ಪುಟ:ಚೆನ್ನ ಬಸವೇಶವಿಜಯಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನಬಸವೇಕವಪ್ಪ ಕೊತ್ಸವವು ರವಾಗಿ ತೋರುತ್ತಿದ್ದಿತು. ನೋಡಿದವರೆಲ್ಲರೂ ಸಂತೋಷವನ್ನೂ ಆಳ್ವ ರೈವನ್ನೂ ಹೊಂದುತ್ತಿದ್ದರು. ಶಿಲ್ಪಿಯು ಬಂದು, ಮಂದಿರವೆಲ್ಲವೂ ನಿದ್ದ ವಾಗಿರುವುದು, ಚಿತ್ರಸಬೇಕೆಂದು ಬಸವೇಶನೊಡನೆ ಬಿನ್ನೈಸಿದನು. ಆಗ ಬಸವಣ್ಣನು ಚೆನ್ನಬಸವಣ್ಣನೊಡನೆ ಕೂಡಿ ಬಂದು, ಮನೆಯೆಲ್ಲವನ್ನೂ ಆದ್ಯಂತವಾಗಿ ನೋಡಲಾಗಿ, ಅದು ನಿಮ್ಮ ಲವಾಗಿಯೂ, ಮಂಗಳಮಯ ವಾಗಿಯ, ಕಾಂತಿಮತ್ತಾಗಿಯ ಎಸೆಯುತ್ತಿದ್ದಿತು. ಬಸವೇಶನು ಮೆ ↑ ತಲೆದೂಗಿ, ಶಿಲ್ಪಿಗೆ ಉಡಿಗೆ ತೊಡಿಗೆಗಳನ್ನಿತ್ತು ಸಂತೋಷಪಡಿಸಿ, ಮುಂದೆ ನಿಂತಿರುವ ಚೆನ್ನಬಸವೇಶನ ಪಾದಕ್ಕೆ ಭಕ್ತಿಯಿಂದ ನಮಸ್ಕರಿಸಿ, ಸದಾ ಈ ಮನೆಯಲ್ಲಿ ನೀವು ವಾಸಮಾಡಿಕೊಂಡು ನನ್ನ ಸೇವೆಯನ್ನು ಕೈಕೊಳ್ಳುತ್ತ ನನಗೆ ಶಿವತತ್ವ ಬೋಧೆಯನ್ನು ಮಾಡಿಕೊಂಡಿರಬೇಕೆಂ ದು ಪ್ರಾರ್ಥಿಸಿದನು. ಅದನ್ನು ಚೆನ್ನಬಸವೇಶನು ಕೇಳಿ, ಗುರುವಿನ ನಾ ಕ್ಯವೇ ಅದೆಂದು ತಿಳಿದು, 'ಎಲೈ ಜ್ಞಾನನಿಧಿಯೇ ನೀನು ಹೇಗಿರಿಸಿದರೆ ಹಾಗೆ ನಾನಿರತಕ್ಕವನು?” ಎಂದು ಉತ್ತರವನ್ನು ಕೊಟ್ಟನು. ಆಗ ಬಸ ವೇಶನು ಸಂತೋಪದಿಂದ ಧನಧಾನ್ಯ ಮೊದಲಾದ ಸಕಲ ಸಾಮಗ್ರಿಗಳ ನ್ಯೂ ಆ ಮನೆಗೆ ತಂದು ತುಂಬಿಸಿದನು, ಬೇಕಾದ ಪರಿಜನಗಳನ್ನೆಲ್ಲ ನೇಮಿ ನಿದನು, ಭಕ್ತಿಯಿಂದ ನಾಗಲಾಂಬಿಕೆಗೂ ಬಿತ್ಸೆಸಿಕೊಂಡನು. ಆಕೆಯು ಚಿನ್ನದ ಅಂಗಳದಲ್ಲಿ ಕುಳಿತು, ಸುವಾಸಿನಿಯರೊಡಗೂಡಿ, ಆ ಮಂಗಳ ಮಂದಿರವನ್ನು ಪ್ರವೇಶಿಸಿದಳು, ಬಳಿಕ ಬಸವೇಶನು ಈತನೇ ಸಾಕ್ಷಾ ತೃರತಿವನ ಅಪರಾವತಾರವೆಂದು ತಿಳಿದು, ಸಲಹಬೇಕೆಂದು ತನ್ನಕ್ಕನೊ ಡನೆ ಹೇಳಿ, ಚೆನ್ನಬಸವೆಶನಿಗೆ ವಂದಿಸಿ, ತನ್ನರಮನೆಗೆ ತೆರಳಿದನು. ಚೆನ್ನ ಬಸವೇಶವಾದರೆ ಆ ತನ್ನರಮನೆಗೆ ತಕ್ಕ ಕಾವಲಿನವರನ್ನು ನಿಯಮಿಸ ಬೇಕೆಂದು ಮನಸ್ಸಿನಲ್ಲಿ ಯೋಚಿಸಿಕೊಂಡು, ಪಟ್ಟಮಗ್ನವನ್ನು ತಿಳಿ ಯದಿರತಕ್ಕೆ ಯಾರೊಬ್ಬನ್ನೂ (ಮೂರು ಕಣ್ಣುಳ್ಳವರಾಗಿದ್ದರೂ ಈ ಮನೆಯೊಳಕ್ಕೆ ಪುಗಿಸಬಾರದು, ಎಂದು ಹೇಳಿ, ಆರುಮಂದಿ ಪಟ್ಟಅಬ್ರ ಹಿಗಳನ್ನು ಆರುಬಾಗಿಲುಗಳಲ್ಲಿ ಕಾವಲಿಟ್ಟು, ೧೨ ಸಾವಿರ ಪಟ್ಟಿ ಹಿಗಳನ್ನು ಸೇರಿಸಿಕೊಂಡು ಜಂಗಮ ಪಾದಾರ್ಚನಲೋಲನಾಗಿ ಒಪ್ಪು ತಿದ್ದು, ಪ್ರತಿ ದಿನವಲ್ಲ ಪಟ್ಟಅಬ್ರಗಳಿಗೆಲ್ಲ ಭಕ್ತಿಯಿಂದ ಸ್ನಾ