ಪುಟ:ಚಂದ್ರಶೇಖರ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ಸಿದ್ಧಿ. ಮೊದಲನೆಯ ಪರಿಚ್ಛೇದ. IM NjUU 44444ma + ' ಪೂ ರ್ವ ಕ ಥಾ ಮೊದಲು ಹೇಳಿದ ಪೂರ್ವಕಥೆಯನ್ನು ಈಗ ಇಲ್ಲಿ ಸಂಕ್ಷೇಪವಾಗಿ ಹೇಳುವೆವು, ಮೊದಲು ಹೇಳಿದ ಬ್ರಹ್ಮಚಾರಿಯು ಚಂದ) ಶೇಖರನೆಂಬುದು ಗೊತ್ತಾಗಿದೆ. ಯಾವ ದಿನ ಅಮಿನಟನು ಭಾಸ್ಕರನೊಂದಿಗೆ ಮಾಂಗೀರ ನಿಂದ ಹೊರಟನೋ, ಆ ದಿನ ರಮಾನಂದಸ್ವಾಮಿದು ಹುಡು ಕಿಕೊಂಡು ಹೋಗಿ ಮಾಸ್ಟರನೂ ಬೇಗಂ ದಳನಿಯ ಇವರೇ ಮುಂತಾದವರು ಒಟ್ಟಾಗಿ ಅಮಿರಟನ ಸಂಗಡ ಹೊರಟು ಹೋದರೆಂದು ತಿಳಿದುಕೊಂಡನು. ಗಂಗಾತೀರದಲ್ಲಿ ಹೋಗಿ ಚಂದ್ರಶೇಖರನನ್ನು ನೋಡಿ ದನು, ಅವನಿಗೆ ಈ ಸಮಾಚಾರವನ್ನೆಲ್ಲಾ ತಿಸಿದನು. - ಚಂದ್ರಶೇಖರನಿಗೆ, ನೀನು ಇನ್ನಿಲ್ಲಿರುವುದು ಪ್ರಯೋಜನವಿಲ್ಲ. ಸ್ವದೇಶಕ್ಕೆ ಹೋಗುಕೈವಲಿನಿಯನ್ನು ನಾನು ಕಾಶೀಗೆ ಕಳುಹಿಸುವೆನು, ನೀನು ಕೈಗೊಂಡಿರುವ ಪರಹಿತ ವ್ರತವನ್ನು ಇಂದಿನಿಂದ ಪ್ರಾರಂಭಿಸು-ಈ ಯವನ ಕನೈಯು ಧರ್ಮಿವೆ, ಈಗ ವಿಪತ್ತಿನಲ್ಲಿ ಬಿದ್ದಿದ್ದಾಳೆ...ಇವಳ ಹಿಂದೆ ಹೊಗು-ಕೈಲಾದಾಗ ಇವಳನ್ನು ಉದ್ಧಾರ ಮಾಡುಪ್ರತಾಪನೂ ನಿನ್ನ ಆತ್ಮೀಯ ಮತ್ತು ಉಪಕಾರಿಯಾಗಿದ್ದಾನೆ-ನಿನಗೋಸ್ಕ ರವೇ ಈ ದುರ್ದಶಾಗೆ ಸನಾಗಿದ್ದಾನೆ ಅವನನ್ನು ಈ ಸಮಯದಲ್ಲಿ ಕೈಬಿಡಕೂ ಡದು, ಅವರನ್ನು ಅನುಸರಿಸಿ ಅವರ ಹಿಂದೆ ಹೋಗು, ಎಂದು ಹೇಳಿದನು, ಚಂದ್ರ,