ಪುಟ:ಕೋಹಿನೂರು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಕೊಹಿನುರು ಮುಸಲಮಾನ ರಾಜ್ಯವೆಂದು ಯಾರೂ ಅರಿತಿರಲಿಲ್ಲ. ಇಷ್ಟು ದಿವಸದಮೇಲೆ ಮುಸಲಮನ ವಂಶದಲ್ಲಿ ಸೂರ್ಯಸ್ವರೂಪವಾಗಿ ಅಲಂಗೀರಷಹ ಅವತಾರವ ನೈತಿದ ಬಳಿಕ ಅಂಧಕಾರವು ಹೋಗಿ ಕೊರಾನಷರೀ ಫದ ಬೆಳಕು ಜಗತ್ತಿನ ಲೈಲಾ ಜಾಜ್ವಲ್ಯಮಾನವಾಯಿತು. ತಮ್ಮ ಬಾಹುಗಳಲ್ಲಿನ ಶಕ್ತಿಯಿಂದ ಹಿಮಾಲಯದಿಂದ ಕುಮಾರಿಕಾ ಪರ್ಯಂತ ಇರುವ ನೂರಾರು ರಾಜರು ಪಾದಾಕ್ರಾಂತರಾಗಿದ್ದಾರೆ. ತಮ್ಮ ಅಮಿತ ಪರಾಕ್ರಮವನ್ನು ಕೇಳಿ ರಾಜು ತಾನ ಮಹಾರಾಷ್ಟ್ರ ದೇಶಗಳಲ್ಲಿರುವ ದುರ್ಧಷ್ರ ಹಿಂದೂ ರಾಕ್ಷಸರು ಭಯ ದಿಂದ ವಿಷಾದದಿಂದಲದಿ ಮೃತಪ್ರಾಯರಾಗಿದ್ದಾರೆ. ತಮ್ಮ ಅಮಾನುಷಿಕ ಧರ್ಮಬಲದಿಂದ ಕೋಟಿಕೋಟಿ ಹಿಂದೂಗಳು ಮುಸಲಮಾನರ ಪದತಲದಲ್ಲಿ ಬಿದ್ದು ಉರುಳಾಡುತ್ತಾರೆ, ಮತ್ತು -೨೨ “ ಮತ್ತು, ನನ್ನ ಕಾಲೊದೆಯ ಬಲದಿಂದ ಸ್ತುತಿಪಾಠಕ ಅಫಜಲನ ಮೂಳೆಗಳನ್ನು ಚೂರ್ಣಮಾಡಬಲ್ಲೆನು.೨೨ ಸಮಾಬನು ಅಫಜುಲಖಾನನ ಎದೆಗೆ ಕಾಲಿಂದ ಬಲವಾಗಿ ಒಟ್ಟು ಸಲಕ್ಕೆ ಕೆಡುಹಿ ಹೀಗೆಂದು ಹೇಳತೊಡಗಿದನು._ ಸುಮ್ಮನಾಗು, ಗುಲಾ ಮನೆ ! ನಿನ್ನಂತಹ ಮುಖಸ್ತುತಿ ಮಾಡುವವರಾದ ವಂಚಕರ ದುರಾಲೋಚನೆಗೆ ಸಿಲುಕಿಬಿದ್ದು ಈಗ ಮೊಗಲರ ರಾಜ್ಯವು ಹಾಳಾಗಿ ಪಾತಾಳಕ್ಕೆ ಹೋಯಿತು ! ನಾನಲ್ಲವೆ, ರಾಜನೀತಿಜ್ಞ ? ಆದುದರಿಂದಲೇ ಇಪ್ಪತ್ತು ಕೋಟಿ ಭಾರತ ಸಂತಾ ನರು ಈಗ ನನ್ನ ಹೃದಯದಲ್ಲಣ ರಕ್ತವನ್ನು ಪಾನಮಾಡಲು ಆತುರರಾಗಿ ನಿಂತಿ ದ್ದಾರೆ! ಮೂರ್ಖರೋಳಗೆ ಮೂರ್ಖನು ನಾನು-ಆದುದರಿಂದಲೇ ಭಯದರ್ಶನ ದಿಂದ ಕತ್ತಿಯ ಪೆಟ್ಟಿನಿಂದಲೂ ಈ ಇಪ್ಪತ್ತು ಕೋಟಿ ಪ್ರಜೆಯನ್ನು ಸ್ವಾಧೀ ಸದಲ್ಲಿಟ್ಟು ಕೊಳ್ಳಬೇಕೆಂದು ಯೋಚಿಸಿಕೊಂಡಿದ್ದೆನು ! ನರಾಧಮನು ನಾನುಆದುದರಿಂದಲೇ ಲೋಕದುರ್ಜನನಾಗಿ ಲೋಕೋತ್ತರವಾದ ಪ್ರಾಚೀನ ರಾಜ ವಂಶದಲ್ಲಿ ಹುಟ್ಟಿದಂಥಾ ಮಹಾರಥಿಗಳನ್ನು ಗುಲಾಮರ ಜಾತಿಯಲ್ಲಿ ಸೇರಿಸಿ ಪರಿಗಣಿಸಬೇಕೆಂದು ಆಶೆಯುಳ್ಳವನಾಗಿದ್ದು ! ಮರಳು ಸೇತುವೆಯಿಂದ ಸಮು ದ್ರವನ್ನು ತಡೆಮಾಡುವುದಕ್ಕೆ ಪ್ರಯತ್ನಿಸಿದ್ದೆನು ! ನನಗೆ ಬಹು ಬಲವುಂಟಲ್ಲವೆ ? ನನ್ನ ಕೈಯಿಂದಲೇ ನನ್ನ ಬಲದ ದಾಹವನ್ನು ಕಡಿದುಕೊಂಡು ದೂರ ಬಿಸಾಟು ಬಿಟ್ಟಿತು ! ಪೂರ್ಣ ಧರ್ಮಾವತಾರನಲ್ಲವೆ ನಾನು ? ಇಚ್ಚಕ ಮಿಥ್ಯಾವಾದಿ