೨೨ Wvvvvvv 'ಭಾಂತಿವಿಲಾಸ MYVVVy v/ wwnMysvvvvvvvvvvvvvv ನಿನ್ನದಲ್ಲ ; ಸೇವಕರನ್ನಾವ ಮಟ್ಟಿನಲ್ಲಿಟ್ಟಿರಬೇಕೋ ಹಾಗಿಡದೆ ಆಗಿಂದಾಗ್ಗೆ ಸ್ನೇಹಿತನಂತೆ ನಿನ್ನೊಂದಿಗೆ ಮಾತಾಡುತಿದ್ದ ಅಪರಾಧವು ನನ್ನದು, ನೀನು ಗರ್ವಿತನಾಗಿರುವುದರಿಂದ ಸಮಯಾಸಮಯಗಳನ್ನರಿಯದೆ ಮಾತಾಡುತ್ತಿ. ಇನ್ನು ಮುಂದೆ ಪರಿಹಾಸವನ್ನು ಮಾಡಬೇಕಾದರೆ ನನ್ನ ಮನೋಭಾವವನ್ನು ತಿಳಿದು ಮಾಡಬೇಕು ; ಇಲ್ಲದಿದ್ದರೆ ನಿನಗೆ ಪ್ರಾಪ್ತವಾಗಿರುವ ಪರಿಹಾಸ ರೋಗವನ್ನು ತಾಡನ ಚಿಕಿತ್ಸೆಯಿಂದ ನಿವಾರಣೆ ಮಾಡುವೆನು ” ಎಂದನು. ಅದಕ್ಕೆ ಕಿಂಕರನು, “ ತಾವು ಪ್ರಭುಗಳಾದುದರಿಂದ ಹೊಡಿಯಬಹುದು , ನಾನು ದಾಸನಾಗಿರುವುದರಿಂದ ಅದನ್ನು ಸಹಿಸಿಕೊಳ್ಳುವೆನು ; ಪರಂತು ಅದು ಹಾಗಿರಲಿ, ನೀವು ನನ್ನನ್ನು ಹೊಡಿದುದಕ್ಕೆ ಕಾರಣವನ್ನು ಹೇಳಿದ ಹೊರತು ಬಿಡುವುದಿಲ್ಲ' ಎಂದು ನುಡಿಯುತ್ತಿರುವ ಕಾಲಕ್ಕೆ ಸರಿಯಾಗಿ ಮಾರ್ಗದಲ್ಲಿ ಒಳ್ಳೆಯ ಮನೆತನದವರಂತೆ ಕಂಡು ಬಂದ ಇಬ್ಬರು ಹೆಂಗಸರು ಬರುತ್ತಿರು ವುದನ್ನು ಕಂಡು ಜಿರಂಜೀವಿಯು, “ ಎಲೈ ಬುದ್ಧಿ ಶೂನ್ಯನೆ ! ಸುಮ್ಮನಿರು; ಅವುನ್ನೆಲ್ಲಿ ಪ್ರಸ್ತಾಪಿಸಬೇಡ : ಹೆಂಗಸರಾರೋ ಇಬ್ಬರು ನನ್ನ ಬಳಿ ಬರು ವಂತಿದೆ ” ಎಂದನು. ಇತ್ತಲಾಗಿ ಜಯಸ್ಥಳದ ಕಿಂಕರನು ಜಾಗ್ರತೆಯಾಗಿ ಬಾರದುದರಿಂದ ಚಂದ್ರಪ್ರಭೆಯು ಆತುರಗೊಂಡು ತನ್ನ ಸೋದರಿಯೊಡನೆ ಗಂಡನನ್ನು ಹುಡುಕುವುದಕ್ಕೆ ಹೊರಟಳು, ಅಲ್ಲಲ್ಲಿ ಹುಡುಕುತ ಕಡೆಗೆ ಸತ್ಯಕ್ಕೆ ಬಂದು ಹೇಮಕೂಟದ ಚಿರಂಜೀವಿಯನ್ನೂ, ಕಿಂಕರನನ್ನೂ ನೋಡಿ, ಜಯಸ್ಥಳದ ಜೆರಂಜೀವಿ ಕಿಂಕರರೆಂದು ಭಾವಿಸಿ, ಸಮಿಾಪಕ್ಕೆ ಬಂದಳು. ಹೇಮಕೂಟದ ಚಿರಂಜೀವಿಯು ತನ್ನ ಕಿಂಕರನೊಡನೆ ಮಾಡುತ್ತಿದ್ದ ವಾಗ್ವಾದದಿಂದುಂ ಟಾಗಿದ್ದ ಕೋಪವು ಇನ್ನೂ ಶಾಂತವಾಗದೆ, ಆ ರಸವು ಮುಖದೊಳು ತೋರು ತಿದ್ದಿತು. ಚಂದ್ರಪ್ರಭೆಯು ಅದನ್ನು ನೋಡಿ, ಪ್ರೀತಿಪುರಸ್ಸರನಾಗಿ, 'ಎಲೈ ನಾಥನೆ ! ನನ್ನ ನೋಡಿದರೆ ನಿಮಗೇನೋ ಬೇರೆ ತಾತ್ಪರ್ಯ ಹುಟ್ಟುವಂ ತಿದೆ. ನಿಮ್ಮ ಮುಖದೊಳು ಕೋಪ ಅಸಂತೋಷಗಳ ಚಿಹ್ನೆಗಳು ತೋರು ತವೆ ; ಆರ ದೆಸೆಯಿಂದ ವಿಶೇಷವಾದ ಸುಖಗಳುಂಟಾಗುವುವೋ ಅವರು ಬಂದರೆ ಇಷ್ಟು ಅನಾದರಮಾಡುವುದು ಯುಕ್ತವಲ್ಲವು, ನಿಮ್ಮಿಂದ ಮದುವೆ ಮಾಡಿಕೊಳ್ಳಲ್ಪಟ್ಟ ಚಂದ್ರಸಭೆಯು ಈಗ ನಾನಲ್ಲ ವಾಗಿಹೋದೆನು, ಪೂರ್ವ
ಪುಟ:ಕ್ರಾಂತಿವಿಲಾಸ.djvu/೩೫
ಗೋಚರ