ಪುಟ:ಚೆನ್ನ ಬಸವೇಶವಿಜಯಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಕವಿಜಯಂ (ಕಾಂಡ ೨) | [ಅಧ್ಯಾಯ ಗಳೇ ದೀಪರಾಜಿಯಾದವು. ಇದರಿಂದ ಬ್ರಹ್ಮನು ಶಿವನ ಪಾದವನ್ನು ಆರ್ಕಿಸುವಂತೆ ತೋರುತ್ತಿದ್ದನು. ಸಕಲದೇವತಾನಿಕುರುಂಬವೂ ಜಯ ಜಯವೆಂದು ನುತಿಸುತ್ತಿದ್ದಿತು. ಆಗ ಪರಶಿವನು ಸಕಲ ದೇವತೆಗಳನ್ನೂ ಕೃಪೆಯಿಂದ ನೋಡಿ, ಪಾದದಲ್ಲಿ ಮಣಿದಿರುವ ಬ್ರಹ್ಮನನ್ನು ಹಿಡಿದೆ, ತಲೆಯಮೇಲೆ ಹಸ್ತವನ್ನಿಟ್ಟು, ಹೆದರಬೇಡವೆಂದು ಅಭಯದಾನ ಮಾಡಿ ಮಂದಹಾಸದಿಂದ ವಿಷ್ಣುವನ್ನವಲೋಕಿಸಿ, ಸರರನ್ನೂ ಅನುಗ್ರಹಿಸಿದ ನು. ಎಂದು ಚೆನ್ನಬಸವೇಶನು ಸಿದ್ದರಾಮೇಶನಿಗೆ ಬೋಧಿಸಿದನೆಂಬೆಲ್ಲಿಗೆ ೭ನೆ ಅಧ್ಯಾಯವು ಮುಗಿದುದು. -ಜ- Vನೆ ಅಧ್ಯಾಯವು. ಭಿ ಕ್ಷಣ ಟ ನ ಲಿ ಲೆ . –***~. ಬ್ರಹ್ಮತಿರಃಕಪಾಲವನ್ನು ಕೈಯಲ್ಲಾಂತ ಪರಶಿವನು ಆ ಕನಾಒಕೆ. ತೃಪ್ತಿಪಡಿಸುವ ವ್ಯಾಜದಲ್ಲಿ ವಿಸ್ಕಾವಿಗಳ ಭಕ್ತಿಭಾವವನ್ನು ಪು ತಿ ಸ ಬೇಕೆಂದು ಬಿ ಕ್ಲಾಟನಲೀಲೆಯನ್ನು ಧರಿಸಿದನು. ಆತನ ನಗುಮೊಗವು ಕೆ ಟಚಂದ್ರ ಕಿರಣವನ್ನು ಜರೆಯುತ್ತಿದ್ದಿತು. ೨ರಕಾಂತಿ ಸೂರೈಕೆ &ತೆಜಸ್ಸನ್ನು ತಿರಸ್ಕರಿಸುತ್ತಿದ್ದಿತು. ದೇಹಲಾವಣ್ಯವು ಶತಕೋಟಿ ಮನ್ಮಥ ವಸಂತ ಜಯಂತ ನಳಕೂಬರರ ಸಂದರವನ್ನು ವಿಾರಿಸುತ್ತಿದ್ದಿತು. ರೂಪಾತಿಶಯವನ್ನು ಹೊಗಳುವುದಕ್ಕೆ ಕೊಟ್ಟನು ಕೋಟ ಆವಿತೆಪರಿಂದಲೂ ಅಸಾಧ್ಯವೆಂಬಂತೆ ತೋರುತ್ತಿದ್ದ ಪರಶಿವನು ಜಟಾಪಟಲವನ್ನೂ, ಹಣೆಯಲ್ಲಿ ಭಸಿತ ತ್ರಿರೇಖೆಯನ್ನೋ, ಕಿವಿಯಲ್ಲಿ ಕುಂಡಲಗಳನ್ನೂ, ಒಂದು ಕೈಯಲ್ಲಿ ತ್ರಿಶೂಲವನ್ನೂ, ಮತ್ತೊಂದರಲ್ಲಿ ಬ್ರಹ್ಮಶಿರಃಕಪಾಲವನ್ನೂ, ಧರಿಸಿ, ಸುಲಿಪಲ್ಲು, ಚೆಲನಾಸಿಕ, ತುಂಬಿದಗ ಲ್ಲ, ಕೆಂದುಟಿ, ದಿರ್ಘನೆಗಳನ್ನು ತಳೆದು, ಸ್ತ್ರೀ ಕುಲವನ್ನು ಜೈಯಿ ಸಲು ಧನುರ್ಧಾರಿಯಾಗಿ ಹೊರಟ ಮನ್ಮಥನಂತೆ ೧೬ ವರ್ಷದ ಪ್ರಾಯ