ಪುಟ:ಕ್ರಾಂತಿ ಕಲ್ಯಾಣ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ಕ್ರಾಂತಿ ಕಲ್ಯಾಣ


ಜಗದೇಕಮಲ್ಲನ ಪರಿವರ್ತನೆಯ ಫಲವಾಗಿ ತನ್ನ ಬಿಡುಗಡೆಯಾಗುವುದೆಂದು ನಿರೀಕ್ಷಿಸಿದ್ದ ಅಗ್ಗಳನಿಗೆ ನಿರಾಶೆಯಾಯಿತು. ರಾಜಗೃಹದ ಪುನರ್ವ್ಯವಸ್ಥೆಯ ವಿಚಾರದಲ್ಲಿ ಆಜ್ಞೆ ಮಾಡಿದ ಬಿಜ್ಜಳನು, “ಚಾಲುಕ್ಯರಾಣಿ ಕಲ್ಯಾಣಕ್ಕೆ ಬರುವವರೆಗೆ ಅಗ್ಗಳನು ರಾಜಬಂಧಿಯಾಗಿರಲಿ. ಆಮೇಲೆ ರಾಣಿ ಅಪೇಕ್ಷಿಸುವುದಾದರೆ ಬಿಡುಗಡೆ ಮಾಡಬಹುದು,” ಎಂದು ಕ್ರಮಿತನಿಗೆ ತಿಳಿಸಿದನು. ಈ ರೀತಿ ಇನ್ನೂ ಎರಡು ವಾರಗಳು ಕಳೆದವು.


****