ಪುಟ:ಚೆನ್ನ ಬಸವೇಶವಿಜಯಂ.djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hy ನೂರೆಂದು ವಿರತರವತರಣವು ಇt ಗೊತ್ತಾಯ್ತಂದು ಯೋಚಿಸಿ ರ್ವಿತನು ಬಯಲಾಗುವನು. ಬತ್ತಲೇಶರ ನೆಂಬ ಶಿವಯೋಗಿಯೊಬ್ಬನು ಕೃಶನಾಗಿ ಗುಹೆಯಲ್ಲಿ ತಪಸ್ಸಿಯಾಗಿರಲು, ದೊರೆಯು ಪಾವತಿಯೆಂಬ ವಾರಾಂಗನೆಗೆ ಆ ಯತಿಯನ್ನು ತೋರಿಸಿ ನೀನು ಈತನನ್ನು ವರಿಸುವೆಯಾ ? ಎಂದು ಕೇಳಲು, ಈತನನ್ನು ವಶ ಮಾಡಿಕೊಂಡು ಮಗನನ್ನು ಪಡೆದು ಬರುತ್ತೇನೆಂದು ಆಕೆಯು ಹೇಳಿ, ಅದರಂತೆಯೇ ಯತಿಯನ್ನು ವಶಮಾಡಿಕೊಂಡು, ಅವನಿಂದ ಮಗನನ್ನು ಹೆರುವಳು, ಒಂದು ದಿನ ವಿರೂಪಾಕ್ಷ ರಥೋತ್ಸವಕ್ಕೆ ಪದ್ಮಾವತಿಯು ಆ ತನ್ನ ನಾಯಕನೊಡನೆ ಕೂಡಿ ಬರುವಳು. ಆಗ ಮಗನನ್ನು ಅವನ ಕೈಗೆ ಕೊಟ್ಟು, ಅಲ್ಲಿಗೆ ಬಂದಿದ್ದ ದೊರೆಗೆ ತನ್ನ ವಲ್ಲಭನನ್ನು ತೋರಿಸಿ, ಈತನೇ ಬತ್ತಲೆಯೋಗೀಶ್ವರನೆಂದು ಹೇಳುವಳು. ಆಗ ಯತಿಯು ಇನ್ನು ನಾವಿಲ್ಲಿರಬಾರದೆಂದು ಮಗುವನ್ನು ಆಕಾಶಕ್ಕೆಸೆದು ತಾನೂ ಬಯಲಾಗು ವನು. ಚಾಢರಾಯನ ಗುರುವಾದ ಬಸವೇಶನು ವಾದದಲ್ಲಿ ಗೆದ್ದು ಅಲ್ಲಿನ ಶಾರದಾಪೀಠವನ್ನು ಏರಿ, ಅಲ್ಲಿಂದ ರಾಜನರಮನೆಗೆ ಬಂದು ಸುಖವಾಗಿರು ತಿರಲು, ಒಬ್ಬ ಯೋಗೀಶನು ಆಕಾಶಸಂಚಾರಿಯಾಗಿ ದೊರೆಯ ಕಣ್ಣಿಗೆ ಗೋಚರಿಸಲು, ಆತನು ಅತ್ಯಾಶರಪಟ್ಟನು. ಅವನ ಭಾವವನ್ನು ಗುರು ಬಸವೇಶನು ತಿಳಿದು, ತನ್ನ ಕ್ರಿಯಾಸಿದ್ದಿ ಯ ಬಲದಿಂದ ಆ ಯೋಗೀಶನಿ ಗಿಂತಲೂ ಮೇಲಾಗಿ ಆಕಾಶದಲ್ಲಿ ವಿಹರಿಸುತ್ತ, ರಾಗಾಲಾಪಗಳನ್ನು ಮಾ ಡುತ್ತ ಇದ್ದು , ಬಯಲಾಗುವನು, ನಿರಾಣಿಬೋಳೇಶನೆಂಬುವನು ನಾನಾ ಮಹಿಮೆಗಳನ್ನು ತೋರಿಸಿ, ಆಲದ ಮರದ ಜಡೆಯನ್ನು ಹಿಡಿದು ಜೋ ಲುತ್ತ, ಶಿವಯೋಗನಿಷ್ಠನಾಗಿರಲು, ಅಲ್ಲಿನ ಭಕ್ತಜನರು ಈತನು ಅಳಿದ ನೆಂದು ಯೋಚಿಸಿ, ಅವನ ದೇಹವನ್ನು ಹಿಡಿದು ಎಳೆಯಲು, ಅಲ್ಲೇ ಬ ಯಲಾಗುವನು, ಪರಪಟ್ಟ ಯೆಂಬ ನಿರತನು ಹುಚ್ಚನಂತೆ ಮಕ್ಕಳೊಡನ ಆಡಿಕೊಂಡಿರಲು, ದೊರೆಯು ಅವನ ರೀತಿಯನ್ನು ನೋಡಿ, ಈತನು ಪರ ಮಶಿವಯೋಗಿಯಾಗಿರಬಹುದೆಂದು ಊಹಿಸಲು, ತನ್ನ ಇರವನ್ನು ರಾಜ ನು ಅರಿತನೆಂದು ತಿಳಿದು ವಿರತನು ಬಯಲಾಗುವನು, ಹೀಗೆ ನೂರೊಂದು ಮಂದಿ ವಿರತರೂ ಭೂಮಿಯಲ್ಲಿದ್ದು ನಿರಾಣವನ್ನೆದುವರು, ಇವರಲ್ಲದೆ ಮೊಗ್ಗೆಯ ಮಾಯಿದೇವಪ್ರಭುವು ಸಕಲ ಪದ್ಮಲತರಹಸ್ಯವನ್ನೂ 58 ವ