ಪುಟ:ಚೆನ್ನ ಬಸವೇಶವಿಜಯಂ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಶರಣರ ಕಥೆಗಳು ೩84 ೨ ನೆ ಅಧ್ಯಾಯವು. ಶೈ ವ ಶ ರ ೧ ರ ಕಥೆ ಗ ಳು ಬಳಿಕ ಸಿದ್ದರಾಮೇಶನು ಚೆನ್ನಬಸವೇಶ್ವರನನ್ನು ಕುರಿತು ತಾವು ದೇವಾಸುರಮನುಷ್ಯರಲ್ಲಿ ಮುಕ್ತಿಯನ್ನು ಪಡೆಯದೆ ಕೆಟ್ಟವರ ಚರಿತ್ರವ ನ್ನು ವಿವರಿಸಿದಿರಿ ; ಶೈವಮಾರ್ಗಾಚರಣದಿಂದ ಮುಕ್ತರಾದವರುಗಳ ಚರಿ ತ್ರವನ್ನು ಕೃಪೆಯಿಂದಪ್ಪಣೆಕೆಡಿಸಬೇಕೆಂದು ಬಿನ್ನೆಸಲು, ಚೆನ್ನಬಸ ವೇಶನು ಹೇಳಲುಸಕ್ರಮಿಸಿದನೆಂತೆಂದರೆ-ಇಂದ್ರದ್ಭುಮ್ಮನೆಂಬ ವಿಷ್ಣುಭ ಕರಾಜನೊಬ್ಬನು ಹರಿಯನ್ನೇ ಧ್ಯಾನಿಸುತ್ತಿದ್ದನು. ಅವನ ಬಳಿಗೆ ಮಡ ಶಿವಭಕ್ತನಾದ ಅಗಸ್ಯರ್ವಿಯು ಬರಲು, ದೊರೆಯು ಅವನನ್ನು ಕಂಡ ರೂ ಪ್ರತ್ಯುತ್ಥಾನಮಾಡದೆ ಅಲಕ್ಷೀಕರಿಸಿದುದರಿಂದ “ ನೀನು ಮದಗಜ ವಾಗಿ ಹುಟ್ಟು ' ಎಂದು ಮಸ್ತಿಯು ಶಾಪವನ್ನು ಕೊಟ್ಟನು. ಅದರಂತೆ ಹುಟ್ಟಿದ ಆನೆಯು ಒಂದುಕೊಳಕ್ಕೆ ಬಂದು, ನೀರನ್ನು ಕುಡಿಯುತ್ತಿರು ವಲ್ಲಿ, ಒಳಗಿದ್ದ ಮೊಸಳೆಯು ಆನೆಯ ಕಾಲನ್ನು ಕಚ್ಚಿ ಎಳೆಯುತ್ತಿರಲು, ಗಜವು ಹೆದರಿ ಹರೀ ! ?” ಎಂದು ಕೂಗಿಕೊಂಡಿತು, ವಿಷ್ಣುವು ಅಲ್ಲೇ ಪ್ರತ್ಯಕ್ಷನಾಗಿ, ಚಕ್ರವನ್ನು ಬಿಟ್ಟು ಮೊಸಳೆಯನ್ನು ಕತ್ತರಿಸಿದನು, ಆನೆ ಯು ಮೇಲಕ್ಕೆ ಬಂದು ವಿಷ್ಣುವಿನ ಪಾದಕ್ಕೆ ನಮಸ್ಕರಿಸಿ, ನನಗೆ ಮೋಕ್ಷ ವನ್ನು ಕೊಡೆಂದು ಬೇಡಿತು, ಹರಿಯುಅದು ನನ್ನಿಂದಾಗದು ; ನಾಗಕ ನಕಯರಿಗೆ ವರವನ್ನು ಕೊಟ್ಟ ಶಿವಲಿಂಗವೊಂದಿರುವುದು ; ರಾಜಹಂಸ ನೆಂಬ ಗುರುವಿನ ದೇಹದಮೇಲೆ ಜೇಡರ ಹಳುವು ಹರಿಯುತ್ತಿರಲು, ಅದನ್ನು ಗುಣಗರ್ಭನೆಂಬ ಶಿಷ್ಯನು ನೋಡಿ, ತೆಗೆದು ಭೂಮಿಯಮೇಲಿಟ್ಟನು; ಆದ ನ್ನು ಗುರುವು ಕಂಡು, ನೀನೂ ಜೇಡರ ಹಳುವಾಗೆಂದು ಶಿಷ್ಯನಿಗೆ ಶಪಿ ನಿದನು ಅದರಂತೆ ಜೇಡನಾಗಿರುವ ಹುಳುವು ಮುಕ್ತಿ ಪ್ರಾಪ್ತಿಗಾಗಿ ಆ ಲಿಂಗವನ್ನು ಸೇವಿಸುತ್ತಿರುವುದು ; ನೀನೂ ಅಲ್ಲಿಗೆ ಹೋಗಿ ಸೇವಿಸು, ಮೋಕವು ನಿದ್ದ ವಾಗುವುದು, ಎಂದು ನುಡಿದು ಅಂತರ್ಧಾನಗೊಂಡನು. ಅದ ರಂತೆಯೇ ಆನೆಯು ಅಲ್ಲಿಗೆಹೋಗಿ ಲಿಂಗವನ್ನಾರಾಧಿಸುತ್ತಿದ್ದಿತು. ಜೇಡನು ಬೆಳಗಾಗುವುದರೊಳಗೆ ಲಿಂಗದ ಮೇಲ ಡೆಯಲ್ಲೆಲ್ಲ ಹಂದರದಂತೆಯೂ ತೇ