ಪುಟ:ಚೆನ್ನ ಬಸವೇಶವಿಜಯಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#ಳ |

  1. ಳಿ

ಚನ್ನಬಸವೇಶವಿಜಯಂ, (೪ಾಂಕ ೦) [ಅಧ್ಯಾಯ ಕೊಂಡರು. ಆಗ ಶಿವನು ಪ್ರಸನ್ನನಾಗಿ ಕೃಪಾದೃಷ್ಟಿಯಿಂದ ನೋಡಿ ಸರರನ್ನೂ ಅನುಗ್ರಹಿಸಿದನು. ಅವರು ತಮಗೆ ಜ್ಞಾನೋಪದೇಶವನ್ನು ಮಾಡಬೇಕೆಂದು ಪ್ರಾರ್ಥಿಸಿಕೊಂಡರು. ಅವನು ತನ್ನ ಕೈಯಲ್ಲಿದ್ದ ಭಿಕ್ಷಾಪಾತ್ರೆಯನ್ನು ಭೌಗವನ ಕೈಗೆ ಕೊಟ್ಟು, ಮುನೀಶರರಿಗೆ ತತೋ ಪದೇಶವನ್ನು ಮಾಡುವುದಕ್ಕಾಗಿ ತಾನು ದಕ್ಷಿಣಾಮೂಲ್ಕಿ ರೂಪನ್ನು ಧರಿಸಿ, ವಟವೃಕ್ಷದಡಿಯಲ್ಲಿ ಕುಳಿತು, ಬೋಧಿಸಿ, ಮುನೀಶ್ವರರ ಮನಸ್ಸನ್ನೆಲ್ಲ ಸ ಮಾಧಾನಗೊಳಿಸಿ, ಅವರೆಲ್ಲರನ್ನೂ ಪತ್ನಿ ಸಮೇತರನ್ನಾಗಿ ಕಳುಹಿಕೊ ಟ್ಟು, ತಾನು ಸರತಿಯನ್ನು ನೆನೆದು ಕೈಲಾಸವನ್ನು ಕುರಿತು ತೆರಳಿದನು' ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆರ್ ನೆಅಧ್ಯಾಯವು ಮುಗಿದುದು. ~***** ೧೦ ನೆ ಅಧ್ಯಾಯ. ಕ ೦ ಕಾ ಳ ಧ ರ ಲಿ ಲೆ . –****- ಬಳಿಕ ಚೆನ್ನಬಸವೇಶನು ಸಿದ್ದರಾಮೇಶನನ್ನು ಕುರಿತು ಹೇಳ ತೊಡಗಿದನೆಂತೆಂದರೆ ಹಿಂದೆ ತಮನೆಂಬ ರಾಕ್ಷಸನೊಬ್ಬನು ವೇದವನ್ನು ಕಪ್ಪು ಸಮುದ್ರದಲ್ಲಿ ಮುಳುಗಿಕೊಂಡನು. ಆಗ ಭೂಮಿಯಲ್ಲಿ ಸದಾ ಚಾರತಪೋಧರ್ಮ ಜಪ ಹೋವಾದಿ ಕ್ರಿಯೆಗಳೆಲ್ಲ ನಡೆಯಲವಕಾಶವಿ ಲ್ಲದೆ ನಿಂತುಹೋದುವು. ಇದರಿಂದ ದೇವತೆಗಳ ಹವಿಸ್ಸಿಗೆ ಭಂಗಬಂ ದು ಅವರೆಲ್ಲರೂ ಅಸಂತುಷ್ಯರಾಗಿ ಕೌಶಪಡುತ್ತಿದ್ದ ಗು. ಹೀಗೆ ಕೆಲ ವುಕಾಲ ಕಳೆದ ಬಳಿಕ ತಮ್ಮ ಸಂಕಟಕ್ಕೆ ಪರಿಹಾರವನ್ನು ಕಲ್ಪಿಸಿಕೊಳ್ಳ ಬೇಕೆಂದು ದೇವತೆಗಳೆಲ್ಲರೂ ಬ್ರಹ್ಮನ ಬಳಿಗೆ ಹೋಗಿ ಮೊರೆಯಿಟ್ಟರು. ಅವನು, ಇದು ಶಿವನಿಂದ ಪರಿಹೃತವಾಗಬೇಕಲ್ಲದೆ ನನ್ನಿಂದ ಸಾಧ್ಯವಲ್ಲ ಎಂದು ನುಡಿಯಲು, ಸರ್ವರೂ ಒಟ್ಟಾಗಿ ಸೇರಿ, ಪರಶಿವನ ಬಳಿಗೆ ಬಂ ದು ನಮಸ್ಕರಿಸಿ, ತಮ್ಮ ವೃತ್ತಾಂತವನ್ನೆಲ್ಲ ಹೇಳಿಕೊಂಡರು, ಶಿವ ನು ಕೇಳಿ, ತತ್ಥರಿಹಾರಕ್ಕಾಗಿ ವಿಷ್ಣುವಿಗಾಜ್ಞಾಪಿಸಿದನು. ಆ ಕೂಡಲೇ