ಪುಟ:ಚೆನ್ನ ಬಸವೇಶವಿಜಯಂ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಖಾವಹನಕ್ಕಲೀಲೆ 404 ದ್ರಮಥನಕಾಲದಲ್ಲಿ ಹರಿಯು ೨ನೆ ಕೂರಾವತಾಗವನ್ನು ಮಾಡಿ ಅಹಂಕ ರಿಸಲು, ಹರನು ಅದನ್ನು ಕೊಂದು, ಬೆನ್ನಿನ ಓಟೆಯನ್ನು ತನ್ನ ಅಣ್ಣ ಮಾಲೆಯ ಮಧ್ಯದಲ್ಲಿ ಧರಿಸಿಕೊಂಡನು. ಆನೆ ವರಾಹಾವತಾರದಲ್ಲಿ ಭೂ ಮಿಯನ್ನು ಕದ್ದು ಹೋಗಿದ್ದ ಹಿರಣ್ಯಾಕ್ಷನನ್ನು ಕೊಂದು, ಭೂಮಿಯ ನುದ್ಧರಿಸಿ, ಮದದಿಂದ ಲೋಕಕಂಟಕನಾಗಿರಲು, ಶಿವನು ಆ ಹಂದಿಯ ನ್ನು ಕೊಂದು, ಕೊರೆಯನ್ನು ಕೈಯಲ್ಲಿ ಆಯುಧವಾಗಿ ಪಿಡಿದನು. 8ನೆ ನೃತಿಜ್ಞಾವತಾರದಿಂದ ಹಿರಣ್ಯಕಶಿಪುವನ್ನು ಕೊಂದು ರಕ್ತದಾನ ಮಾಡಿ ಮಲೆಯುತ್ತಿರಲು, ಶರಭಾವತಾರದಿಂದ ಹರನು ಅವನನ್ನು ಕೊಲ್ಲಿಸಿ ಚರ ವನ್ನು ಹೊದೆದನು. ೫ನೆ ವಾಮನಾವತಾರದಿಂದ ವಿಷ್ಣುವು ಬಲಿಚಕ್ರವರಿ ಯನ್ನು ಸಕ್ಕರಿಸಿ, ಲೋಕವನ್ನೆಲ್ಲ ವ್ಯಾಪಿಸಿಕೊಂಡು ಬೆಳೆಯಲು, ಅವ ನನ್ನು ಶಂಕರನು ಕೊಂದು, ಬೆನ್ನಿನ ಮೂಳೆಯನ್ನು ಕೈಯಲ್ಲಿ ಹಿಡಿದು ಕೊಂಡನು. ೬ನೆ ಅವತಾರದಲ್ಲಿ ಹರಿಯು ಜಮದಗ್ನಿಗೆ ಮಗನಾಗಿ ಪರಶು ರಾಮನಾಗಿ ಹುಟ್ಟಿ, ಕ್ಷತ್ರಿಯಕುಲವನ್ನು ನಿಮ್ಮ ಲಮಾಡಿ, ರಘುರಾ ಮನೊಡನೆ ವಾದವನ್ನು ಮಾಡಿ ಸೋತು, ಭೂಮಿಯನ್ನೆಲ್ಲ ಬ್ರಾಹ್ಮಣ ರಿಗೆ ದಾನಮಾಡಿ, ತನ್ನ ಮಾತೃಹತ್ಯದೊಷದ ನಾಶಕ್ಕಾಗಿ ಭೂಪ್ರದಕ್ಷಿ ಣೆಯನ್ನು ಮಾಡಿ, ರಾಮೆಶಲಿಂಗಾರಾಧನೆಯನ್ಲೈಸಗಿ ಧನ್ಯನಾದನು. ೬ನೆ ರಾಮಾವತಾರದಲ್ಲಿ ದಶರಥನಿಗೆ ಮಗನಾಗಿ ಜನಿಸಿ, ವನವಾಸಮಾಡಿ, ಹೆಂ ಡತಿಯನ್ನು ಕಳೆದುಕೊಂಡು, ರಾವಣವಧೆಯಿಂದ ಜನಿಸಿದ ಬ್ರಹ್ಮ ಹತ್ಯೆ ಯನ್ನು ಕಳೆದುಕೊಳ್ಳುವುದಕ್ಕಾಗಿ ಸೇತುಮಧ್ಯದಲ್ಲಿ ಲಿಂಗಪ್ರತಿಷ್ಟೆಯ ನ್ನು ಮಾಡಿ ಕೃತಾರ್ಥನಾದನು, vನೆ ಅವತಾರದಲ್ಲಿ ಕೃಷ್ಣನೆಂಬ ಹೆಸರಿ ನಿಂದ ವಸುದೇವನಿಗೆ ಮಗನಾಗಿ, ಗೊಲ್ಲರಲ್ಲುಂಡು, ಹಾಲ್ಗೊಸರು ಬೆಣ್ಣೆ ಯನ್ನು ಕದ್ದು ತಿಂದು, ದನಗಳನ್ನು ಕಾದು, ಗೊಪಸ್ತಿ ಯರೊಡನೆ ಹಾದರಮಾಡಿ, ಅನೇಕರಾಕ್ಷಸರಿಗೆ ಸೋತು, ಕೆಲವರನ್ನು ಗೆದ್ದು, ಜ ರಾಸಂಧನಿಗೆ ಹೆದರಿಕೊಂಡು ಸಮುದ್ರದಲ್ಲಿ ಅವಿತು, ಅರ್ಜುನನ ಹತ್ತಿರ ಬಂಡಿಹೊಡೆಯುವ ಊಳಗದಲ್ಲಿದ್ದು ಸೇವಿಸಿ, ಬಳಿಕ ಶಿವನನ್ನು ಕುರಿತು ತಪಸ್ಸನ್ನಾಚರಿಸಿ, ಮನ್ಮಥನೆಂಬ ಮಗನನ್ನು ಪಡೆದು, ಕಡೆಗೆ ೧೩ ಸ ವಿರ ಗೊಲ್ಲರಹೆಂಡತಿಯರ ಕಣ್ಣಿದಿರಿಗೇ ಬೇಡನಿಂದ ಮೃತನಾಗಿ ಹೋದ