ಪುಟ:ಚೆನ್ನ ಬಸವೇಶವಿಜಯಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಲೋಕ ಶಿವಸಭಾ ವರ್ಣನವು txಗಿ ದರೆ- ಓಂಕಾರಪ್ರಣವವೇ ಪರಶಿವನಿಗೆ ಪೀಠವು, ಜಗಜ್ಜನನಿಯೇ ಪಟ್ಟ ಮಹಿಷಿಯು, ಚಂದ್ರ, ಆದಿಶೇಷರುಗಳೇ ಆಭರಣವು, ಭಸ್ಮವೇ ಸುಗಂ ಧವು, ಆನೆಯ ಚರವೇ ವಸ್ತ್ರವು, ಮುಕ್ತಿಯೇ ಮೃಷ್ಟಾನ್ನ ಭೋಜ ನವು, ತತ್ತರಸಾಸ್ವಾದನವೇ ತಾಂಬೂಲಚರಣವು, ಕಿವಿಯಲ್ಲಿ ಕೇಳಿ ದುದೆಲ್ಲವೂ ಕಂಬಳಾಗೃತರ ಗಾನೋಪಚಾರವು ಆಗಿರಲಾಗಿ, ಈ ವಿಧ ವಾದ ಅಸ್ಮಭೋಗಭಾಗ್ಯದಿಂದ ಕೂಡಿ ಮೆರೆಯುತ್ತಿದ್ದನು, ಷಣ್ಮುಖನ ಯುವರಾಜಪಟ್ಟದ ಮಗನು, ವಿನಾಯಕನು ಶಿವಗಣದ ದಳವಾಯಿ, ವೀ ರಭದ್ರನು ದುಪ್ಪನಿಗ್ರಹಶಿಪ್ಪಪರಿಪಾಲನೆ ಮಾಡುವ ದಂಡಾಧಿಕಾರಿ, ಬ್ರ ಹೈನು ಉತ್ಪತ್ತಿಕರನು, ಸರೈನು ಜ್ಯೋತಿಷ್ಯನು ಆಗಿರಲು, ಶಿವನು ಈ ಪೂರೋಕ್ತ ರಾಜವೈಭವದಿಂದೊಪ್ಪಿದ್ದನು, ವಿಷ್ಣುವೇ ಮುಖ್ಯಾ ಮಾತೃನಾಗಿ, ಬ್ರಹ್ಮಾಂಡಗಳೇ ದೇಶಗಳಾಗಿ, ಮೇರುಮಂದರಕೈಲಾಸ ಗಳೆ ಗಿರಿದುರ್ಗಗಳಾಗಿ, ಮಹಾಶಿವಧರವೇ ಬೊಕ್ಕಸವಾಗಿ, ಶಿವಗಣಂ ಗಳೇ ಪರಿವಾರವಾಗಿ, ಶಿವಜ್ಞಾನವೇ ಬಲವಾಗಿ, ಕುಬೇರನೇ ಮಿತ್ರನಾ ಗಿ ಇರಲು, ದೇವಾಧಿರಾಜನು ಈ ಪೂರೇಕೆ ಸಮ್ಮಾಂಗದಿಂದ ರಾಜಿ ಸುತ್ತಿದ್ದನು. ನಂದಿಮಹಾಕಾಳರು ಚಡೀಮರಿಗಳು, ವೇದಗಳು ಸ್ತುತಿ ಪಾಠಕರು, ರಂಭಾದಿಅಪ್ಪರನಿ ಯರು ಇುಕಿಯರು, ಭಂಗಿಯು ಹಾಸ್ಯಗಾರನು, ಬೃಹಸ್ಪತಿಯು ಪುರೋಹಿತ, ಶಿವಭಕ್ತರೇ ನಂಟರು, ವಿ ಶಕಗ್ನನೇ ಶಿಲ್ಪಿಯು, ಕೃಪೆಯೇ ನಿಧಿ, ಚಿತ್ರಗುಪ್ತರೇ ಗಣಕರು (ಮು ತೃದ್ದಿಗಳು) ಜ್ಞಾನಿಗಳ ಸಂಧಿವಿಗ್ರಹಕಾರರು ಆಗಿ, ಊಳಿಗವನ್ನು ಮಾಡುತ್ತಿದ್ದರು. ಇಂದ್ರನು ಚಾಮರವನ್ನು ಹಾಕುವವನು, ಅಗ್ನಿಯು ಅಡುಗೆಯವನು, ಯಮನು ಪಾಪ ಪುಣ್ಣ ವಿಚಾರಕನು, ನಿನ್ನ ತಿನ್ನ ಹಾವುಗೆಯನ್ನು ಹಿಡಿವವನು, ವರುಣನು ನೀರ್ಗಿ೦ಡಿಯವನು, ವಾಯುವು ಬೀಸಣಿಗೆಯವನು, ಕುಬೇರನು ತಾಂಬೂಲದವನು, ಈಶಾನನು ಗಂಧ ದ್ರವ್ಯವನ್ನೊಪ್ಪಿಸುವವನು ಆಗಿ ಸೇವಿಸುತ್ತಿದ್ದರು, ವರ್ಷ ಋತು ಮಾಸ ನಕತ ತಿಥಿ ಚಂದ್ರ ಮೇಘಗಳು ಜಗತ್ತಿಗೆ ಆಯಾಯ ಕಾಲೋಚಿತ ವಾಗಿ ಮಳೆ ಬೆಳೆಗಳನ್ನುಂಟುಮಾಡಿ ಸುಖಪಡಿಸುವ ಪ್ರಜೆಗಳಾಗಿದ್ದರು. ಆ ಮಹಾದೇವನಿಗೆ ದಿಗ್ಗ ಜಗಳ ಸೊಮವೂ, ಉಜ್ಞೆಶ್ರವಸ್ಸುಗಳ ತಿಲ್ಲ