ಪುಟ:ಚೆನ್ನ ಬಸವೇಶವಿಜಯಂ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*] ಓಶೋಕ್ಷಕ ರಣಹನುಗೆಗಳು {+ ತಾಪತ್ರಯಗಳು ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕವೆಂ ದು, ಇವುಗಳಲ್ಲಿ ಆಧ್ಯಾತ್ಮಿಕವು-ಮಾನಸ, ಶಾರೀರವೆಂದು ಎರಡುಪ್ರಕಾ ರವಾಗಿರುವುದು, ಮದಮತ್ಸರಾದಿಗಳಿಂದುಂಟಾದ ದುಃಖವು ಮಾನಸವು, ಔರಾದಿರೋಗಗಳಿಂದುಂಟಾದ ದುಃಖವು ಶಾರೀರಕವು ರಾಜರು ಚೋರ ರು ಪಶು ಪಕ್ಷಿ ಮೃಗಾದಿಗಳಿಂದುಂಟಾದ ದುಃಖವು ಆಧಿಭೌತಿಕವು, ಜನನ ಮರಣ ಹಸಿವು ತೃಪೆ ಅಜ್ಞಾನ ಮೊದಲಾದುವುಗಳಿಂದುಂಟಾದ ದುಃಖವು ಅಧಿದೈವಿಕವು, ಹೀಗೆ ಜನ್ಮ ಜನ್ಮಾಂತರದಲ್ಲಿ ಹುಟ್ಟಿ ತಾಪತ್ರಯಗಳ ಭ್ರ ಮೆಯಿಂದ ನೊಂದು ಬೇಸತ್ತ ಜೀವನಿಗೆ ಜನ್ಮಾಂತರಾರ್ಜಿತಸುಕೃತವಾಸ ನೆಯ ಬಲದಿಂದ ಶಿವಭಕ್ತಿ ಹುಟ್ಟುವುದು, ಅದರಿಂದ ಶಿವಜ್ಞಾನಸಿದ್ದಿಯಾ ಗುವುದು, ಆ ಜ್ಞಾನವು-ಪ್ರತ್ಯಕ್ಷ, ಪರೋಕ್ಷ, ಅಪರೋಕ್ಷವೆಂದು ಳಿ ತೆರನಾಗಿರುವುದು, ಸ್ಫೂಲಾದಿಶರೀರತ್ರಯಗಳಲ್ಲಿಯೂ, ತೊತ್ರಾದಿಜ್ಞಾ ನೇಂದ್ರಿಯಪಂಚ ಕದಿಂದಲೂ, ಶಬ್ದಾ ದಿಸಂಚವಿಷಯಗಳಿಂದಲೂ, ಜ್ಞಾ ನಾದಿಅಂತಃಕರಣಪಂಚಕದಿಂದಲೂ, ತಿಳಿದುಕೊಳ್ಳುವುದೇ ಪ್ರತ್ಯಕ್ಷಜ್ಞಾ ನವು, ದೇಶಕಾಲಗಳನ್ನೂ, ಲೋಕಾಂತರವನ, ಜನ್ಮಾಂತರ ಸುಖದುಃ ಖಗಳನ್ನೂ, ಸುಕವಪ್ನಗಳನ್ನೂ, ಬಂಧಮೋಕ್ಷೆಗಳನ್ನೂ, ವೇದಾ ಗವಾದಿಗಳ ವಿಚಾರದಿಂದ ತಿಳಿದುಕೊಳ್ಳುವುದೇ ಪರೋಕ್ಷಜ್ಞಾನವು. ಬಹಿರಂಗದಲ್ಲಿ ಕಾಣುವ ಭೂತಪಂಚಕವೂ, ಅಂತರಂಗದಲ್ಲಿರುವ ಸೂ ಹೃಭೂತಸಂಚಕವೂ, ಒಂದೇ ಎಂದು ತಿಳಿದು, ತದ್ರೂ ತಗುಣಧರಾದಿ ವಿಷಯಗಳನ್ನೆಲ್ಲ ತಾನಲ್ಲವೆಂದರಿತು, ಜೀವಪರನರ ಐಕ್ಯವನ್ನು ನಿರ್ಧರಿಸಿ, ತನ್ನ ಹೊರತು ಬೇರೊಂದು ವಸ್ತು ವಿಲ್ಲವೆಂಬುದನ್ನು ಶ್ರೀಗುರುಕಟಾಕ್ಷ ದಿಂದ ನಿಜವಾಗಿ ಅರಿತುಕೊಳ್ಳುವುದೆ ಅಪರೋಕ್ಷ ಜ್ಞಾನವು, ಎಂದು ಚೆನ್ನಬಸವೇಶನು ಅಪ್ಪಣೆ ಕೊಡಿಸಲು, ಸಿದ್ದರಾಮೇಶನು ಸಂತುಷ್ಟ್ಯ ನಾಗಿ ನಮಸ್ಕರಿಸಿದನು. ಎಂಬಿಲ್ಲಿಗೆ ಐದನೆ ಅಧ್ಯಾಯವು ಸಂಭವು. »