ಪುಟ:ಚೆನ್ನ ಬಸವೇಶವಿಜಯಂ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- Fj ಖಲ ಸಮುಚಿ ಇತ್ಯಾದಿಯುದ್ಧವ

ಪಗೊಂಡು ಜಯಧ್ವನಿಮಾಡಿದರು. ರಕ್ಕಸರು ಗೋಳಿಟ್ಟು ಹಿಂಜರಿದರು. ರಾ ಕನಸೇನಾಪತಿಯಾದ ಶತಮಾಯನು ಪ್ರಳಯಕಾಲದ ಯಮನಂತೆ ಕಣ್ಣುಗಳಿಂದ ಕಂಗಿಡಿಯನ್ನು ಸುರಿಸುತ್ತ, ತನ್ನ ಕಡೆಯ ಸೇನೆಗೆ ಅಭಯ ವನ್ನು ಕೊಡುತ್ತ, ಇಂದುನ ಮುಂಗಡೆಗೆ ಬಂದು ಹಲ್ಲನ್ನು ಕಡಿದು, c ಎತೋ ಬಡದೇವೇಂದ್ರನೆ ! ಇದುವರೆಗೆ ಮಾಡಿದ ಹುಲುಗಾಳಗದಂತೆ ಶತಮಾಯನಯುದ್ಧವೆಂದು ತಿಳಿಯಬೇಡ; ಇಂದು ದೇವಲೋಕಕ್ಕೆ ಡಿಕ್ಕಿ ಲ್ಲದಂತೆ ಮಾಡಿ, ನಿನ್ನ ಹೆಂಡಿರ ಸೂಳೆ ಯರಲ್ಲಿ ರಕ್ಕಸರ ಪಾಲುಮಾ ಡದೆ ಬಿಡುವೆನೆ ? ನನ್ನ ಪರಾಕ್ರಮವನ್ನು ನೋಡು ” ಎಂದು ಹೇಳುತ್ತ, ಬಾ ಇಗಳನ್ನು ದೇವಸವೆಯಮೇಲೆ ಪ್ರಯೋಗಿಸಿದನು. ಇಂದ್ರನನ್ನು ೧೨2 ಬಾಣಗಳಿ೦ದ, ಅ ) ಯನ್ನು ೧೬ ರಿಂದ, ಯನುನನ್ನು ೫ ರಿಂದ, ಸಿನ್ನುತಿಯನ್ನು ರಿಂದ, ವರುಣ ನಾಯ ಕುಬೇರೈತಾನರನ್ನು ೬.೬ ಬಾಣಗಳಿಂದ ಹೊಡೆದು, ಅವರ ಶುರಗಳಲ್ಲಿ ತೂತ ಗಾಣಿಸಿ ರಕ್ತವನ ಸರಿಸಿ, ಸಾರ ರಥ ಹಯಗಳನ್ನು ತುಂತುಗೊಳಿಸಿ, ಮೇಲೆ ಮೇಲೆ ಬಾ ಣಗಳನ್ನು ಪ್ರಯೋಗಿಸುತ್ತಲೇ ಇದ್ದನು. ದಿಕ್ಕಾಲಕರೆಲ್ಲರೂ ಈತನ ಬಾಣಹತಿಯಿಂದ ಮೂಲೆಯೊಂದಿದರು. ಮಾರಿ ನುಗ್ಗಿದ ಊರಿನಂತೆ ದೇವಸೇನೆಯು ಲಯಗೊಳ್ಳುತ್ತ ಬಂದಿತು. ಯಕ್ಷ ವಿದ್ಯಾಧರ ಕಿನ್ನರ ಕಿಂಪುರುಷಾದಿಗಳೆಲ್ಲ ಭೀತಿಟ್ಟು ಮತಿಗೆಟ್ಟು ಬಾಯ್ದಿಟ್ಟ ಕಂಡ ಕಂಡ ಕಡೆಗೆ ಪಲಾಯನಗೊಂಡರು. ಬಾಲಕರು ಎಚ್ಚತ್ತು ಪ್ರತಿಬಾಣಗಳ ನ್ನು ಶತಮಾಯನಮೇಲೆ ಬಿಟ್ಟ ರೂ, ದಳ್ಳುರಿಯ ಮುಂದೆ ನಿಲ್ಲಲಾರದೆ ಮಿಣುಕುಹುಳುಗಳಂತೆ ತೆಜೊಹೀನರಾಗಿ, ಗಾಯದಿಂದ ರಕ್ತವನ್ನು ಸುರಿಸುತ್ತಲೂ, ಬೆವರನ್ನು ತೊಟ್ಟಿಕ್ಕಿಸುತ್ತಲೂ, ತಲೆಗೂದಲನ್ನು ನೇ ತಾಡಿಸುತ್ತಲೂ, ಹರಕು ಕವಚವನ್ನು ಎಳೆದೆಳೆದು ಸಿಕ್ಕಿಸಿಕೊಳ್ಳುತ್ತ, ಚಸಲವಾದ ಕಣ್ಣುಗಳಿಂದ ತಿರುತಿರುಗಿ ನೋಡಿ ನಡುಗುತ್ತಲೂ, ಆಗ್ರಾ ಗ್ಗೆ ನಿಟ್ಟುಸುರನ್ನು ಬಿಡುತ್ತಲೂ, ಬೆನ್ನಿನಲ್ಲಿ ನಟ್ಟ ಬಾಣವನ್ನು ಕೀಳು ತಲೂ, ತಬ್ಬಿಬ್ಬಾಗಿ ಮಾತನಾಡುತ್ತ, ಎವಬಡಿದುಕೊಳ್ಳುತ್ತಲೂ ಅಳ್ಳೆಗಳು ಹೊಯ್ದು ಕೊಳ್ಳುತ್ತಲೂ ಇರುವ ದೇವತೆಗಳು ಶಿವನ ಬಳಿಗೆ ಓಡಿಹೋಗಿ, ನಾಚಿಕೆಯಿಂದ ತುಸ್ಥಿಸಿ ನಿಂತು ಬ್ರಹ್ಮನು ಇವು 37