ವಿಷಯಕ್ಕೆ ಹೋಗು

ಪುಟ:ಕ್ರಾಂತಿವಿಲಾಸ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ \nnnnnnnnnnnnnnnnnnyh/nnnnn \hhhhh/ WAYMYYY ಎರಡನೆಯ ಪರಿಚ್ಛೇದ ಯುಕ್ತವಲ್ಲ. ನನ್ನನ್ನು ಹೀಗೆ ಹೀನಾಯಿಸುವುದಕ್ಕೆ ನಾನು ಮಾಡಿದ ಅಪ ರಾಧವೇನೋ ಅದನ್ನರಿಯೆನು, ನನ್ನನ್ನು ತ್ಯಜಿಸುವುದಕ್ಕೆ ಆಗುವುದಿಲ್ಲ, ಆ ಯೋಚನೆಯು ಸಲ್ಲದು. ನಿಮ್ಮನ್ನು ವಿನಾ ನಾನು ಮತ್ತಾರನ್ನು ಬಲ್ಲೆನು? ಈ ದೇಹವು ಇರುವವರೆಗದು ನಿಮ್ಮದಾಗಿರುವುದು, ನಾನು ಪ್ರಾದಿಂದಿರು ವಾಗ ತಾವೆನ್ನನ್ನು ಅನೈಯೆಂದು ಭಾವಿಸಕೂಡದು, ನೀವು ಸೂರ್ಯ, ನಾನು ಕಮಲಿನಿ ; ನೀವು ಚಂದ, ನಾನು ಕುಮುದಿನಿ ; ನೀವು ಮೇಘು, ನಾನು ಮಿಂಚು ; ಹೀಗೆ ನಮ್ಮಿಬ್ಬರಿಗೂ ಪರಸ್ಪರ ಸ್ನೇಹವಿರುವಾಗ ನೀವು ಬಿಟ್ಟರೂ ನಾನು ಬಿಡುವುದಿಲ್ಲ, ಮನೆಗೆ ನಡೆಯಿರಿ, ಜನರು ನೋಡಿ ಹಾಸ್ಯ ಮಾಡುವ ಹಾಗೆ ಮಾಡಲೇಕೆ ? ಎಂದುದಂ ಕೇಳಿ ಚಿರಂಜೀವಿಯು, ೯ ಇದೇನು ಅಪಾಯ ಸಂಘಟನೆ ! ಇಂತಹ ವಿಪತ್ತು ಹಿಂದೆಂದೂ ಉಂಟಾಗಿ ರಲಿಲ್ಲವು. ಇವಳು ತನ್ನ ಗಂಡನನ್ನು ಮಾತಾಡಿಸುವಂತೆ ನನ್ನನ್ನು ಮಾತಾ ಡಿಸುತ್ತಾಳೆ ಅನ್ಯರು ನಗುವರೆಂಬದನ್ನೂ ತಿಳಿಯದೆ ಧೈರ್ಯಗೊಂಡು ನಟ ಸುತ್ತಾಳೆ. ಇವಳು ಸಾಮಾನ್ಶಿಯಲ್ಲ, ಅನ್ಯದೇಶದಿಂದ ಬಂದೆನ್ನೊಡನೆ ಪತಿ ಯನ್ನು ಕುರಿತು ಹೇಳುವಂತೆ ಆವಕಾರಣದಿಂದ ಮಾತಾಡುತ್ತಾಳೆ ! ನಾನೇ ನಾದರೂ ಸ್ಪಪ್ಪವನ್ನು ಕಂಡೆನೋ, ಭೂತಾವಿಷ್ಟನಾದೆನೋ, ಬುದ್ಧಿಭ್ರಮಣೆ ಯುಂಟಾಗಿದೆಯೊ?”ಎಂದು ತರಳತಹೃದಯನಾಗಿ, “ಆಶ್ಚರ್ಯಾಶಯದಿಂದ ಬುದ್ಧಿ ಮುಗ್ಧವಾಗಿದೆ. ಈ ಅಪಾಯದಿಂದ ಹೇಗೆ ಬಿಡುಗಡೆ ಹೊಂದುವೆನೋಟ ಎಂದಾಲೋಚಿಸುತ್ತಿರುವ ಸಮಯದಲ್ಲಿ, ವಿಲಾಸಿನಿಯು ಕಿಂಕರನಂ ಕುರಿತು, * ನೀನು ಮುಂದಾಗಿ ಮನೆಗೆ ಹೋಗಿ ಎಲ್ಲವನ್ನೂ ಸಿದ್ಧಪಡಿಸಿಕೊಂಡಿರು ವಂತೆ ಸೇವಕರಿಗೆ ನಿಯಮಿಸು, - ನಾವು ಬಂದಕೂಡ್ಲೆ ಭೋಜನಕ್ಕೆ ಪಾರಂ ಭಮಾಡುವೆವು ಎನಲು ; ಕಿಂಕರನು ಚಿರಂಜೀವಿಯನ್ನು ನೋಡಿ ಕಣ್ಣು ಮಿಡುಗಿಸುತ್ತ ದುಃಖ ಸೂಚಕವಾದ ವಾಕ್ಯಗಳನ್ನು ಹೇಳಲುದ್ಯುಕ್ತನಾಗಿ, * ಎಲೈ ಸ್ವಾಮಿಯೆ ! ಇದನ್ನೆಲ್ಲ ನೀವು ಆಲೋಚಿಸದೆ ಇಲ್ಲಿಗೆ ಬಂದುಬಿ ಟೀರಿ, ಇದು ಯೋಗ್ಯವಾದ ಸ್ಥಳವಲ್ಲವು. ಇಲ್ಲಿ ಇಂದ್ರಜಾಲ ಮಹೇಂದ) ಜಾಲಗಳು ಪ್ರಬಲಿಸಿವೆ. ಅವುಗಳಿಂದ ಆಸನ್ನವಾಗಿರುವ ಗಂಡವನ್ನು ತಪ್ಪಿ ಸಿಕೊಂಡು ನಾವು ಕ್ಷೇಮವಾಗಿ ಊರನ್ನು ಸೇರುವಂತೆ ಕಾಣಲಿಲ್ಲವು, ಈಗ ವರ ಅಭಿಯಾನುಗುಣವಾಗಿ ವರ್ತಿಸದಿದ್ದರೆ ನಮಗೆ ಪ್ರಾಣಸಂರಕ್ಷಣೆ