ಪುಟ:ಚೆನ್ನ ಬಸವೇಶವಿಜಯಂ.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೫೦ ಚನ್ನಬಸವೇಶವಿಜಯಿಂ(wಂದ ೫) [ಅಧ್ಯಾಯ ಕಂಡು, ಆ ಸಿಟ್ಟಿಗೇ ತನ್ನ ರಾಜ್ಯದ ಪಟ್ಟವನ್ನು ಕಟ್ಟಿ, ನೀನೇ ಈ ದೇಶ ಎಲ್ಲ ಸಲಹಿಕೊಂಡಿರೆಂದು ಬಿನ್ನೆಸಲು, ಅವನು ನನಗೆ ಬೇಡವೆಂದು ತಿರಸ್ಕರಿಸಿದನು, ಶಂಕರನು ಅವರೀರರಿಗೂ ಸಾಲೋಕ್ಯಪದವಿಯನ್ನು ದಯಘಾಲಿಸಿದನು. ಮನುಜೇಂದ್ರಚೋಳನೆಂಬ ನರಪತಿಯು, ಪೂಸಲನೆಂಬ ಭಕ್ಟೋ ತಮನು ತನ್ನ ಮನಸ್ಸಿನಲ್ಲೇ ದೇವಾಲಯವನ್ನು ನಿನ್ನಿಸಿ, ಅಲ್ಲಿಗೆ ಶಿವನನ್ನು ಬಿಜಯವಾಡಿಸಿ, ಆರಾಧಿಸುತ್ತಿರುವುದನ್ನು ತಿಳಿದು, ತಾನೂ ಅಸದೃಶ ಭಾವ ಶಿವದೇವಾಲಯವನ್ನು ಕಟ್ಟಿಸಿ, ಲಿಂಗವನ್ನು ಪ್ರತಿಷ್ಠಿಸಿ, ಮಜ್ಞ ನಕ್ಕೆ ಎಣ್ಣೆಯನ್ನು ತೆಗೆವದಕ್ಕಾಗಿ ಎಳನ್ನು ಒಣಹಾಕಿರಲು, ಮುನಿರಾ ಜನೂರನು ಬಂದು ಆ ಎಳನ್ನು ತಿಂದನು. ಕಾವಲುಗಾರರು ಆತನನ್ನು ಹಿಡಿತಂದು ದೊರೆಯ ಮುಂದೆ ನಿಲ್ಲಿಸಿ, ಅವನ ತಪ್ಪನ್ನು ಬಿಸ್ಮಿಸಲು, ಅ ದೇತಕ್ಕೆ ಹೀಗೆ ಮಾಡಿದೆ ಯೆಂದು ದೊರೆಯು ಕೇಳುವಲ್ಲಿ ಸದಾಶಿವನಿಗೆ ಮಗನಾಗಿ ಹುಟ್ಟುವುದಕ್ಕೋಸುಗ ಹೀಗೆ ಮಾಡಿದೆನೆಂದು ಹೇಳಿದನು. ಹಾ ಗಾದರೆ ನಾನೂ ಶಿವಭಕ್ತರ ಮಗನಾಗಿ ಹುಟ್ಟುವುದಕ್ಕೆ ಇದು ಒಳ್ಳೆಯ ಉಪಾಯವೆಂದು ದೊರೆಯ ಯೋಚಿಸಿ, ಅವನ ಬಾಯೊಳಗಿದ್ದ ಎಳ್ಳಿನ ಕಾಳನ್ನೇ ತೆಗೆದುಕೊಂಡು ತಾನು ತಿಂದನು. ಇವರೀರರೂ ಎಳನ್ನು ಕಿ ತಾಡುವಾಗ ಚೆಲ್ಲಿದ ಕಾಳನ್ನು, ಶಿವನು ಭಕ್ತವೇಪ್ರದಿಂದ ಒಂದು ಆಯ್ತು ತಿನ್ನುತ್ತಿರಲು, ಇವರಿಬ್ಬರೂ ಅದೇಕೆ ಎಳ್ಳನ್ನಾರಿಸಿಕೊಂಡು ತಿನ್ನುತ್ತಿ ಯೇ ? ಎಂದು ಆತನನ್ನು ಕೇಳಲು, ಭಕ್ಟೋತ್ತಮರಾದ ನಿಮ್ಮಿಬ್ಬ ಗೂ ಮಗನಾಗಿ ನಾನು ಹುಟ್ಟುವುದಕ್ಕಾಗಿ ತಿನ್ನುತ್ತೇನೆ, ಎಂದು ಉತ್ತರಕೊ ಟ್ಟು, ಅವರೀಶ್ವರ ಭಕ್ತಿಗೂ ಮೆಚ್ಚಿ ಪ್ರತ್ಯಕ್ಷನಾಗಿ ಕೈಲಾಸಕ್ಕೆ ಕರೆದು ಕೊಂಡು ಹೋದನು. ವಿರಚೋಳನೆಂಬ ಭೂಪಾಲನು ಪ್ರತಿದಿನವೂ ಸಾವಿರ ತಾವರೆ ಹೂವುಗಳಿಂದ ಶಿವನನ್ನು ಪೂಜಿಸುತ್ತ, ಒಂದುದಿನ ಒಂದು ಹೂವು ಸಾಲ ಡಿರಲು, ತನ್ನ ಕೊರಲನ್ನೇ ಕತ್ತರಿಸಿ, ಶಿರಃಕಮಲವನ್ನು ಸ್ವಾಮಿಗೆ ಅ ರ್ವಿಸಿ, ಶಿವಪುರವನ್ನು ಪಡೆದನು. ಪಗಳನು ತನ್ನ ಶತ್ರುಗಳ ಹೆಣವನ್ನು ಹೇರಿತಂದ ಬಂಡಿಯ