ಪುಟ:ಚಂದ್ರಮತಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬ ಚ೦ದ್ರಮತಿ, ಧಾರಣೆಯೂ, ನಿತ್ಯಸ್ನಾನವೂ, ಸುಖನಿದ್ರೆಯೂ, ಮುಖ್ಯಾಂಗಗಳಾಗಿರುವುವು. ಚಂದ್ರ-ನಮ್ಮ ದೇಹಾರೋಗ್ಯಕ್ಕೆ ವಾಯುವೂ ಅಷ್ಟು ಆವಶ್ಯಕ ವಾದುದೇ ? ಗುರು-ನಾವು ಆಹಾರವಿಲ್ಲದೆಯೇ ಕೆಲದಿನಗಳು ಜೀವಿಸಬಲ್ಲೆವಾ ದರೂ, ವಾಯುವಿಲ್ಲದೆ ಒಂದು ನಿಮಿಷವಾದರೂ ಜೀವಿಸಲಾರೆವು. ನಾವು ಆಘ್ರಾಣಿಸುವ ವಾಯುವಿನಲ್ಲಿ ಒಂದುಭಾಗವೆಲ್ಲ ಪ್ರಾಣವಾಯುವು ಸೇರಿರು ವುದು. ನಮ್ಮ ಉಚ್ಛಾಸ ನಿಶ್ವಾಸಗಳಿಂದ ಪ್ರಾಣವಾಯುವು ಒಳಕ್ಕೆ ಪ್ರವೇಶಿಸಿ, ರಕ್ತವನ್ನು ಶುದ್ಧಿಗೊಳಿಸುವುದರಿಂದ ಒಳಗಿರುವ ಕೆಟ್ಟ ಗಾಳಿಯು ಹೊರಕ್ಕೆ ಬರುವುದು. ಅಂತಹ ಗಾಳಿಯು ನಿಷಸ್ವಭಾವವನ್ನುಳ್ಳು ದಾದುದ ರಿಂದ, ಜೀವಜಂತುಗಳು ಹೊರಕ್ಕೆ ಬಿಡುವ ನಿಶ್ವಾಸವಾಯುವನ್ನೇ ಆರಾ ದರೂ ಪ್ರತ್ಯೇಕವಾಗಿ ಸೇವಿಸುವಪಕ್ಷದಲ್ಲಿ, ಅಂತಹರು ಕೆಲನಿಮಿಷಗಳೊಳ ಗಾಗಿ ಮರಣವನ್ನು ಹೊಂದುವರು. ಆದುದರಿಂದ ಪ್ರತಿಮನುಷ್ಯನೂ ತಾನು ವಾಸಮಾಡುವಮನೆಗೂ, ಮಲಗುವಮನೆಗೂ ತಕ್ಕಷ್ಟು ಶುದ್ದವಾ ಯುವು ಪ್ರವೇಶಿಸುವಂತೆ ಅವಕಾಶವನ್ನುಂಟುಮಾಡಿರಬೇಕು. ಹೊಸ ವಾಯುವು ಹೆಚ್ಚಾಗಿ ಬರುವುದಕ್ಕೆ ಅವಕಾಶವಿಲ್ಲದಂತಹ ಒಂದು ಕಿರುಮನೆ ಯಲ್ಲಿ ಹಲವುಮಂದಿ ಮಲಗಿದಪಕ್ಷದಲ್ಲಿ, ಸ್ವಲ್ಪ ನಿಮಿಷಗಳೊಳಗಾಗಿ ಪ್ರಾಣವಾಯುವೆಲ್ಲ ಕಡಿಮೆಯಾಗಿ ಕಡೆಗೆ ಕೆಟ್ಟ ಗಾಳಿಯನ್ನೇ ಸೇವಿಸ ಬೇಕಾಗುವುದಾದುದರಿಂದ, ಬಹು ರೋಗಗಳು ಸಂಭವಿಸುವುದಲ್ಲದೆ ಒ೦ದೊ೦ದುವೇಳೆ ಮರಣವೂ ಸಂಭವಿಸಬಹುದು. ಸಾಧಾರಣವಾಗಿ ನಮ್ಮವರಲ್ಲಿ ಕೆಲವರು ಹೆರಿಗೆಯ ಮನೆಗಳಿಗೆ ಒಳ್ಳೆಯ ಗಾಳಿಯನ್ನು ಬರಗೊಡದೆ ಬಾಗಿಲುಗಳನ್ನು ಮುಚ್ಚಿ ಬಿಡುವರಾದುದರಿಂದಲೇ ಹೆತ್ತ ಹತ್ತು ದಿನಗಳೊಳಗಾಗಿ ಮಗುವೋ ಬಾಣಂತಿಯೋ ಮರಣಕ್ಕೆ ಗುರಿಯಾಗುವರು. ಚಂದ್ರ -ಮೊನ್ನೆ ನಾನಿಲ್ಲಿಗೆ ಹೊರಟುಬರುವಾಗ ಎಲ್ಲಿಯಾದರೂ ಹಾರಿಹೋದೀತೆಂಬ ಶಂಕೆಯಿಂದ ನನ್ನ ಗಿಳಿಯನುರಿಯನ್ನು ಪೆಟ್ಟಿಗೆ ಯಲ್ಲಿಟ್ಟು ಭದ್ರವಾಗಿ ಮುಚ್ಚಳವನ್ನು ಹಾಕಿಬಂದೆನು. ಒಳ್ಳೆಯ ಗಾಳಿಯು ಬಾರದಿದ್ದುದರಿ೦ದಲೆಯೋ ಏನೋ, ಆಮರಿಯು ನಾನು ಪೆಟ್ಟಿಗೆಯನ್ನು