಪ್ಪನಾಯಕನಿಗೆ ಶಕ ೧೪೦೦ರಲ್ಲಿ ಎಂದರೆ ಕ್ರಿ. ಶ. ೧೫೦೦ ರಲ್ಲಿ ಪಟ್ಟ ವಾಯಿತೆಂದೂ ಗೊತ್ತಾಗುತ್ತದೆ. ಆ ಶಿವಪ್ಪನಾಯಕನ ಕಾಲಕ್ಕೆ ವಿಜಯನಗರದ ರಾಜವು ಕ್ಷೀಣದೆಸೆಗೆ ಬಂದು ಶ್ರೀರಂಗರಾಯನು ಅಸ ಹಾಯನಾಗಿರಲು, ಶಿವಪ್ಪನಾಯಕನು " ಬೇಲೂರಂ ತೆಗೆದುಕೊಂಡು ಶ್ರೀರಂಗರಾಯರ್ಗಿತ್ತು ರಾಂಗಸಂಸ್ಥಾನಮುಂ ನೆಲೆಗೊ೪ ” ಸಿದನು. ಈ ಶಿವಪ್ಪನಾಯಕನೇ ಇಕ್ಕೇರಿಯ ಅರಸರಲ್ಲೆಲ್ಲ ಪ್ರಸಿದ್ದನು, ಈತನ ಸುಪ್ರಸಿದ್ದವಾದ ಶಿಸ್ತಿನ ವಿಚಾರವಾಗಿ ಈ ಗ್ರಂಥದಿಂದ ಯಾವುದೂ ಸ್ಪಷ್ಟವಾಗಿ ತಿಳಿದುಬರುವುದಿಲ್ಲ, ಆದರೆ ವ್ಯವಸಾಯವನ್ನು ಹೆಚ್ಚಿಸಿ ಒಂದು ಗೋಪ್ಪಾದದಷ್ಟು ಭೂಮಿಯನ್ನು ಕೂಡ ಪಾಳು ಬೀಳಿಸದಂತೆ ರೈತರಿಗೆ ಬೇಕಾದಷ್ಟು ಸಹಾಯವನ್ನು ಕಲ್ಪಿಸಿಕೊಟ್ಟು “ ನೆರೆವರಿ ವರಾಡ' ಮುಂತಾದ ದಂಡಗಳನ್ನೂ ಅನ್ಯಾಯವಾದ ತೆರಿಗೆಗಳನ್ನೂ 1* There are inscriptions which indicate unmistakably that Mallikarjuna’s son Raja Sekhara succeeded followed probably by Virupaksha II” –1 Little knoun chapter of V gugu Nagar IItslory by Prof. S, krishnaSWanii IyengaT ), 21. 2 ಈ ಗ್ರಂಥದಲ್ಲಿ ಮೊದಲು ಅಚ್ಚುತರಾಯನೆಂದ , ಆಮೇಲೆ ಕೃಷ್ಣರಾಯ ನೆಂದೂ ಹೇಳಿದೆ, ಪುಟ ೧೯-೦ 3 ಕೃಷ್ಣರಾಯನು ೧೫೯ ರಲ್ಲಿ ಪಟ್ಟಕ್ಕೆ ಬಂದನೇದು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ, ಆದುದರಿಂದ ಇದಕ್ಕೆ ಸಾಂಗತ್ಯವನ್ನು ಹೇಳುವುದು ಕಸ್ಮವಾಗಿದೆ. ಒ - - - - - - - - - ೨