ಪುಟ:ಚಂದ್ರಶೇಖರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಳಿ ಚಂದ್ರ ಶೇಖರೆ. ಎಲ್ಲದರಮೇಲೂ ತನ್ನ ಸ್ವಂತ ಅಕೃತಿಮವಾದ ಧರ್ಮಾನುರಾಗದ ಮೋಹಮಯಿಯಾದ ಪ್ರತಿಭಾವಿಶಿಷ್ಟವಾದ ಛಾಯೆಯನ್ನು ಹಾಕಿ ಹರಡಿಹೆನು. ಅವನ ಸುಕಂಠದಿಂದ ಹೊರಟ ಆ ಉಚ್ಚಾರಣ ಕೌಶಲಯುಕ್ತವಾದ ಆ ಅಪೂರ್ವವಾದ ವಾಕ್ಯಗಳೆಲ್ಲವೂ ಚಂದ್ರಶೇಖರನ ಕರದಲ್ಲಿ ತೂರನಾದದ ಹಾಗೆ ಧ್ವನಿತವಾಗಲಾರಂಭಿಸಿದವು. ಆ ವಾಕ್ಯಗಳೆಲ್ಲವೂ ಒಂದೊಂ ದು ತಡವೆ ಮೇಘ ಗರ್ಜನೆಯು ಹಾಗೆ ಗಂಭೀರವಾದ ಶಬ್ಬದಿಂದ ಶಬ್ಬಿತವಾಗುತಲಿದ್ದವು. ಒಂದೊಂದು ತಡವೆ ವೀಣಾನಿಕ್ಷಣದಂತೆ ಮಧುರವಾಗಿ ಕಿವಿಗೆ ಇಂಪಾಗಿರುವುದು ! ಬ್ರಹ್ಮಚಾರಿಯು ವಿಸ್ಮಿತನಾಗಿ ಮೋಹಿತನಾಗಿ ಮೈವೆಟ್ಟಿಗೆಯುಳ್ಳವನಾದನು. ಅವನ ಶರೀರವೆಲ್ಲಾ ರೋಮಾಂಚವಾಯಿತು. ಅವನು ಎದ್ದು ರಮಾನಂದಸ್ವಾಮಿಯ ಪಾದ ಧೂಳಿಯನ್ನು ತೆಗೆದು ತೆರದಲ್ಲಿ ಧಾರಣ ಮಾಡಿಕೊಂಡು, ಗಳುದೇವ ! ಇಂದು ತಮ್ಮಲ್ಲಿ ಈಯುಪದೇಶವನ್ನು ಹೊಂದಿದೆನೆಂದು ಹೇಳಿದನು. ರಮಾನಂದಸ್ವಾಮಿಯು ಚಂದ್ರಶೇಖರನನ್ನು ಆಲಿಂಗನೆ ಮಾಡಿಕೊಂಡನು. “ Gಣ