ಪುಟ:ಕೆಳದಿನೃಪವಿಜಯಂ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೪ M ದ್ವಾದಶಾಶ್ವಾಸಂ 221 ದೊಳ್ಳರ್ತಿಸುತ್ತಿರ್ದ ವಿದ್ಯಾಶಂಕರರಿಂದಮಾಶ್ರಮವಂ ಕೈಕೊಂಡು ಭಾಗ್ಗಮಂ ಪಡೆದು ಬಳಿಕಾ ದೇವಿಯ ನಿರೂಪದಿಂ ಪಂಪಾಕ್ಷೇತ್ರ ಸಮೀ ಪದೊಳೆ ವಿದ್ಯಾನಗರಿಯೆಂಬ ಪಟ್ಟಣಮಂ ನಿರ್ಮಾಣಂಗೆಯ್ಲಿ ಆ ರತ್ನ ನಿಂಹಾಸನದಲ್ಲಿ ಹರಿಹರ ಬುಕ್ಯರೆಂಬಿರ್ವಸಹೋದರರೊಳೆ ಪಿರಿಯ ನಾದ ಹರಿಹರರಾಯಂಗೆ ಪಟ್ಟಮಂ ಕಟ್ಟಿಸಿ, ಪಂಪಾಕ್ಷೇತ್ರವಾರಭ್ಯ | ಕೃಷ್ಟವೇನೇಪರಂತವಾದ ರಾಜ್ಯಕ್ಕೆಲ್ಲಂ ಶ್ರೀವಿರೂಪಾಕ್ಷನೆ ಕರ್ತ ನೀವಾಸ್ವಾಮಿಯ ಹೆಸರಿನಲ್ಲಿ ಒಪ್ಪವಂ ಹಾಕಿಕೊಂಡು ಆ ಸ್ವಾಮಿಯಲ್ಲಿ ಪರಮಭಕ್ತಿಯೊಳೆ ನಡೆದುಕೊಂಡು ಸದ್ದ ರ್ಮದಿಂ ರಾಜಪ್ರತಿಪಾಲನಂಗೆ ಯುದೆಂದು ನಿಯಾಮಿಸಿ ನಿಲಿಸಿ, ಆ ಬಳಿಕಂ ತಾವು ರೇವಣಸಿದ್ದೇಶ್ವರ ನೆಂಬ ಗಣಾಧೀಶ್ವರನಿಂ ಚಂದ್ರಮಠರನೆಂಬ ಲಿಂಗಮಂ ಪಡೆದು ಶೃಂಗಪುರವರಕ್ಕೆ ತಂದಾಮಠದೊಳ್ಳೆಂದು ಕೆಲಕಾಲಂ ವರ್ತಿಸುತ್ತು ಮರ್ದು ಮುಕ್ತರಾದರೆ. ಆ ವಿದ್ಯಾರಣ್ಯರ ತರುವಾಯ ಚಂದ್ರಶೇಖರಭಾರತೀಂರ್ದ, ಆ ತರುವಾಯ ನೃಸಿಂಹಭಾರತಿಗಳೆ, ಆ ತರುವಾಯ ಪುರುಷೋತ್ತಮ ಭಾರತಿಗಳ, ಆ ತರುವಾಯ ಶಂಕರಭಾರತಿಗಳೆ, ಆ ತರುವಾಯ ಚಂದ್ರ ಶೇಖರಭಾರತಿಗಳ, 1 ಆ ತರುವಾಯ ನೃಸಿಂಹಭಾರತಿಗಳೆ, ಆ ತರು ವಾಯ ಪುರುಷೋತವಭಾರತಿಗಳೆ, ಆ ತರುವಾಯ ರಾಮಚಂದ್ರ ಭಾರತಿಗಳೆ, ಆ ತರುವಾಯ ನೃಸಿಂಹಭಾರತಿಗಳ, 1 ಆ ತರುವಾಯ ಮತ್ತಂ ನೃಸಿಂಹಭಾರತಿಗಳೆ, ಆ ತರುವಾಯ ಅಭಿನವ ನೃಸಿಂಹಭಾರತಿ ಗಳೆ, ಆ ತರುವಾಯ ಸಚ್ಚಿದಾನಂದಭಾರತಿಗಳೆ, ಆ ತರುವಾಯ ಸಚ್ಚಿದಾ ನಂದಭಾರತೀಸ್ವಾಮಿಗಳ ಕರಕಮಲಸಂಜಾತರಾದ ಅಭಿನವಸದಾ ನಂದ ಭಾರತಿಗಳ. ಇಂತಪ್ಪ ಅಭಿನವಸಚ್ಚಿದಾನಂದಭಾರತೀಸ್ವಾಮಿಯವರಂ ಈಶ್ವರ ಸಂವತ್ಸರದ ಮಾರ್ಗಶಿರ ಬಹುಳ ೧೦ ರೊಳೆ | ಈ ನಾಲ್ಕು ಹೆಸರುಗಳು(ಕ್) ಪುಸ್ತಕದಲ್ಲಿಲ್ಲ, ಚ ಒ ೫ – - – mr