ಪುಟ:ಚೆಲುವು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಊರಿಗಾಗಿ ಜೀವವಿತ್ತ ವೀರನೆಂದು ಗ್ರಾಮವೆ ಸೇರಿ ಮೆಚ್ಚಿ ಅತ್ತು ಮರುಗಿ; ಶೂರನೆಂದು ಹಾತಿ, ಹೂವ ಹಾರಗಳನ್ನು ಹೇರಿ, ಬಳಿಯ ಊರುಗಳಲಿ ಹೊಗಳಿ ಮೆರೆಸಿ ; ಇಲ್ಲಿ ಮಣ್ಣು ಮಾಡಿ, ಹೆಸರು ನಿಲ್ಲಲೆಂದು ಕತೆಯ ಕೆತ್ತಿ, ಕಲ್ಲ ನೆಲಸಿ, ಒಲವಗುಡಿಯ ಅಂದೆ ಸಮೆದರು. ಒಡಲ ಮುರುಕು ಮನೆಯೊಳಸುವ ಸೊಡರು ಗಾಳಿ ಮಳೆಯೊಳೆಂದೊ ಕೆಡುವುದೆಂದು ಅರಿವೆವೆಲ್ಲ ; ನಡುವೆ ಒಮ್ಮೆ ಅದನು ಜಗದ ಒಡೆಯಗಾರತಿಯನು ಬೆಳಗೆ ಕೊಡುವ ಸಮಯ ಬಹುದು ಪುಣ್ಯ ; ಇಂಥ ವೇಳೆ ಬಹಳ ಜೀವ ಹಿಂತೆಗೆವುದು ; ಭೀತಿಯುಳಿದು ನಿಂತು ಕೊಡುವ ಧೃತಿ ಒದಗುವ ಪುಣ್ಯಮಿಕ್ಕುದು. ೧೭