ಪುಟ:ಚೆನ್ನ ಬಸವೇಶವಿಜಯಂ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೧೩] ಶರಕಸಕ್ಕಾರವು ಕಾರಮಾಡುತ್ತ ಕುಮಾರನಮೇಲೆ ಮುತ್ತಿತು. ಕುಮಾರಸ್ವಾಮಿಯು ನಾಲ್ಕು ದಿಕ್ಕಿಗೂ ಬಾಣಗಳನ್ನು ಬಿಡುತ್ತ ನೊರಜಗಳನ್ನೊರಸಿದಂತೆ ಸಾಯಿಸುತ್ತ ಬಂದನು, ಅಹ್ಮರಲ್ಲಿ ತಾರಕನು ಮತ್ತೆ ಮೂರ್ಛತಿಳಿದೆದ್ದು , ಎದೆಯಲ್ಲಿ ನಾವಿದ್ದ ಶಕಾಯುಧವನ್ನು ಕಿತ್ತು, ಮನಸ್ಸಿನಲ್ಲಿ ಖೇದಪ ಟ್ಟು, “ ಇದುವರೆಗೂ ನಾನು ಈತನನ್ನು ಹಸುಳೆಯೆಂದು ತಿಳಿದು ಔ ದಾಸೀನ್ಯದಿಂದ ಯುದ್ಧ ಮಾಡಿದಂತೆಯೇ ಮುಂದೆಯೂ ಮಾಡಿದರೆ, ಇವ ನು ನನ್ನ ತಲೆಯನ್ನು ಕತ್ತರಿಸಿಬಿಡುವುದೇ ನಿಜ; ಅದುಕಾರಣ ಈ ದಿನ ವನ್ನು ಬಿಟ್ಟು ಚೇತರಿಸಿಕೊಂಡು ನಾಳೆಯ ದಿನ ಬಂದು ಈ ದೇವಸೇನೆ ಯನ್ನೆಲ್ಲ ಒಟ್ಟಿಗೆ ಬಲಿತೆಗೆದುಕೊಳ್ಳಬೇಕು ?” ಎಂದು ಯೋಚಿಸಿ, ಣಾಂಗಣದಿಂದೆದ್ದು ಮೆಲ್ಲಗೆ ತಲೆತಪ್ಪಿಸಿಕೊಂಡು ಹೋಗಿ ಕೆಂಚಸರ ತದ ಗುಹೆಯಲ್ಲಿ ಹೊಕ್ಕಿಕೊಂಡನು. ಮಹಾಸೇನನು ದೈತ್ಯ ಸೈನ್ಯವನ್ನೆಲ್ಲ ಒಂದುಕಡೆಯಿಂದ ಕತ್ತರಿಸಿಕೊಂಡುಬಂದರೂ ತಾರಕನು ಸಿಕ್ಕಲಿಲ್ಲ. ಹಗಿಬ್ರಹ್ಮಾದಿಗಳೆಲ್ಲ ತಮಗಾದ ಜವವನ್ನು ಕಂಡು ಪರಮಾನಂದಗೊಂ ಡು ತಾರಕಾರಿಯನ್ನು ಕೊಂಡಾಡಿದರು. ಎಲ್ಲರೂ ತಾರಕನನ್ನು ತಡಕು ವುದಕ್ಕೆ ಉಜ್ಞಗಿಸಿದರು. ರಣಾಂಗಣವೆಲ್ಲವೂ ರುಂಡಮುಂಡಗಳಿಂದಲೂ, ರಕ್ತವಾಂಸಗಳಿ೦ದಲೂ, ಕರುಳಸಗಳಿಂದಲೂ, ಕುಣಿವ ಬೇತಾಳಗ ೪ಂದಲೂ, ನಲಿವ ಮರುಳ ಗಳಿಂದಲೂ, ತೂಗಾಡುವ ವಿಶಾನಗಳಿಂದಲೂ ಭೀಕರವಾಗಿದ್ದಿತು. ದೇವತೆಗಳು ಹೆಣಗಳ ಗುಡ್ಡೆಗಳನ್ನು ಬಗೆಬಗಿದು ನೋಡುತ್ತಲೂ, ಆನೆಗಳ ರುಂಡಗಳನ್ನು ಕೆದರಿ ತಡಕುತ್ತಲೂ, ರಥ ಗಳ ನುಗ್ಗುಗಳನ್ನು ಬೆದಕಿ ನೋಡುತ್ತಲೂ, ರಕ್ತದ ಗುಳಿಗಳಲ್ಲಿ ತುಲ್ಲ ದಾಡಿ ಸೋಸುತ್ತಲೂ, ತಾರಕನನ್ನು ಕಾಣದೆ ಕ್ಷೌಶಪಡುತ್ತಿದ್ದರು. ಬಳಿಕ ರಣಾಂಗಣವನ್ನು ಬಿಟ್ಟು ದಶದಿಕ್ಕುಗಳಲ್ಲಹುಡುಕುವುದಕ್ಕೆ ತೊಡಗಿ ದರು, ಕಾಡು ಮೇಡು ಗಿರಿ ವನನದಿಗಳಲ್ಲೆಲ್ಲಪರಿಶೋಧಿಸುತಿದ್ದರು. ಕಾಂ ಚಪರತದ ಗುಹೆಯೊಳಗೆ ದೈತನು ಅವಿತಿರುವನೆಂಬ ಸುಳುವನ್ನು ಹರಿಯು ತಿಳಿದು ಓಡಿಬಂದು ಇಂದ್ರನೊಡನೆ ಹೇಳಲು, ಅವನು ಕುಮಾರಸ್ವಾಮಿಗೆ ಬಿಸಿದನು. ಆತನು ತನ್ನ ಬತ್ತಳಿಕೆಯಲ್ಲಿದ್ದ ಶಾಂಭವಾಸ್ತ್ರವನ್ನು ತೆ ಗೆದುಕೊಂಡು ನಿಂಜೆನಿಗೆಸೇರಿಸಿ ಕರ್ಣಾಂತವಾಗಿ ಸೆಳೆದನು, ಆ ಅಸ್ತ್ರದ