ಪುಟ:ಚೆನ್ನ ಬಸವೇಶವಿಜಯಂ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಚನ್ನಬಸವೇಶವಿಜಯಕ (ಕಾಂಗ ಎ) [ಅಧ್ಯಾಯ ಬ ವಿನೋದಕ್ಕೆಳಸಿ, ತನ್ನ ಪವಿತ್ರ ಹಸ್ತದಿಂದ ರವಿಯರನ್ನು ಸ್ಪ ರ್ಶಿಸಿದನು. ಆ ಕೂಡಲೇ ಮುನಿಕಾಂತೆಯರ ಗರ್ಭದಿಂದ ಶಿವಸಮಾನ ರೂಪುಳ ಶಿಶುಗಳು ಕಳಚಿಬಿದ್ದುವು ! (ಆ ಶಿವನ ಮಹಿಮೆಯನ್ನು ತಿ೪ ಯುವರಾರು !) ಆಗ ಅಲ್ಲಿದ್ದ ಬ್ರಹ್ಮಚಾರಿಗಳು ಈ ಆಶ್ಚರೈಕೃತ್ಯವನ್ನು ಕಂಡು, ತಮ್ಮ ಗುರುಗಳ ಒಳಗೆ ಓಡಿಹೋಗಿ ಅಡ್ಡ ಬಿದ್ದ ನಿಂತು, ಕೈ ಮುಗಿದು “ ನಿಮ್ಮ ಜಪತಪೋಧ್ಯಾನಗಳೆಲ್ಲ ಉರಿದುಹೋದುವು ! ಎದ್ದು ನೋಡಿರಿ, ಯಾವನೋ ಒಬ್ಬ ಮಾಯಾವಿಯು ಬಂದು ನಿಮ್ಮ ಸತಿಯರೆ ಲ್ಲರನ್ನೂ ಮರುಳಾಡಿ ಕರೆದುಕೊಂಡು ಹೋಗುತ್ತಿರುವನು ” ಎಂದು ದೂರಿದರು, ಆ ಮಾತನ್ನು ಕೇಳಿ ಋಷಿಗಳು ಕಣ್ಣನ್ನು ತೆರೆದು, ಜಪ ದಿಂದೆದ್ದು , ಕೋಪಗೊಂಡು, ಕಿಡಿಕಿಡಿಯಾಗಿ, ಆಹಾ! ಇಂತಹ ನೀಚ ತೃವನ್ನು ಮಾಡಿದವರು ? ತೋರಿಸು, ಅವನನ್ನೆಲ್ಲಿದ್ದರೂ ಹುಡುಕಿ ಎಳೆ ದುಕೊಂಡ ಬಾರೆಂದು ಹೇಳಿ ಸೆಗ್ರನೆಂಬ ಬ್ರಹ್ಮಚಾರಿಗೆ ನಿಯ ಮಿಸಿ ಕಳುಹಿದನು ಅವನು ಕಡುಕೋಪದಿಂದ ಕೆಂಗಣ್ಣನ್ನು ಬಿರುಬಿ ರನೆ ಬಿಡುತ್ತ, ಭಿಕ್ಷುಕನಿದ್ದ ಒ೪ಗೆ ಓಡಿಬಂದು, ಎಲೆ ಮಾಯಾಕಾರ ! ಮಹರ್ಷಿಗಳು ನಿನ್ನನ್ನು ಕರೆದುಕೊಂಡು ಬರಹೇಳಿರುವರು ಬಾರೆಂದು ನುಡಿದನು, ಶಿವನಾದರೊ (C ಮಮ್ಮಿಗಳು ಕರೆದುಕೊಂಡುಬಾರೆಂದು ಹೇಳಿಕಳುಹಿದ ಮಾತ್ರದಿಂದಲೇ ನಾವು ಬರಬೇಕಾದುದೇನು ? ಭಿಕ್ಷೆಯ ಉದ್ದೇಶವಿಲ್ಲದ ಬಳಿಗೆ ಹೋಗಬೇಕಾದ ಅವಶ್ಯಕತೆಯು ನಮಗೇನೂ ಇಲ್ಲ; ಬಂದ ದಾರಿಯನ್ನ ಹಿಡಿದು ಸುಮ್ಮನೆ ಹೋಗು ” ಎಂದು ಉತ್ತ ರಕೊಟ್ಟನು. ಆಗ ನಿ ಹೊರನು ಕೋಪಗೊಂಡ ಸಿಕ್ಕದಂತೆ ಆರ್ಭ ಟಿಸಿ, ಎಲೆ ಮೂಢಮನುಷ್ಯನೇ ! ಪ್ರತ್ಯುತ್ತರವನ್ನು ಕೊಡುವೆಯಾ ? ಹಾಗಾದರೆ ನಿ ನೀಗಳ ಭಸ್ಮವಾಗಿ ಹೋಗು, ಎಂದು ಶಾಪವನ್ನಿತ್ತನು. ಆದರೇನು ? ನರಿಯ ಕೋಪಕ್ಕೆ ಆನೆಯ ಮೆಟ್ಟ ರೊಮವಾದರೂ ನಡುಗುವುದೆ ? ಮನ್ನಿವಟುವು ಶಪಿಸಿದರೆ ಪರಶಿವನಿಗೆ ಆಗುವ ಹಾನಿ ಯೆನು ? ಶಿವನು ತನ್ನಷ್ಟಕ್ಕೆ ತಾನು ನಸುನಗುತ್ತ ಹೋಗುತ್ತಿ ದ್ದನು ಇದನ್ನು ಕಂಡು ಬನ್ನಿ ಪುತ್ರನು ಹಿಂದಿ-ಗಿ, ಮುನಿಗಳ ಬಳಿಗೆ ಬಂದು ನಡೆದ ಸಂಗತಿಯನ್ನೆಲ್ಲ ಹೇಳಿದನು. ಅವು ಅದನ್ನು ನಂಬದೆ, ಮತ್ತಷ್ಟು