ಪುಟ:ಕೆಳದಿನೃಪವಿಜಯಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xiv ತಪ್ಪಿಸಿ, “ ಸೀಮೆಯಂ ರಕ್ಷಿಸಿದಂ ” ಎಂದೂ, ಇವನ ಕಾಲದಲ್ಲಿ ಕಳ್ಳ ಕಾಕ್ರಕಾಟವಿರಲಿಲ್ಲವೆಂದೂ, ಕಳವುಮಾಡಿದ ಒಂದು ನರಿಯನ್ನೂ ಹಿಡಿತರಿಸಿ ಕಾಯಂ ಮಾಡಿಸಿದನೆಂದೂ ಗೊತ್ತಾಗುತ್ತದೆ, ಇಕ್ಕೇರಿಯ ಅರಸರಿಗೆ “ ಎಡವಮುರಾರಿ, ಕೆಟೆಕೋಲಾಹಲ, ಏಕಾಂಗಿವೀರ, ದೋನೇಜ, ದೋಖಂಡೆರಾಯ, ವೈರಿಸಪ್ಪಾಂಗಹರಣ, ಪಶ್ಚಿಮಸಮುದ್ರಾ ಧೀಶ್ವರ, ವಿಶುದ್ಧಾ ದೈತಸಿದ್ಧಾಂತಪ್ರತಿಷ್ಠಾಪನಾಚಾರ' ಎಂಬ ಬಿರುದು ಗಳು ಇದ್ದುವು. 1 ಇವರಿಗೂ ಮೈಸೂರಿನವರಿಗೂ ಪದೇಪದೇ ಯುದ್ದ ವಾಗುತ್ತಲೇ, ಇತ್ತು, ಇವರುಗಳು ಎಂದೂ ಪರಸ್ಪರ ಮೈತ್ರಿಯಿಂದ ಇದ್ದ ಹಾಗೆ ಕಾಣುವುದಿಲ್ಲ. ಆದಕ್ಕೋಸ್ಕರವೇ ಮೈಸೂರಿನ ರಾಜರ ಪ್ರಸ್ತಾಪ ಬಂದಾಗಲೆಲ್ಲಾ 'ಮಾಯಾವಿಗಳು ' ಅಥವಾ 'ಮಾಯಾವಾದಿಗಳು? ಎಂಬ ಪದವು ಪರ್ಯಾಯವಾಗಿ ಉಪಯೋಗಿಸಲ್ಪಟ್ಟಿದೆ, ಮತ್ತು ಅವರ ( ಮದೋದ್ರೇಕವನ್ನು ಮಗ್ಗಿ ಸಿದ ನೆಂದು ಮುಂತಾಗಿ ಹೇಳಲ್ಪಟ್ಟಿದೆ. ? ಈ ನಾಯಕರು ವೀರಶೈವಮತಾವಲಂಬಿಗಳು, ಇವರು ಜನ ಸಾಮಾನ್ಯರಿಗೂ ಉಪಯೋಗವಾಗುವಂತೆ ತಟಾಕಾರಾಮಾಗಹಾರಾದಿಗ ಳನ್ನು ಕಲ್ಪಿಸಿಕೊಟ್ಟರು. ಶೃಂಗೇರಿಯಮಠ, ಕೃಷ್ಣಾ ನಂದಸ್ವಾಮಿ ಗಳಮಠ, ಇವುಗಳಿಗೆ ಬೆಂಬಲವಾಗಿ ನಿಂತು ಸಹಾಯಮಾಡಿದರು. ಇದರಂತೆ ಶೈವ ವೈಷ್ಣವ ದೇವಾಲಯಗಳಿಗೂ ಜೈನರ ಬಸದಿಗಳಿಗೂ ಮಹಮ್ಮದೀಯರ ಮಸೀದಿಗಳಿಗೂ ಅಗ್ರಹಾರಕ್ಷೇತಾರಾವುಗಳನ್ನು ಕೊಟ್ಟಂತೆ ತಿಳಿದುಬರುತ್ತದೆ. ಇವರ ಕಾಲದಲ್ಲಿ ರಾಮೇಶ್ವರದೇವಸ್ಥಾನ, ವೀರಭದ್ರ ದೇವಸ್ಥಾನ ಅಘೋರೇಶ್ವರದೇವಸ್ಥಾನ, ಮುಂತಾದ ವಿಚಿತ್ರತರವಾದ ಶಿಲ್ಪ ಕೆಲಸ - 1 ೩೩: ೩, ೭೩, ೭೪, ೯, ಇಟಗಳನ್ನು ನೋಡಿ, ರೈಸಸಾಹೇಖರ “ ಎಡವಮುರಾರಿ ' ಎಂಬ ಬಿರುದಿಗೆ ಬೇರೆ ಕಾರಣವನ್ನು ಹೇಳುತ್ತಾರೆ. 2 ಪುಟ, ೯೯, ೧೧೪, ೧೧, ೧೧೯, ೧-೫, ೧೩೩, ೧೩೫, ೧೭೬ ೧೦, ೧೧, ೧೮, ೧೯, ೨೦೫,