ಪುಟ:ಚಂದ್ರಮತಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಐದನೆಯ ಪ್ರಕರಣ. - -- -- ಪ್ರಾತಃಕಾಲಗಳಲ್ಲಿ ತಣ್ಣೀರಿನ ಸ್ನಾನವನ್ನು ಮಾಡಬೇಕು; ಬಲಹೀನರೂ ವ್ಯಾಧಿಗ್ರಸ್ತರೂ ಉಗುರುಬಿಸಿಯಾದ ನೀರಿನಲ್ಲಿ ಸ್ನಾನಮಾಡಬೇಕು ; ಬಲುಬಿಸಿಯಾದ ನೀರಿನಲ್ಲಿ ಸ್ನಾನಮಾಡುವುದು ಮೈಗೆ ಒಳ್ಳೆಯದಲ್ಲ ; ಆದುದರಿಂದ ಮಕ್ಕಳು ನಿದ್ರೆ ಹೋಗುವರೆಂದು ಭ್ರಮಿಸಿ ಬಲುಬಿಸಿಯಾದ ನೀರನ್ನೆರೆಯುವ ದುರಾಚಾರವನ್ನು ತಿಳಿವುಳ್ಳವರೆಲ್ಲರೂ ಬಿಡಬೇಕು. ಚಂದ್ರ -- ಇನ್ನು ನಿದ್ರೆಯ ವಿಚಾರವೊಂದುಳಿಯಿತು. ಅದನ್ನೂ ಅಪ್ಪಣೆಕೊಡಿಸುವಿರಾ? ಗುರು---- ಪ್ರತಿದಿನವೂ ರಾತ್ರಿ ಹತ್ತು ಗಂಟೆಗೆ ಮಲಗಿ ಪ್ರಾತಃಕಾಲ ದಲ್ಲಿ ಸೂರ್ಯೋದಯವಾಗುವುದಕ್ಕೆ ಮೊದಲೆ ಏಳಬೇಕು. ಸಾಧಾರಣ ವಾಗಿ ದಿನವೊಂದಕ್ಕೆ ಎರಡು ಜಾವ ನಿದ್ರಿಸಬೇಕು. ಹಗಲುಹೊತ್ತಿನಲ್ಲಿ ನಿದ್ರಿಸುವುದು ಒಳ್ಳೆಯ ಪದ್ಧತಿಯಲ್ಲ. ಸಣ್ಣ ಮಕ್ಕಳಿಗೆ ಹೆಚ್ಚಾದನಿದ್ರೆಯು ಆವಶ್ಯಕವಾದುದರಿಂದ ಅವರನ್ನು ಹಗಲಲ್ಲಿ ನಿದ್ರಿಸುವಂತೆ ಮಾಡಬೇಕು. ನಿದ್ರಾಭಂಗದಿಂದ ಆಲಸ್ಯವುಂಟಾಗುವುದಾದುದರಿಂದ ಜಾಗರಣೆ ಮಾಡ ಲಾಗದು. ಚಂದ್ರ - ಈಗ ತಿಳಿಸಿದುವುಗಳಲ್ಲದೆ ದೇಹಾರೋಗ್ಯದ ವಿಷಯವಾಗಿ ಹೇಳಬೇಕಾದುದು ಮತ್ತೇನಾದರೂ ಇರುವುದೇ ? ಗುರು -ಮುಖ್ಯವಾದುದು ಇನ್ನೊಂದಿರುವುದು. ಪ್ರತಿದಿನವೂ ಸ್ವಲ್ಪ ಕಾಲ ದೇಹಪರಿಶ್ರಮವನ್ನು ಮಾಡುವುದು ಅತ್ಯಾವಶ್ಯಕವು. ಆವಕಾರ್ಯ ವನ್ನೂ ಮಾಡದೆ ಸುಮ್ಮನೆ ಕುಳಿತಿದ್ದ ಪಕ್ಷದಲ್ಲಿ, ದೇಹವು ಬಲಹೀನವಾಗಿ ವ್ಯಾಧಿಗಳುಂಟಾಗುವುವು. ಈ ಕಾರಣದಿಂದಲೇ, ಕಷ್ಟ ಪಡದೆ ತಿಂದು ತಿಂದು ಕುಳಿತುಕೊಳ್ಳುವ ಧನಿಕರ ಸ್ತ್ರೀಯರಿಗಿಂತ ಕಷ್ಟ ಪಟ್ಟು ಕೆಲಸಮಾಡುವ ಬಡವರ ಸ್ತ್ರೀಯರು ಬಲಶಾಲಿನಿಯರಾಗಿರುವರು. ಆದುದರಿಂದ ದಾಸದಾಸೀ ಜನರಿರುವ ಧನಿಕರಾದವರೂಕೂಡ ಮನೆಗಳಲ್ಲಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಚಿರಕಾಲಾಯುರಾರೋಗ್ಯಗಳನ್ನು ಅನುಭವಿಸಬೇಕು. . . .......