ಪುಟ:ಚಂದ್ರಮತಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ, 11 ಬೇಕಾದ ಕ್ರಮಗಳನ್ನು ತಿಳಿಸಿ, ತರುವಾಯ ಉಳಿದ ಧರ್ಮಗಳನ್ನೂ ನನಗೆ ಕ್ರಮವಾಗಿ ತಿಳಿಸಬೇಕು. ಗುರು- ಪರಮದಯಾಪರನಾದ ಈಶ್ವರನು ತನ್ನ ಕುಟುಂಬವಾದ ಮನುಷ್ಯಕೋಟಿಯು ವಾಸಮಾಡಲೋಸುಗ ಭೂಮಿಯೆಂಬ ದಿವ್ಯವಾದ ಮನೆಯನ್ನು ನಿರ್ಮಿಸಿ ಅವರ ಸುಖಕ್ಕೆ ಬೇಕಾಗುವ ಸಕಲಪದಾರ್ಧ ಗಳನ್ನೂ ಅಣಿಮಾಡಿರುವನು. ಅಂಗಡಿಯಲ್ಲಿರುವುವುಗಳನ್ನು ಕೊಂಡು ಕೊಳ್ಳು ವಂತೆಯೇ, ನಾವು ಸಸ್ಯಗಳಿಂದಲೂ, ಫಲವೃಕ್ಷಗಳಿಂದಲೂ ಭೋಜನ ಪದಾರ್ಥಗಳನ್ನು ಪಡೆಯುತ್ತಿರುವೆವು ; ನಮಗೆ ಸೂರ ಬಿಂಬವು ಎಣ್ಣೆಯಿ ಲ್ಲದೆಯೇ ಉರಿಯತಕ್ಕ ದೊಡ್ಡ ಬೆಳಕಾಗಿರುವುದು; ನದಿಯೇ ಮೊದಲಾದು ವುಗಳು ನೀರನ್ನು ತುಂಬಿ ಇಟ್ಟು ಕೊಳ್ಳುವಂತಹ ದೊಡ್ಡ ಹರವಿಗಳಾಗಿರು ವುವು. ನಮ್ಮ ಸುತ್ತಲಿರುವ ಸಮಸ್ತ ಜಂತುಗಳೂ, ಲತಾವೃಕ್ಷಾದಿಗಳೂ, ಲೋಹಗಳೂ ಸರ್ವಪ್ರಕಾರದಲ್ಲಿಯೂ ನಮಗೆ ಉಪಯುಕಗಳಾಗಿರು ವುವು. ವಾಯುವು, ಬೆವರೇರಿರುವಾಗ ನಮಗೆ ತಣ್ಣಗಾಗುವಂತೆ ಬೀಸುತ್ತೆ ಸಂಬಳವಿಲ್ಲದ ಪರಿಚಾರಕನಾಗಿರುವುದು. ಮಧುರಧ್ವನಿಗಳನ್ನು ಮಾಡುವ ಕೋಗಿಲೆ ಮೊದಲಾದ ಪಕ್ಷಿಗಳು ಸಂಗೀತಪಾಠಕರಂತೆ ಕಿವಿಗಳಿಗೆ ಸಂತೋ ಷವನ್ನುಂಟುಮಾಡುತ್ತಿರುವುವು. ಇವೆಲ್ಲವೂ ಭಗವಂತನ ಅನುಗ್ರಹ ದಿಂದಲೇ ಲಭಿಸಿರುವುವಲ್ಲದೆ ಮತ್ತೆ ಬೇರೆಯಲ್ಲ. ಆದುದರಿಂದ ಇಷ್ಟು ಮಹೋಪಕಾರವನ್ನು ಮಾಡಿರುವ ಆ ಮಹಾನುಭಾವನ ವಿಷಯದಲ್ಲಿ ನಾವೆಷ್ಟು ಕೃತಜ್ಞರಾಗಿ ಆತನನ್ನು ಸ್ಮರಿಸಿದರೂ ಸಾಲದಿರುವುದು. ಸದ್ಗುಣ ವುಳ್ಳವರನ್ನು ಪ್ರೀತಿಸುವುದೂ ದುರ್ಗುಣವುಳ್ಳವರನ್ನು ದ್ವೇಷಿಸುವುದೂ ಲೋಕದಲ್ಲಿರುವ ಸಕಲರಿಗೂ ಸಹಜಗುಣಗಳಾಗಿರುವುವು. ಸಮಸ್ತ ಸದ್ಗುಣಗಳಿಗೂ ನೆಲೆಯಾಗಿದ್ದು ನಮ್ಮನ್ನು ನಿತ್ಯವೂ ಪುತ್ರವಾತ್ಸಲ್ಯದಿಂದ ಕಾಪಾಡುತ್ತಿರುವ ಆ ಕರುಣಾಕರನನ್ನು ನಾವು ಪ್ರೀತಿಸಬೇಕೆಂದು ಮತ್ತೆ ಹೇಳತಕ್ಕ ಆವಶ್ಯಕವಿಲ್ಲ. ನಮ್ಮ ಜನನಕ್ಕೆ ಕಾರಣಭೂತರಾದ ತಾಯ್ತಂದೆ ಗಳ ಆಜ್ಞೆಗೂ ನಮ್ಮನ್ನು ಪರಿಪಾಲಿಸುತ್ತೆ ನ್ಯಾಯವನ್ನು ತೀರಿಸುವ ರಾಜನ ಆಜ್ಞೆ ಗೂ ಅಧೀನರಾಗಿ ನಡೆದುಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ ಯಲ್ಲವೆ ? ಹೀಗಿರುವಾಗ ನಮ್ಮೆಲ್ಲರ ಜನನಕ್ಕೂ ಆದಿ ಕಾರಣನಾಗಿ ನಮ್ಮ