ಪುಟ:ಕೆಳದಿನೃಪವಿಜಯಂ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

214 ಕೆಳದಿನ್ನಪವಿಜಯಂ ಮುರಿಗೆಯ ಸಮಯದೆ ವರ್ತಿಸು ತಿರುತಿಹ ವರಚನ್ನ ವೀರದೇವರನುರುಹಂ | ಗರದ ಮಠದಾಧಿಪತಕೆ ಚಿರಮೆನೆ ನೆಲೆಗೊಳಿಸಿ ನಿಲಿಸಿದಂ ತದ್ರೂಪಂ | V೫. - n 1 #an ಟಾದ್ರಿನಾಯಕನ ಹವಾಲೆಯಲ್ಲ) ಇರುವಹಾಗೆ ವಾಯಾವಿಗಳು ಒಂದು ಆನೆಯ ಹಾಕಿಕೊಟ್ಟಿದ್ದರು, ಹೀಗಿರುತ್ತಿದ್ದು ಕೆಲವು ದಿವಸದ ಮೇಲೆ ತಾವು ಹವಾಲೆಗೆ ಹಾಕಿಕೊಟ್ಟ ತಮ್ಮ ಬಗೆ ಆನೆಯನ್ನು ತಿರುಗಿ ತರಹೇಳಿ ಗುರುಮನುಷ್ಯರ ಕಳುಹ ಲಾಗಿ ವೆಂಕಟಾದ್ರಿನಾಯಕನು ಆ ಆನೆಯಂ ಕೊಡದೆ ಚಂಡಿಸಲಾಗಿ ಆ ವೆಂಕಟಾದ್ರಿ ನಾಯಕನಂ ಆಏಗುಂಡಿನಲ್ಲ, ಇಡಿಸಿ ಕೊಲಿಸಿ ತಮ್ಮ ಬಗೆ ಆನೆಯನ್ನು ತೆಗೆದು ಕೊಂಡು ಹೋಗಲಾಗಿ ಆಗ ವಾಯಾವಿಗಳು ಈ ವರ್ತಮಾನಮುಂ ಕೇಳು ಈ ವೆಂಕಟಾದ್ರಿನಾಯಕನು ಹೇಗಾದರೂ ತಮ್ಮ ಹೊಂದಿದವನು ಈತನ್ನು ದುರ್ಬೋಧೆ ಕೇಳಿ ದುರ್ಬುದ್ಧಿ ಯಿ: ಮೃತನಾದನು, ಈತಗೆ ಸಂತಾನವಿಲ್ಲವೆಂಬುದಂ ತಿಳಿದು ಆ ವೆಂಕಟಾದ್ರಿನಾಯಕನ ಪತ್ನಿ ಗಣಗೂರ ಲಿಂಗಮ್ಮ ನೆಲಬಾಕೆಗೆ ಒಳಗೆ ಬರೆದ ವಿವಪ್ರಕಾರ ಮೂಲಪುರುಷ ಬೇಲೂರ ವೆಂಕಟಾದಿ)ನಾಯಕನ ಪಟ್ಟದ ಸ್ವಿ ಯಲ್ಲು ಜನಿಸಿದ ಕೃಷ್ಟಪ್ಪನಾಯ್ಕನ ಮೊಮ್ಮಗನಾದ ಕುಮಾರಕೃಷ್ಣಪ್ಪ ನಾಯಕನೆಂಬತನಂ ಗಣಗೂರು ಲಿಂಗಪ್ಪಗೆ ಸಾಕುಕೊಡಿಸಿ ಆಕೆಗೆ ಗೃಹೀತ ಪುತ್ತುನಂ ಮಾಡಿಸಿ ಮೇಲುಸರ ೦ಬರಿಕೆಮೇಲೆ ಇಟ್ಟು ಕೊಂಡು ಇದ್ದ ರು. ಇನ್ನು ಮೂಲಪುರುಷ ಬೇಲೂರ ವೆಂಕಟಾದ್ರಿನಾಯಕನ ತೃತೀಯಪತ್ನಿ ಯಲ್ಲವೆ ಜನಿಸಿದ ಪುತ್ರನ ಹೆಸರು ರಂಗಪ್ಪನಾಯಕ : ಈ ರಂಗಪ್ಪನಾಯಕನು ಉಚ್ಚಂಗಿಯೆಂಬ ಸ್ಥಳದಲ್ಲು ಮಸಲತಿಯಲ್ಲು ಕೆವಿಗುಂಡಿನ ಘಾಯದಿಂದ ಮೃತ ನಾದನು, ಆ ರಂಗಪ್ಪನಾಯಕನ ಮಕ್ಕಳ ಹೆಸರು, ಹಿರಿಯಮಗನ ಹೆಸರು ದೊಡ್ಡಯ್ಯರನ್ನು ಕಿರಿಯಮಗನ ಹೆಸರು ವೆಂಕಟಾದ್ರಿನಾಯಕ ; ಆ ರಂಗಪ್ಪನಾ ಛುಕಗೆ ಹಾಗೆ ಇಬ್ಬರು ಮಕ್ಕಳು; ಆ ಇಬ್ಬರೊಳಗೆ ವೆಂಕಟಾದ್ರಿನಾಯಕಗೆ ಸಂತಾನವಿಲ್ಲ, ಈ ವೆಂಕಟಾದ್ರಿನಾಯಕನ ಅಣ್ಣನಾದ ದೊಡ್ಡರಸಿನ ಮಕ್ಕಳ ಹೆಸರು, ಹಿರಿಯಮಗನ ಹೆಸರು ಕೃಷ್ಣಪ್ಪನಾಯಕ ಚಿಕ್ಕ ಮಗನ ಹೆಸರು ಕುಮಾರಸ್ವಾಮಿ ; ದೊಡ್ಡಯ್ಯರಸಿಗೆ ಹಾಗೆ ಇಬ್ಬರು ಪುತ್ರರು ಜನಿಸಿ ಬಲವಂತರಾಗಿ ಇರು, ಭಲ್ಯದಲ್ಲು ಇದ್ದು ರಾಜ್ಯಂಗೆಯ್ಯುತಿರ್ಪ ಗೋಪಾಲನಾಯಕಂ ಬಹು ಮೂತ್ರವ್ಯಾಧಿಮೂಲದಿಂ ಮೃತನಾಗಲಾಗಿ ಆ ತರುವಾಯ ರಂಗಪ್ಪನಾಯಕನ