ಪುಟ:ಚಂದ್ರಶೇಖರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ಚಂದ ಶೇಖರ. ಶುಭಾಶುಭಗಳಿಗೂ ನಾನು ಕಾರಣ, ನಿನ್ನಾ ಕೇಳುಇಂದು ಮೊದಲ್ಗೊಂಡು ನೀನು ಅಣ್ಣ- ನಾನು ತಂಗಿ, ನೀನು ಪಿತೃಸಮಾನ - ನಾನು ಕನ್ಯಾಸಮಾನ, ಇಂದು ಮೊ ದಲು ನನ್ನ ಸರಸುಖಕ್ಕೂ ಜಲಾಂಜಲಿ ! ಇಂದುಮೊದಲು ನಾನು ಮನಸ್ಸನ್ನು ದಮನ ಮಾದುವೆನು. ಇಂದುಮೊದಲು ಶೈವಲಿನಿಯು ಸತ್ತಳು, ಎಂದಳು. ಶೈವಲಿನಿಯು ಪ್ರತಾಪನ ಕೈಯನ್ನು ಬಿಟ್ಟುಬಿಟ್ಟಳು. ಮರದ ತುಂಡನ್ನೂ ಕೈ ಬಿಟ್ಟಳು. ಪ್ರತಾಪನು ಗದ್ಯದ ಕಂಠದಿಂದ, ನಡೆ, ದಡಕ್ಕೆ ಹೋಗೋಣವೆಂದನು. ಇಬ್ಬರೂ ಬಂದು ದಡವನ್ನು ಸೇರಿದರು. ಕಾಲುಹಾದಿಯಲ್ಲಿ ಬಂದು ಮೂಲೆಯನ್ನು ತಿರುಗಿದರು. ಸಣ್ಣ ಹಡಗು ಹತ್ತಿರದ ಲ್ಲಿತ್ತು. ಇಬ್ಬರೂ ಅದನ್ನೇರಿ ಅದರ ಕಟ್ಟನ್ನು ಬಿಚ್ಚಿದರು. ಅವರಿಬ್ಬರನ್ನೂ ರಮಾನಂದಸ್ವಾಮಿಯು ವಿಶೇಷ ಅಭಿನಿವೇಶದಿಂದ ನೋಡುತಲಿದ್ದನೆಂಬುದನ್ನು ಅವರಿಬ್ಬ ರಲ್ಲಿ ಯಾರಿಗೂ ತಿಳಿದುದು. - ಇತ್ಲಾಗಿ ಇಂಗ್ಲೀಷರಕಡೆ ಜನರು ಕೈದಿಯು ಓಡಿಹೋದನೆಂದು ಅವನ ಬೆನ್ನು ಹತ್ತಿ ಹೋದರು. ಅಪ್ಪರೊಳಗೆ ಹಡಗು ಅದೃಶ್ಯವಾಗಿ ಹೋಯಿತು. ರೂಪಸಿಯ ಮೇಲೆ ಮೊಕದ್ದಮೆಯನ್ನು ಮಾಡಿ ದಾನಾ ಅರ್ಜಿಯು ಮಂಜೂರಾ ಗದೆ ಹೋದುದರಿಂದ ದಾವೆದು ಊರ್ಜಿತವಾಗದೆ ಕೈವಲಿನಿಯು ಸೋತುಹೋದಳು. ಗಡಿ «13,