ಪುಟ:ಚೆನ್ನ ಬಸವೇಶವಿಜಯಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈವಸ್ಸಕಮಬೋಧೆ ಮಹೋಲೋಕ ಜನರ್ಲೋಕ ತಪೊಲೋಕ ಸತ್ಯಲೋಕವೆಂಬ ಏಳು ಊರ್ಧಲೋಕಗಳೂ, ಆತನ ದೇಹಕಾಂತಿಯಿಂದ ಸಪ್ಪಸಮುದ್ರಗಳೂ, ಕಿವಿಯಿಂದ ದಶದಿಕ್ಕುಗಳೂ, ಪಾದದ ಗಿಣ್ಣುಗಳಿಂದ ಸಕಲ ಸರತಗಳೂ ಮುಖದಿಂದ ರುದ್ರನೂ, ಎಡದೋ೪ನಿಂದ ವಿಷ್ಣು ವೂ, ಬಲತೊಡೆಯಿಂದ ಬ್ರಹ್ಮನೂ, ಪಾದದಿಂದ ದೇವೇಂದ್ರನೂ, ಮನಸ್ಸಿನಿಂದ ಚಂದ್ರನೂ, ಕ ಣ್ಣಿನಿಂದ ಸೂದ್ಧನೂ, ಉಗುರಿನಿಂದ ದ್ವಾದಶಾದಿತ್ಯರೂ, ಹೆಕ್ಕತ್ತಿನಲ್ಲಿ ಸ ಪರ್ಷಿಗಳೂ, ಎದೆಯಲ್ಲಿ ನಕ್ಷತ್ರಗಳ, ಹಣೆಯಲ್ಲಿ ಏಕಾದಶರುದ್ರರೂ, ವರಲುಗಳಿಂದ ನವಬ್ರಹ್ಮರುಗಳ, ಎರಡು ಪಕ್ಕೆಗಳಲ್ಲಿ ೧೪ ಮಂದಿ ಇಂ ದರಗಳ, ಬೆರಲಸಂದಿಗಳಿಂದ ನಾನಾ ಶಕ್ತಿಯರುಗಳೂ, ಅಂಗೈಯಿಂ ದ ೧೪ ಮಂದಿ ಮನುಗಳೂ, ಆತನ ವಾಕ್ಕಿನಿಂದ ವೇದಾಗಮಪುರಾಣಶಾ ಈಾವಿಗಳ, ಆತನ ಸಂತೋಷಬಾಪ್ಪದಿಂದ ಸಕಲ ನದಿಗಳೂ, ಆತನ ತಪಸ್ಸಿನಿಂದ ಗರುಡ ಗಾಂಧರ ಕಿನ್ನರ ಕಿಂಪುರುಷ ಸಿದ್ದ ವಿದ್ಯಾಧ ರಾದಿ ತಿಳಿ ಕೋಟಿ ದೇವತೆಗಳೂ, ಆತನ ರೋಮಕೂಪಗಳಿಂದ ೬೬ ಕಟ ರಾಕ್ಷಸರುಗಳ, ಆತನ ಅವಯವದಿಂದ ನಾಗಕನ್ನಿಕೆಯರು ಮೊದಲಾದ ಇತರ ನಾನಾ ಜನಗಳೂ, ಆತನ ಕಪೋಲಗಳಿಂದ ಅಹ್ಮದಿ ಕ್ಯಾಲಕರೂ ಅಷ್ಟವಸುಗಳೂ, ಪಾದದ ಬೆರಲುಗಳಿಂದ ಮೃಗಪಕ್ಷಿಜಲ ಇತರಾದಿಗಳೂ, ಆ ಬೆರಲುಗಳ ಕೆಳ ಭಾಗದಿಂದ ಮರ ಬಳ್ಳಿ ಮೊದಲಾದು ವುಗಳ, ಆತನ ಕೌಂಕುಳಿನಿಂದ ಸಕಲ ವಿಧದ ಪಶುಗಳೂ, ಸಹ ಹುಟ್ಟಿ ರುವುವು. ಅದು ಕಾರಣ, ಈ ಚರಾಚರಾತ್ಮಕವಾದ ಪ್ರಪಂಚದ ಉತ್ಪ ಗೆಲ್ಲ ಆ ಮಹೇಶ್ವರನೇ ಕಾರಣನಾಗಿರುವನು. ಬಳಿಕ ಪ್ರಳಯಕಾ ಲದಲ್ಲಿ ಆ ಮಹೇಶ್ವರನೇ ಗಣಸಮೂಹಮಧ್ಯದಲ್ಲಿ ಲೀಲೆಯಿಂದ ಪಟುತರ ವಾದ ತಾಂಡವವನ್ನು ಮಾಡಿ ಪ್ರಳಯವನ್ನುಂಟುಮಾಡಿದನು. ಅವನಿಂ ದುತ್ಪನ್ನರಾಗಿದ್ದ ವಿಷ್ಣು ಬ್ರಹ್ಮಾದಿಗಳ ಗಿರಿ ನದೀ ತರು ಖಗಮೃಗಾದಿ ಪ್ರಪಂಚವೆಲ್ಲವೂ ಭೀಕರವಾದ ಅವನ ಮಹಾನಾಟ್ಟದಿಂದ ನಷ್ಟವಾಗಿ ನಿರಾಕಾರವನ್ನೆ ದಿದುವು, ಸಮುದ್ರದಲ್ಲಿ ನೀರಿನ ಮಸಕದಿಂದುಂಟಾ ಗಿದ್ದ ನೊರೆ ಗುಳ್ಳೆಗಳೆಲ್ಲವೂ ತೆರೆಯ ಹೊಡೆತದಿಂದ ನಷ್ಯವಾಗುವಹಾಗೆ ಮಹೇಶನಿಂದುತ್ಪನ್ನವಾದ ಈ ಸ್ಫೂಲಪ್ರಪಂಚವೆಲ್ಲವೂ ಅವನ ಗಿರನೆ