ಈ ಪುಟವನ್ನು ಪ್ರಕಟಿಸಲಾಗಿದೆ
೧೯೮
ಕ್ರಾಂತಿ ಕಲ್ಯಾಣ
ಈ ಅಸ್ಥಿಶೇಷವೆ?
.....ಗಗನದ ಜ್ಯೋತಿರ್ಮಯ ನಕ್ಷತ್ರವನ್ನು ಭೂಮಿಗುರುಳಿಸಿ, ಆಟಿಕೆಯ ಹರಳಂತೆ ತಿರುಕಲ್ಲಾಡಲು ಹವಣಿಸಿದ್ದು ನನ್ನ ಅವಿವೇಕ! ಅದರ ಫಲವೇ ಈ ದುರಂತ!
- -ಎಂದು ಅವನ ಅಂತರಂಗ ಚಿಂತಾಕುಲವಾಯಿತು.
ಎಂದೋ ಎಲ್ಲಿಯೋ ಕೇಳಿದ್ದ ಸೂಕ್ತಗಳು ಸುಟ್ಟ ಅರಮನೆಯ ಸಂತಪ್ತ ಭಸ್ಮರಾಶಿಯ ನಡುವೆ ಶಬ್ದಮಯವಾಗಿ ಮರಳಿ ಅವತರಿಸಿದಂತೆ ಅವನ ಕಿವಿಗಳಲ್ಲಿ ಅಸ್ಫುಟ ಅಮರವಾಣಿಯಿಂದ ನೀರವವಾಗಿ ಮೊಳಗಿದವು.
ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ |
ಓಂ ಕ್ರತೋಸ್ಮರ ಕೃತಂಸ್ಮರ ಕೃತಂಸ್ಮರ ||
- ಅಗ್ನೇನಯ ಸುಪಥಾ ರಾಯೇ ಅಸ್ಮಾನ್
- ವಿಶ್ವಾನಿ ದೇವ ವಯುನಾನಿ ವಿದ್ವಾನ್ ||
- ಯುಯೋಧ್ಯಸ್ಮಜ್ಜು ಹರಣಾಮೇನೋ
"ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||*
- ಓಂ ಶಾಂತಿಃ ಶಾಂತಿಃ
****
__________
- ಈ ಅಳಿದೆನ್ನ ಪ್ರಾಣಗಳು ಅಮೃತವಾಗಲಿ ಮುನ್ನ ಕರೆದೊಯ್ಯುದೆನ್ನ ಸುಪಥದೆ ಕರ್ಮಫಲದೆಡೆಗೆ
- ಭಸ್ಮವಾಗಲಿ ಸುಟ್ಟು ತನುವು ಬಳಿಕ ; ಅರಿತಿರುವೆ ಅಗ್ನಿ, ನೀನೆಲ್ಲವನು
- ಹೇ ಅಗ್ನಿ, ಮರೆಯದಿರು ನಾಂಗೈದ ಕರ್ಮಗಳ, ನಾಂಗೈದ ಪಾಪಗಳ ಹರಿಸುವುದು ಕರುಣೆಯಿಂ,
- ಮರೆಯದಿರು ನಾಂಗೈದ ಕರ್ಮಗಳನು. ನಮಿಸಿ ಬೇಡುವೆ ನಿನ್ನ ಮರಳಿ ಮರಳಿ.
- -" ಈಶಾವಾಸ್ಯೋಪನಿಷತ್,” ೧೭ - ೧೮