ಪುಟ:ಚೆನ್ನ ಬಸವೇಶವಿಜಯಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯಂ [ಅಧ್ಯಾಯ ಯು ಮೊದಲಿದ್ದಂತೆ ಆಗಲೆಂದು ಅಪ್ಪಣೆ ಮಾಡಿದನು. ಥಟ್ಟನೆ ಹೊಸಕ ಟ್ಟಡದಂತೆ ಮನೋಹರವಾಗಿ ಶೋಭಿಸಿತು. ಬಿಜ್ಜಳರಾಜನು ಈ ಮಹ ತ್ಯವನ್ನು ಕೇಳಿ, ಬಂದು, ಆ ಮನೆಯನ್ನು ನೋಡಿ ಆಶ್ಚಪಟ್ಟು, ಬಸ ವೇಶನೊಡನೆ “ ನಿನ್ನ ಅಳಿಯನ ಮಹತ್ವವು ಘನತರವಾದುದು ” ಎಂದು ಹೊಗಳ, ಚೆನ್ನಬಸವೇಶನ ಪಾದಕ್ಕೆ ನಮಸ್ಕರಿಸಿ, ಅಪ್ಪಣೆಯನ್ನು ಪಡೆದು ಅರಮನೆಗೆ ಹೋದನು. ಇತ್ತ ಬಸವೇಶ ಚೆನ್ನಬಸವೇಶರೀರರೂ ಸುಖ ದಿಂದಿದ್ದರು. ಬಸವೇಶನ ಭಕ್ತಿಯನ್ನೂ ಮಹಿಮಾತಿಶಯವನ್ನೂ ಕಿವಿಯಿಂದ ಕೇಳಿದ್ದ ಒಬ್ಬ ಜಂಗಮಶ್ರೇಷ್ಠನು ಆತನನ್ನು ಪ್ರತ್ಯಕ್ಷವಾಗಿ ದರ್ಶನ ಡಬೇಕೆಂದು ಒಂದು ದಿವಸ ಅವರ ಮನೆಗೆ ಬಂದನು. ಕಾವಲುಗಾರನು ಕಾಣುವುದಕ್ಕೆ ಈಗ ಸಮಯವಿಲ್ಲವೆಂದು ತಡೆದನು. ಜಂಗವನು ನನ ಸ್ಪಿನಲ್ಲಿ ನೊಂದುಕೊಂಡು ಹಿಂತಿರುಗಿ ತ್ರಿಪುರಾಂತಕೆ ಶರದೇವಾಲಯಕೆ, ಹೋಗಿ ಕುಳಿತುಕೊಂಡನು, ಅಹ್ಮರಲ್ಲಿ ಬಿಜ್ಜಳರಾಜನು ಏನೋ ಒಂದು ಕಾರಾರ್ಥವಾಗಿ ಬಸವೇಶನನ್ನು ಕರೆದುಕಳುಹಿಸಿದನು. ಅದನ್ನು ಬಸ ವೇಶನಿಗೆ ಅರುಹುವುದಕ್ಕಾಗಿ ಒಳಹೊಕ್ಕ ದ್ವಾರಪಾಲಕನು ಬಸವೇಶನು ಮಲಗಿರುವುದನ್ನು ನೋಡಿ, ಇಷ್ಟು ಹೊತ್ತೇಕೆ ಮಲಗಿದರೆಂದು ಆಗ್ಧ ಪಟ್ಟು ಎಬ್ಬಿಸಲು, ಉಸುರಾಡದೆ ಡಿಂಬವಾತ್ರವಾಗಿರುವುದನ್ನು ಕಂಡು ಗೋ೪ಟ್ಟನು, ಅರಮನೆಯವರೆಲ್ಲರೂ ಓಹೋ ಏನೋ ಮೋಸ ನಡೆ ದಿತೆಂದು ಕೋಲಾಹಲವನ್ನು ಮಾಡಿದರು, ಹೋಗಿದ್ದ ದೂತನು ಕಂಡ ಸಂಗತಿಯನ್ನು ರಾಜನೊಡನೆ ಬಿನ್ನೆ ನಿದನು. ಬಿಜ್ಜಳರಾಜನು ಬೆರಗಾಗಿ ಥಟ್ಟನೆದ್ದು ಕಾಲ್ನಡಿಗೆಯಲ್ಲಿ ಬಸವರಾಜನ ಮನೆಗೆ ಬಂದನು, ಅಹ್ಮ, ರಲ್ಲಿ ಚೆನ್ನಬಸವೇಶನು ಜ್ಞಾನದೃಷ್ಟಿಯಿಂದ ನಡೆದಿರುವ ಸಂಗತಿ ಯೇನೆಂ ಬುದನ್ನು ಪರಿಭಾವಿಸಿಕೊಂಡು, ಬಸವಣ್ಣನರಮನೆಗೆ ಬಂದನು. ಸಕಲ ಗಣಸಮೂಹವೂ ಬಂದು ಸೇರಿತು. ಆಗ ಬಿಜ್ಜಳನು ಜನದ ಕೊಲಾಪ ಲವನ್ನು ನಿಲ್ಲಿಸಿ, ಬಸವೇಶನಿಗೆ ಹೀಗೆ ನಿಪ್ಪಾರಣವಾಗಿ ಅಕಸ್ಮಾತ್‌ ಮರಣ ವೆಂತಾಯ್ತಂದು ಚೆನ್ನಬಸವೇಶನನ್ನು ಕೇಳವನು, ಅದಕ್ಕಾತನು-ಬಾಗಿ ಲಿಗೆ ಬಂದ ಜಂಗಮವನ್ನು ಕಾವಲುಗಾರನು ತಡೆದಟ್ಟಿದುದರಿಂದ ಆ ಜಂಗ