ಪುಟ:ಚಂದ್ರಮತಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಐದನೆಯ ಪ್ರಕರಣ. 96 ಚಂದ್ರ-ಇನ್ನು ನೀರನ್ನು ಪಯೋಗಿಸಬೇಕಾದ ಕ್ರಮವನ್ನೂ ದಯೆ ಯಿಟ್ಟು ತಿಳಿಸುವಿರಾ? - ಗುರು-ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಪಕ್ಷದಲ್ಲಿ ನಿರ್ಮಲವಾಯುವು ಹೇಗೆ ಆವಶ್ಯಕವೋ ಪಾನಮಾಡುವುದಕ್ಕೆ ನಿರ್ಮಲ ವಾದ ನೀರೂ ಹಾಗೆಯೇ ಆವಶ್ಯಕವು. ಆದುದರಿಂದ ನದಿಗಳಲ್ಲಿಯಾಗಲಿ, ಕೆರೆಗಳಲ್ಲಿಯಾಗಲಿ ಕೊಳೆಯಿಂದ ಕೂಡಿರುವ ನೀರನ್ನು ಯಾವಾಗಲೂ ಕುಡಿಯದೆ ಚೆನ್ನಾಗಿ ಶೋಧಿಸಲ್ಪಟ್ಟ ತಿಳಿನೀರನ್ನೇ ಪಾನಮಾಡಬೇಕು. ನಾವು ಕುಡಿಯುವನೀರನ್ನು ತೆಗೆದುಕೊಂಡು ಬರುವಂತಹ ಜಲಾಶಯ ಗಳಲ್ಲಿ ಸ್ನಾನಮಾಡುವುದು ಮುಸುರೆಯ ಪಾತ್ರೆಗಳನ್ನು ತೊಳೆಯುವುದು ಬಟ್ಟೆಗಳನ್ನೊಗೆಯುವುದು, ಇವೇ ಮೊದಲಾದ ಕೆಲಸಗಳನ್ನು ಮಾಡ ಬಾರದು. ಹೀಗೆ ಮಾಡುವುದರಿಂದ ನೀರು ಕೆಟ್ಟು ಹೋಗಿ ಅದನ್ನು ಕುಡಿಯು ವವರಿಗೆ ರೋಗಾದಿಗಳು ಉಂಟಾಗುವುವು. ಚಂದ್ರ-ನಾವು ತೆಗೆದುಕೊಳ್ಳಬೇಕಾದ ಆಹಾರವೆಂತಹುದೋ, ಆವಾವಕಾಲದಲ್ಲಿ ಭೋಜನವನ್ನು ಮಾಡಬೇಕೋ ಅದನ್ನೂ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು. ಗುರು-ಆರೋಗ್ಯಕರವೂ, ಪುಷ್ಟಿಕರವೂ ಆದ ಪದಾರ್ಥವನ್ನು ಮಾತ್ರವೇ ಭುಂಜಿಸುತ್ತೆ, ದೇಹಕ್ಕೆ ಆಲಸ್ಯವನ್ನುಂಟುಮಾಡುವಂತಹ ಅಜೀರ್ಣಕರಗಳಾದ ಪದಾರ್ಥಗಳನ್ನಾವಾಗಲೂ ತಿನ್ನದಿರಬೇಕು. ಸಾಧ್ಯವಾ ದಷ್ಟು ಮಟ್ಟಿಗೆ ಸೊಪ್ಪಿನ ತರಕಾರಿಗಳನ್ನು ತಿನ್ನಕೂಡದು. ಒಳ್ಳೆಯಪದಾರ್ಥ ವೆಂದೆಣಿಸಿ ನಾವು ಮಿತಿಮಿಾರಿ ತಿಂದುಬಿಟ್ಟರೆ ಅಜೀರ್ಣಾದಿ ವ್ಯಾಧಿಗಳು ಸಂಪ್ರಾಪ್ತವಾಗುವುವು. ಎಳೆಮಕ್ಕಳು ದಿನಕ್ಕೆ ಮೂರುನಾಲ್ಕು ಬಾರಿ ಊಟಮಾಡಬೇಕು. ದೊಡ್ಡವರು ಪ್ರತಿದಿನವೂ ಎರಡುಬಾರಿ ಕ್ರಮಕಾಲ ದಲ್ಲಿ ಊಟಮಾಡುತ್ತೆ ಯಾವಾಗಲೂ ಒಂದೇಪದಾರ್ಥವನ್ನೇ ತಿನ್ನುತಿರದೆ ಬೇರೆಬೇರೆ ಬಗೆಯ ಕಾಯಿಪಲ್ಲೆಯಗಳನ್ನೂ ರಸವರ್ಗಗಳನ್ನೂ ತಿನ್ನಬೇಕು. ವ್ರತನಿಯಮಗಳೆಂಬ ವ್ಯಾಜದಿಂದ ಕ್ರಮತಪ್ಪಿ ಊಟಮಾಡುವುದೂ, ಒಂದುಹೊತ್ತು ಮಾತ್ರ ಭುಜಿಸುವುದೂ, ಉಪವಾಸಗಳನ್ನು ಮಾಡುವುದೂ,