ಪುಟ:ಚೆನ್ನ ಬಸವೇಶವಿಜಯಂ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ೧] ಸಮನೂರಾ ನಯವಂಶವಿವರಣವು 44 ನಿಗೆ ತಂದೆಯ ಭೀಷ್ಟನೆಂದು ಹೆಸರಿಟ್ಟನು, ಈತನು ಪರಾಕ್ರಮಶಾಲಿ ಯಾಗಿ ರಾಜ್ಯವನ್ನಾಳುತ್ತಿದ್ದನು. ಅದ್ರಿಕೆ ಯೆಂಬ ದೇವನಾರಿಯೊಬ್ಬಳು ಬ್ರಹ್ಮನ ಶಾಪದಿಂದ ಹೆಣ್ಣು ಮಿಾಕಾಗಿ ಗಂಗಾನದಿಯಲ್ಲಿ ವಿಹರಿಸುತ್ತಿದ್ದಳು. ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ಒಬ್ಬ ವಸುವಿನ ಇಂದ್ರಿಯವು ಗಂಗಾನದಿ ಯಲ್ಲಿ ಬೀಳಲು, ಅದನ್ನು ಈ ಮತ್ಸವು ನುಂಗಿ ಗರ್ಭವನ್ನು ಧರಿಸಿತು. ಬೆಸ್ತನೊಬ್ಬನು ಬಂದು ಬೀಸಿದ ಬಲೆಗೆ ಆ ವಿಾನು ಸಿಕ್ಕಿತು. ಅದನ್ನು ಮನೆಗೆ ತಂದು ನೀಳುವಲ್ಲಿ ಹೆಣ್ಣು ಗಂಡು ಕೂಸುಗಳೆರಡಿದ್ದುವು. ಬೇಡನು ಅವನ್ನು ದೊರೆಗೊಪ್ಪಿಸಲು, ಆತನು ಗಂಡುಕೂಸನ್ನು ತಾನಿಟ್ಟುಕೊಂ ಡು, ಅದಕ್ಕೆ ಮರಾಜನೆಂದು ಹೆಸರನ್ನು ಕರೆದು, ಹೆಣ್ಣನ್ನು ಬೆಸ್ತನಿಗೆ ಕೊಟ್ಟು ಬಿಟ್ಟನು. ಆ ಕೂಸಿಗೆ ಮತ್ಸಗಂಧಿಯೆಂದು ಅವನು ಹೆಸರನ್ನು ಕರೆದನು. ನದೀತೀರದಲ್ಲಿ ಪರಾಶರಮಹರ್ಷಿಯು ಈಕೆಯೊಡನೆ ಕೂಡ ಲು, ವೇದವ್ಯಾಸನು ಅವಳ ಗರ್ಭದಲ್ಲಿ ಜನಿಸಿದನು. ಈ ಮತ್ಸಗಂಧಿ ಯ ಕಾ ಡಿನಲ್ಲಿ ವಿಹರಿಸಿಕೊಂಡಿರಲು, ಶಂತಡಕ್ರವರಿಯು ಬೇಟೆಯಾ ಡುತ್ತಿದ್ದು ಇವಳನ್ನು ಕಂಡು ವೆ: ತನಿ ಕರೆಯಲು, ಆಕೆಯು ಬಲ್ಲದೆ ತಿರಸ್ಕಸಿದಳು. ಬಳಿಕ ಭಸ್ಮನು ಆಕೆಯನ್ನು ಶಂತನಿಗೆ ವಶಮಾಡಿ ಕೊಟ್ಟನು. ಅವಳ ಹೊಟ್ಟೆಯಲ್ಲಿ ಚಿತ್ರಾಂಗದ ವಿಚಿತ್ರವೀರೆಂಬ ಇಬ್ಬ ರುಮಕ್ಕಳು ಹುಟ್ಟಿದರು. ಇವರು ಶತ್ರುಗಳಿಂದ ಹತರಾದನಂತರ, ಅವರ ಹೆಂಡತಿಯರು ವೇದವ್ಯಾಸನಿಂದ 7 ರ್ಭವನ್ನು ಧರಿಸಿ, ಧೃತರಾಷ್ಟ್ರು ಪಾಂಡು, ವಿದುರ, ಎಂಬ ಮೂರುಮಂದಿ ಮಕ್ಕಳನ್ನು ಹೆತ್ತರು, ಧೃತರಾ ಫ್ಲ್ಯನಿಗೆ ಕೌರನ ಮೊದಲಾದ ನೂರುಮಂದಿ ಮಕ್ಕಳು ಹುಟ್ಟಿದರು. ಪಾಂ ಡುವಿಗೆ ಧ ರಾಜ ಮೊದಲಾದ ಐದುಮಂದಿ ಮಕ್ಕಳಾದರು. ಗಪ್ರಿಯ ಶಾಪದಿಂದ ಪಾಂಡುರಾಜನು ಸಾಯಲು, ಕೌರವರಿಗೂ ಪಾಂಡವರಿಗೂ ಮತ್ಸರವು ಬಳೆದು, ಕೌರವರು ಕಪಟದಿಂದ ರಚಿಸಿದ್ದ ಅರಗಿನಮನೆಯಿಂ ದ ಪಾಂಡವರು ತಪ್ಪಿಸಿಕೊಂಡು, ಅರಣ್ಯದಲ್ಲಿ ವಾಸವಾಗಿದ್ದು, ಅಲ್ಲಿ ಹಿಡಿಂ ಬನೆಂಬ ರಾಕ್ಷಸನನ್ನು ಕೊಂದು, ಬ್ರಾಹ್ಮಣಾಗ್ರ ಹಾರವನ್ನು ಲಯಗೊ ೪ಸುತ್ತಿದ್ದ ಬಕಾಸುರನನ್ನು ಸಕ್ಕರಿಸಿ, ದೌಪದಿಯನ್ನು ಮದುವೆಯಾಗಿ ಬಂದು, ಕೌರವರನ್ನು ಸೋಲಿಸಿ, ಇಂದ್ರಪ್ರಸ್ಥ ಪಟ್ಟಣವನ್ನು ಪಡೆದು 13